ಹಾಸನದಲ್ಲಿ ಆಪರೇಷನ್ ಎಲಿಫೆಂಟ್ ಆರಂಭ

Public TV
1 Min Read
hsn ane

ಹಾಸನ: ಜಿಲ್ಲೆಯ ಅಡವಿಬಂಟೇನಹಳ್ಳಿಯಲ್ಲಿ ಕಾಡಿನಿಂದ ನಾಡಿಗೆ ಬಂದಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಆರಂಭವಾಗಿದೆ.

ಹಾಸನ ನಗರ ಹಾಗೂ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡ ಆನೆ ಅಲ್ಲಿನ ಜನರಿಗೆ ಆತಂಕ ಹುಟ್ಟಿಸಿತ್ತು. ಕಳೆದ ಒಂದು ತಿಂಗಳಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಒಂಟಿ ಸಲಗವನ್ನು ಸೆರೆಹಿಡಿದು ಕಾಡಿಗಟ್ಟಲು ಕಾರ್ಯಾಚರಣೆ ಆರಂಭವಾಗಿದೆ.

hsn ane2

ಸಲಗನ ಸೆರೆಗೆ ಅನುಮತಿ ಸಿಕ್ಕ ಕೂಡಲೇ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಪ್ರಾರಂಭ ಮಾಡಿದ್ದು, ಅಭಿಮನ್ಯು, ಕೃಷ್ಣ, ಅಜೇಯ, ವಿಕ್ರಂ ಮತ್ತು ಹರ್ಷ ಎಂಬ ಐದು ಸಾಕಾನೆಗಳೊಂದಿಗೆ ಇಲಾಖೆ ಸಿಬ್ಬಂದಿ ಸೇರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಕಾನೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *