ಪಾಟ್ನಾ: ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದಿದ್ದ ನಾಲ್ವರಲ್ಲಿ ಮೂವರನ್ನು ಹಿಡಿದು, ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಲೆ ಮಾಡಿದ ಘಟನೆ ಬಿಹಾರ ಬೇಗುಸಾರೈ ಜಿಲ್ಲೆಯಲ್ಲಿ ನಡೆದಿದೆ.
ಬೇಗುಸಾರೈ ಜಿಲ್ಲೆಯ ಮುಖೇಶ್ ಮಾಹ್ತೊ, ಬೌನಾ ಸಿಂಗ್ ಹಾಗೂ ಸಮಸ್ತಿಪುರ್ ಸಮೀಪ ರೋಸೆರಾ ಗ್ರಾಮದ ಹೀರಾ ಸಿಂಗ್ ಮೃತ ದುರ್ದೈವಿಗಳು.
Three criminals died after they were beaten up school teachers and villagers when they had entered a school premises to kidnap a student: Aditya Kumar, Begusarai Superintendent of Police #Bihar
— ANI (@ANI) September 7, 2018
ನಡೆದದ್ದು ಏನು?
ಹೊಸದಾಗಿ ಪ್ರಾರಂಭವಾಗಿದ್ದ ನಾರಾಯಣಿಪಾರ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಾಲ್ವರು ನುಗ್ಗಿದ್ದು, ಬಾಲಕಿಯೊಬ್ಬಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅವರಿಗೆ ಹೆದರಿ ಯಾರು ಮಾಹಿತಿ ನೀಡದಿದ್ದಾಗ ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕಿದ್ದಾರೆ. ಅವರ ಕೈಗೆ ಬಾಲಕಿ ಸಿಗುತ್ತಿದ್ದಂತೆ ಆಕೆಯನ್ನು ಅಪಹರಿಸಲು ಮುಂದಾಗಿದ್ದರು. ಇದರಿಂದಾಗಿ ಗಾಬರಿಗೊಂಡು ಮಕ್ಕಳು ಕಿರುಚಲು ಪ್ರಾರಂಭಿಸಿದ್ದಾರೆ.
ಹುಲ್ಲು ಕೊಯ್ದುಕೊಂಡು ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬಳು ಶಾಲೆಯಲ್ಲಿ ಮಕ್ಕಳು ಅಳುವ ಧ್ವನಿ ಕೇಳಿಸಿಕೊಂಡಿದ್ದು, ತಕ್ಷಣವೇ ಗ್ರಾಮಸ್ಥರನ್ನು ಕೂಗಿ ಕರೆದಿದ್ದಾರೆ. ಗ್ರಾಮಸ್ಥರು ಶಾಲೆಗೆ ಬರುತ್ತಿದ್ದಂತೆ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದರು. ಆದರೆ ನಾಲ್ವರಲ್ಲಿ ಒಬ್ಬ ಮಾತ್ರ ತಪ್ಪಿಸಿಕೊಂಡು ಹೋಗಿದ್ದು, ಉಳಿದ ಮೂವರು ಗ್ರಾಮಸ್ಥರ ಕೈಗೆ ಸಿಕ್ಕಿದ್ದರು.
20ಕ್ಕೂ ಹೆಚ್ಚು ಜನರು ಕೋಲು ಹಿಡಿದು, ಬಂಧಿಸಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv