ತಂಗಿಗೆ ರಾಖಿ ಗಿಫ್ಟ್ ಕೊಟ್ಟ ಅಣ್ಣ – ಪತ್ನಿಯಿಂದ ಆತ್ಮಹತ್ಯೆ ಯತ್ನ

Public TV
1 Min Read
RAKHI GIFT

ಲಕ್ನೋ: ಸಹೋದರನೊಬ್ಬ ರಕ್ಷಾಬಂಧನದ ಪ್ರಯುಕ್ತ ತಂಗಿಗಾಗಿ ಉಡುಗೊರೆ ನೀಡಿದ್ದಕ್ಕಾಗಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಆಶಿಶ್ ಸಹೋದರಿಗೆ ಗಿಫ್ಟ್ ಕೊಟ್ಟ ಅಣ್ಣ. ತಂಗಿಗೆ ಗಿಫ್ಟ್ ಕೊಟ್ಟಿದ್ದಕ್ಕೆ ಪತ್ನಿ ಕವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಶಿಶ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಪೋಷಕರ ಜತೆ ಕಾನ್ಪುರದ ಗೋವಿಂದ ನಗರದಲ್ಲಿ ವಾಸವಾಗಿದ್ದಾರೆ.

ಭಾನುವಾರ ರಕ್ಷಾ ಬಂಧನ ಇದ್ದ ಕಾರಣ ಆಶಿಶ್ ಸಹೋದರಿ ಮನೆಗೆ ಬಂದಿದ್ದಾರೆ. ನಂತರ ಅಣ್ಣನ ಕೈಗೆ ರಾಖಿ ಕಟ್ಟಿದ್ದಾರೆ. ರಾಖಿ ಕಟ್ಟಿದ ಸಹೋದರಿಗೆ ಉಡಗೊರೆಯಾಗಿ ಆಶಿಶ್ 2,000 ರೂ. ನೀಡಿದ್ದಾರೆ. ಇದರಿಂದ ಕೋಪಗೊಂಡ ಪತ್ನಿ ರೂಮಿಗೆ ಹೋಗಿ ಲಾಕ್ ಮಾಡಿಕೊಂಡು ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣ ಪತಿ ಆಶಿಶ್ ನೋಡಿ ಆಕೆಯನ್ನು ರಕ್ಷಿಸಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

rakhi

ಪತ್ನಿ ಕವಿತಾ ತನ್ನ ಪತಿ ಸಹೋದರಿಗೆ 2 ಸಾವಿರ ರೂ. ಹಣ ನೀಡಿದ್ದಕ್ಕೆ ಬೇಸರಗೊಂಡು ಪತಿ ಆಶಿಶ್ ಜೊತೆ ಜಗಳವಾಡಿಕೊಂಡು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಬಳಿಕ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ನೋಡಿದ ಆಶಿಶ್ ಬಾಗಿಲು ಮುಗಿದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ವೈದ್ಯರು ಕವಿತಾ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಗೋವಿಂದನಗರದ ಸ್ಟೇಷನ್ ಹೌಸ್ ಆಫೀಸರ್ ಸಂಜೀವ್ ಕಾಂತ್ ಮಿಶ್ರಾ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *