ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

Public TV
2 Min Read
UDP DAIVA 2

ಉಡುಪಿ: ಶಿರೂರು ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರಿಗೆ ವ್ಯವಹಾರದಲ್ಲಿ 26 ಕೋಟಿ ರೂಪಾಯಿ ಮೋಸ ಆಗಿದ್ಯಂತೆ. ಈ ಕುರಿತು ಸ್ವತಃ ಶಿರೂರು ಸ್ವಾಮೀಜಿ ಅವರೇ ದೈವದ ಮುಂದೆ ದೂರು ಕೊಟ್ಟಿದ್ದರು. ಈ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ.

ಶಿರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸ್ವಾಮೀಜಿಗೆ ಇಬ್ಬರು ಉದ್ಯಮಿಗಳಿಂದ ಮೋಸ ಆಗಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಉದ್ಯಮಿಗಳ ವಿರುದ್ಧ ಕೋಟಿ ಚೆನ್ನಯ್ಯರಿಗೆ ದೂರು ನೀಡಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಹಿರಿಯಡ್ಕದಲ್ಲಿ ನಡೆದ ಗರೊಡಿಯಲ್ಲಿ ಶಿರೂರು ಸ್ವಾಮೀಜಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೈವ ನುಡಿ ಕೊಡುವ ವೇಳೆ ಸ್ವಾಮೀಜಿ ತಮ್ಮ ನೋವು ತೋಡಿಕೊಂಡಿದ್ದರು. ಇಬ್ಬರು ಉದ್ಯಮಿಗಳಿಂದ ನನಗೆ ಮೋಸವಾಗಿದೆ. ಒಬ್ಬ 12 ಕೋಟಿ, ಮತ್ತೊಬ್ಬ 14 ಕೋಟಿ ರೂ. ಮೋಸವಾಗಿದೆ. ನನ್ನ ಇತರೆ ನೋವನ್ನೆಲ್ಲ ಪಕ್ಕಕ್ಕೆ ಸರಿಸಿ ಬದುಕುತ್ತಿದ್ದೇನೆ. ಈಗ ಹಣಕಾಸಿನ ವಿಚಾರದಲ್ಲೂ ಮೋಸವಾಗಿದೆ ಅಂತ ಸ್ವಾಮೀಜಿ ದೂರಿದ್ದಾರೆ. ನಿನ್ನ ಕಾರಣಿಕದಿಂದ ಹಣ ತರಿಸಿಕೊಡು ಅಂತ ಕೋಟಿ ಚೆನ್ನಯ್ಯರ ಮುಂದೆ ಸಮಸ್ಯೆ ತೋಡಿಕೊಂಡಿದ್ದರು. ಸ್ವಾಮೀಜಿಗೆ ವ್ಯವಹಾರದಲ್ಲೂ ಕೋಟ್ಯಾಂತರ ರೂಪಾಯಿ ಮೋಸವಾಗಿದೆ ಎಂಬೂದು ಈ ವಿಡಿಯೋ ಮೂಲಕ ಸಾಬೀತಾಗಿದೆ.

ಕೊಡಮಣಿತ್ತಾಯ ಶಾಪ?:
ಇದಕ್ಕೂ ಮೊದಲು ಅಂದ್ರೆ 5 ವರ್ಷದ ಹಿಂದೆ ಸ್ವಾಮೀಜಿಯವರು ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದ್ದು, ಆ ದೈವದ ಶಾಪದಿಂದಲೇ ಸ್ವಾಮೀಜಿ ವಿಧಿವಶರಾಗಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದರು.

ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು. ಸದ್ಯ ಇದೀಗ ಈ ವೀಡಿಯೋ ಕೂಡ ಬಹು ಚರ್ಚಿತ ವಿಷಯವಾಗಿದೆ.

Share This Article
1 Comment

Leave a Reply

Your email address will not be published. Required fields are marked *