ಶಾಸಕ ಆನಂದಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ಬಂಧನ

Public TV
1 Min Read
Anand Singh11

ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸ್ ಕಳೆದ ಹಲವಾರು ದಿನಗಳಿಂದ ಶಾಸಕ ಆನಂದಸಿಂಗ್ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದನು. ಆನಂದಸಿಂಗ್ ಕೇವಲ ಮುಸ್ಲಿಂ ಸಮುದಾಯದ ಜನರ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ ಅಂತಾ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುತ್ತಿದ್ದನು. ಹೀಗಾಗಿ ಆರೋಪಿ ಶ್ರೀನಿವಾಸ್ ವಿರುದ್ಧ ಆನಂದ್ ಸಿಂಗ್ ಸಂಬಂಧಿ ಸಂದೀಪ್ ಸಿಂಗ್  ದೂರು ದಾಖಲು ಮಾಡಿದ್ದರು.

ದೂರಿನ ಆಧಾರದ ಮೇರೆಗೆ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಆರೋಪಿ ಶ್ರೀನಿವಾಸ್ ಆನಂದ್ ಸಿಂಗ್ ವಿರುದ್ಧ ಮಾಡಿದ ಪೋಸ್ಟ್ ಗೆ ಹಲವರು ಪರ ಹಾಗೂ ವಿರೋಧವಾಗಿ ಕಮೆಂಟ್ ಮಾಡಿದ್ದವರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ.

ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *