ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪ್ರೇಯಸಿಯ ಕುತ್ತಿಗೆಯನ್ನೇ ಕತ್ತರಿಸಿದ!

Public TV
1 Min Read
knife

ಹೈದರಾಬಾದ್: ಪ್ರಿಯಕರನೊಬ್ಬ ತನ್ನ ಗೆಳತಿಯ ಗಂಟಲನ್ನು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಶಂಕರಪಲ್ಲಿಯಲ್ಲಿ ನಡೆದಿದೆ.

ಶಂಕರಪಲ್ಲಿಯ ಪ್ರಗತಿ ರೆಸಾರ್ಟ್ ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪೀರ್ಲಗುಡೆಮ್ ಶಿರೆಷಾ ಮೃತ ದುರ್ದೈವಿ. ಆರೋಪಿ ರಾಯ್ಯಲಾ ಸೈಪ್ರಸಾದ್ (22) ಎಂದು ತಿಳಿದು ಬಂದಿದ್ದು, ಸದ್ಯಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಶಿರೆಷಾಳ ದೇಹದಲ್ಲಿ ಸುಮಾರು 12 ಕ್ಕಿಂತ ಹೆಚ್ಚು ಗಾಯಗಳಾಗಿದ್ದು, ಬಹುಶಃ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಮೃತಪಟ್ಟಿದ್ದಾರೆ. ಆರೋಪಿಗೂ ಕೂಡ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ವಿವರ?: ಇಬ್ಬರು ಕೋಥೂರಿನವಾಗಿದ್ದು, ಮೊದಲು ಸ್ನೇಹಿತರಾಗಿ ನಂತರ ಡೇಟಿಂಗ್ ಪ್ರಾರಂಭಿಸಿದ್ದರು. ಶಿರೆಷಾ ಪದವಿ ಮಾಡಿದ್ದು, ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ ದಿಲ್ಸುಖ್ ನರದಲ್ಲಿನ ಖಾಸಗಿ ಕೋಚಿಂಗ್ ಇನ್ಸ್ ಸ್ಟಿಟ್ಯೂಟ್ ಗೆ ಹೋಗುತ್ತಿದ್ದರು. ಶಿರೆಷಾ ಕುಟುಂಬದವರಿಗೆ ಸೈಪ್ರಸಾದ್ ಬಗ್ಗೆ ತಿಳಿದ ನಂತರ ಆತನಿಂದ ದೂರವಿರಲು ಹೇಳಿದ್ದಾರೆ.

ಇಬ್ಬರು ಗುರುವಾರ ಮಾತನಾಡಬೇಕು ಎಂದು ಶಮ್ಶಾಬಾದ್ ನಲ್ಲಿ ಭೇಟಿಯಾಗಿ ಮೆಹಡಿಪಟ್ಟನಂ ಗೆ ಹೋಗಿದ್ದಾರೆ. ಅಲ್ಲಿಂದ ಪ್ರಗತಿ ರೆಸಾರ್ಟ್ ಗೆ ಹೋಗಿದ್ದಾರೆ. ರೆಸಾರ್ಟ್ ನಲ್ಲಿ ಮದುವೆಯ ಬಗ್ಗ ಕುರಿತು ಚರ್ಚೆ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುತಿ ಸೈಪ್ರಸಾದ್ ಕೋಪಗೊಂಡು ಶಿರೆಷಾಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

Arrest 1

ಈ ವೇಳೆ ಆರೋಪಿಯ ಸಹೋದರಿ ಆತನಿಗೆ ಫೋನ್ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದಾರೆ. ಆಗ ಆತ ಪ್ರೇಮಿಯನ್ನು ಹೇಗೆ ಕೊಂದಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಭಯಗೊಂಡ ಸಹೋದರಿ ರೆಸಾರ್ಟ್ ಸಿಬ್ಬಂದಿಗೆ ತಿಳಿಸಿದ್ದಾರೆ.

ಸಿಬ್ಬಂದಿ ರೂಮಿಗೆ ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿರೆಷಾಳನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಾಲಾಜಿ ದೇವಸ್ಥಾನದ ಬಳಿ ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *