ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ

Public TV
1 Min Read
CM BSY Vijayendra

ಮೈಸೂರು: ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಯಾಕೆ ಅವರಪ್ಪ ಯಡಿಯೂರಪ್ಪ ಬೇಕಾದ್ರೆ ಬಂದು ಸ್ಪರ್ಧೆ ಮಾಡಲಿ ಅಂತಾ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಯಡಿಯೂರಪ್ಪಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರು ಬಂದ ತಕ್ಷಣ ಜನರು ಓಡೋಡಿ ಬರುವದಿಲ್ಲ. ನನ್ನ ಮಗ ಬಂದು ಚುನಾವಣೆಗೂ ನಿಂತರೂ ಸಿಎಂ ಮಗ ಅಂತಾ ವೋಟ್ ಹಾಕಲ್ಲ. ಸಿಎಂ ಆಗಿ ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆ. ಈ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನೇ ಹೊರತು ಯಡಿಯೂರಪ್ಪ ಅಲ್ಲ. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋಲ್ಲ. ಜನರಿಗೆ ಯಾರಿಗೆ ವೋಟ್ ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರು ಬೇಕಾದ್ರು ಎಲ್ಲೆಲ್ಲೋ ನಿಲ್ತಿದ್ರು ಅಂತಾ ಅಂದ್ರು.

vlcsnap 2018 04 02 13h41m58s080

ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ಕ್ಷೇತ್ರದ ಜನರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರೆಲ್ಲ ನನಗೆ ಮತ ಹಾಕ್ತಾರೆ ಅಂತ ನನಗೆ ವಿಶ್ವಾಸವಿದೆ. ಕ್ಷೇತ್ರದಲ್ಲಿ 5 ದಿನ ಪ್ರಚಾರ ನಡೆಸಿದ್ದೇನೆ. ನಾನು ಯಾವತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ದೂರ ಉಳಿದಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನ ಜಾಸ್ತಿ ಭೇಟಿ ಮಾಡ್ತಿದ್ದೆ. ಹಾಗಾಗಿ ಗೆಲ್ಲುವ ವಿಶ್ವಾಸ ನನಗಿದೆ ಅಂತಾ ಸಿಎಂ ಹೇಳಿದರು.

ನಾಳೆಯಿಂದ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡ್ತಿನಿ. ಮೈಸೂರು ಪ್ರವಾಸ ನಂತರ ರಾಜ್ಯ ಪ್ರವಾಸ ಕೈಗೊಳ್ಳುವುದರ ಜೊತೆಗೆ ವರುಣಾ ಕ್ಷೇತ್ರದ ಪ್ರಚಾರಕ್ಕೆ ಬರ್ತಿನಿ. ನಾಳೆಯಿಂದ ದಾವಣಗೆರೆ ಸೇರಿದಂತೆ ಹಲವೆಡೆ ಪ್ರಚಾರ ಮಾಡ್ತಿನಿ. 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *