Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕನ್ನಡ ಕಲಿಯೋದಿಲ್ವಾ: ಅಮಿತ್ ಶಾಗೆ ಸಿಎಂ ಪ್ರಶ್ನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕನ್ನಡ ಕಲಿಯೋದಿಲ್ವಾ: ಅಮಿತ್ ಶಾಗೆ ಸಿಎಂ ಪ್ರಶ್ನೆ

Bengaluru City

ಕನ್ನಡ ಕಲಿಯೋದಿಲ್ವಾ: ಅಮಿತ್ ಶಾಗೆ ಸಿಎಂ ಪ್ರಶ್ನೆ

Public TV
Last updated: November 21, 2017 9:34 pm
Public TV
Share
2 Min Read
cm siddaramaiah shaw
SHARE

ಬೆಂಗಳೂರು: ತಮಿಳು, ಬಂಗಾಳಿ ಭಾಷೆಯನ್ನು ಕಲಿಯುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಕನ್ನಡವನ್ನು ಕಲಿಯುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯನವರು ವೈಯಕ್ತಿಕ ಖಾತೆಯಿಂದ ಟ್ವೀಟ್ ಮಾಡಿ ಕನ್ನಡ ಕಲಿಯುವುದಿಲ್ವಾ ಅಮಿತ್ ಶಾ ಅವರೆ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಪರ ಮತ್ತು ವಿರೋಧ ಟ್ವೀಟ್‍ಗಳನ್ನು ಮಾಡಿ ಜನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶಾ ತಮಿಳು, ಬಂಗಾಳಿ ಕಲಿಯುತ್ತಿರುವುದು ಯಾಕೆ?
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಮತ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಣತಂತ್ರ ಹೂಡಿದ್ದಾರೆ. ಈ ಎರಡು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲೆಂದೇ ಅಮಿತ್ ಶಾ ತಮಿಳು ಹಾಗೂ ಬಂಗಾಳಿ ಭಾಷೆಗಳನ್ನು ಕಲಿಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲ ಕಡಿಮೆ ಇದ್ದು, ಪ್ರತಿ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಜಯಗಳಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಜಯಗಳಿಸುತ್ತಿವೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಕಮಲ ಅರಳಿಸಲು ಈಗ ಬಿಜೆಪಿಯ ಚುನಾವಣಾ ಚಾಣಕ್ಯ ಸಿದ್ಧತೆ ನಡೆಸುತ್ತಿದ್ದಾರೆ. ತವರು ರಾಜ್ಯವನ್ನು ಮತ್ತೊಮ್ಮೆ ಗೆಲ್ಲುವ ರಣತಂತ್ರದ ನಡುವೆಯೂ `ಭಾಷಾ’ ಅಧ್ಯಯನದಲ್ಲಿ ಅಮಿತ್ ಶಾ ಬ್ಯುಸಿಯಾಗಿರುವುದು ಇದೀಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ಎರಡು ರಾಜ್ಯಗಳಲ್ಲಿ ಮಾತೃಭಾಷೆಯಲ್ಲೇ ಜನರೊಂದಿಗೆ ವ್ಯವಹರಿಸಿದ್ರೆ ಚುನಾವಣೆಗೆ ಲಾಭ ಎನ್ನುವ ನಿಟ್ಟಿನಲ್ಲಿ ಶಾ ಈ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾ ಅಸ್ಸಾಂ, ಮಣಿಪುರ ಭಾಷೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ಒಟ್ಟಿನಲ್ಲಿ ಗುಜರಾತ್ ಚುನಾವಣೆಯ ಬ್ಯುಸಿ ನಡುವೆಯೂ ದಕ್ಷಿಣದತ್ತ ಅಮಿತ್ ಶಾ ಕಣ್ಣು ಹಾಕಿದ್ದಾರೆ.

ಈಗಾಗಲೇ ಶಾ ಅವರಿಗೆ ತಮಿಳು, ಬೆಂಗಾಳಿ, ಅಸ್ಸಾಂ ಹಾಗೂ ಮಣಿಪುರಿ ಭಾಷೆಗಳನ್ನು ಕಲಿಸಲು ವೃತ್ತಿಪರ ಶಿಕ್ಷಕರು ಆಯ್ಕೆಯಾಗಿದ್ದು, ಶಾ ತಮ್ಮ ಭಾಷಾ ಕಲಿಕೆಯನ್ನು ಮುಂದುವರಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರ ತರಗತಿಗಳು ನಡೆಯುತ್ತಿವೆ. ಸದ್ಯಕ್ಕೆ ಶಾ ಎರಡೂ ಭಾಷೆಗಳಲ್ಲಿ ಮಾತನಾಡುವಷ್ಟು ಕಲಿತಿದ್ದಾರೆ. ಆದರೆ ನಿರರ್ಗಳವಾಗಿ ಮಾತನಾಡಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ತಮಿಳುನಾಡು ಹಾಗೂ ಬಂಗಾಳ ರಾಜ್ಯದಲ್ಲೂ ಗೆದ್ದು, ಬಿಜೆಪಿ ಒಂದು ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಅಮಿತ್ ಶಾ ಈ ಉಪಾಯ ಹೂಡಿದ್ದಾರೆ. ಆಯಾ ರಾಜ್ಯದ ಭಾಷೆಯಲ್ಲೇ ಜನರೊಂದಿಗೆ ಮಾತನಾಡಿದ್ರೆ ಮಾತ್ರ ಜನ ಇನ್ನೂ ತಮ್ಮೊಂದಿಗೆ ಹತ್ತಿರವಾಗುತ್ತಾರೆ. ಹೀಗೆ ಮಾಡಿದ್ದಲ್ಲಿ ತಮ್ಮ ಪಕ್ಷಕ್ಕೆ ಜನ ಮತ ನೀಡಬಹುದೆಂಬ ಉದ್ದೇಶ ಅವರದ್ದಾಗಿದೆ.

ಕನ್ನಡ ಕಲಿಯೋದಿಲ್ವಾ @AmitShah ರವರೆ?

Won’t you learn Kannada? https://t.co/rxTA08E3RC

— Siddaramaiah (@siddaramaiah) November 21, 2017

Wanna bet bro?
Congress isn't coming back.

— lel (@u_w_u99) November 21, 2017

ರಾಗಾ ಮತ್ತು ಸೋಗಾ ಕನ್ನಡ ಗೊತ್ತಿರೋ ಸೌಟುಗಳ

— Manu (@manukumarsmk) November 21, 2017

He thought bjp has strong leaders in Karnataka so no need to learn kannada
But reality is😂😂😂

— Manu E Gowda (@MEGowdaB) November 21, 2017

ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕಲಿಸೋದಕ್ಕೆ ಹೇಳಿ. ಜೊತೆಗೆ ಆಲೂಗಡ್ಡಯಿಂದ ಚಿನ್ನ ಮಾಡೋ ಮಶೀನನ್ನೂ ಕೊಡಿಸಿ..

— Manu (@manukumarsmk) November 21, 2017

ಸರ್ ಸರಿಯಾಗಿ ಪಂಚ್ ಕೊಟ್ಟಿದಿರ ಶಾ ಗೆ.
ಹಾಗೆ ಇವರನ್ನ ಸ್ವಲ್ಪ ನೋಡಿ ಸರ್ ಕನ್ನಡದವರಾಗಿ ಬೆಳಗಾವಿಯಲ್ಲಿ ಮರಾಠಿಯಲ್ಲಿ ಪ್ರಚಾರ ಮಾಡಿದ್ದಾರೆ ಏನಾದರೂ ಬುದ್ದಿ ಹೇಳ್ತೀರಾ ಸರ್ ಇವ್ರಿಗೆ ಒಂದು ಸಲಾ ಕನ್ನಡ ಕ್ಲಾಸ್ ತಗೊಳಿ ಸರ್ ಆಗ ಬುದ್ದಿ ಬರತ್ತೆ ಇವ್ರಿಗೆ pic.twitter.com/9qjnsSrRLy

— Nishkama_Karma (@Nishkama_Karma1) November 21, 2017

https://twitter.com/winner2008/status/932995532326240256

https://twitter.com/kanwarlalbolo/status/932983862317039616

ಕರ್ನಾಟಕದಲ್ಲಿ ಬಿಜೆಪಿ ಬರೋದಿಲ್ಲ ಅನ್ನೋ ಕಾರಣಕ್ಕೆ ಕನ್ನಡ ಕಲಿಯೋದನ್ನ ಬಿಟ್ಟಿದ್ದಾರೆ.

— givemecrypto (@GanigerK) November 21, 2017

ಅಮಿತ್ ಶಾ ತಮಿಳ್ ಕಲಿತಾರಂತೆ ಅಂದಾಗಲು, ಬಿ.ಜೆ.ಪಿಗೆ ಹೆಚ್ಚು ಸೀಟ್ ಕೊಟ್ಟ ಕರ್ನಾಟಕದ ಬಿ.ಜೆ.ಪಿ ಅವರಿಗೆ ಬೇಸರ ಆಗಲ್ಲ ನೋಡಿ. ಶಿವ ಶಿವ.

— vijaya kumar (@vijayakls) November 21, 2017

ಅವರ ಆಟ ಇಲ್ಲಿ ನಡಿಯಲ್ಲಾ ಅನ್ನೋದು ಅವರಿಗೂ ಗೊತ್ತಾದಂತಿದೆ ಪಾಪ…
ಅವರು ಕಲಿಯುವುದು ಬೇಡ… ರಾಜ್ಯನ ಲೂಟಿ ಮಾಡಿ ಜೈಲಿಗೆ ಹೋಗಿ ಮತ್ತೇ ರಾಜ್ಯಕ್ಕೆ ಕಳಂಕ ತರುವುದೂ ಬೇಡ…
ಏನಾದರು ಮಾಡಿಕೊಳ್ಳಲಿ ಬಿಡಿ ಸಾರ್…

— Srinivas Sri² (@Srinivas557123) November 21, 2017

TAGGED:Amit ShahAssambjplanguageManipurPublic TVtamil naduWest Bengalಅಮಿತ್ ಶಾಅಸ್ಸಾಂತಮಿಳುನಾಡುಪಬ್ಲಿಕ್ ಟಿವಿಪಶ್ಚಿಮ ಬಂಗಾಳಬಿಜೆಪಿಭಾಷೆಮಣಿಪುರ
Share This Article
Facebook Whatsapp Whatsapp Telegram

Cinema news

Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood

You Might Also Like

arrest
Latest

ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಪಾಕ್‌ನ ಐಸಿಸ್‌, ಬಾಂಗ್ಲಾದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಅರೆಸ್ಟ್‌

Public TV
By Public TV
22 minutes ago
Mandya EX MLA Suresh Gowda Car Accident
Crime

ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ

Public TV
By Public TV
1 hour ago
IND vs SA
Cricket

ವಿಶ್ವಕಪ್ ಸೂಪರ್ 8ರಲ್ಲಿ ಇಂದಿನಿಂದ ಮಹಾಕದನ – ಸೂಪರ್ ಸಂಡೇಯಂದೇ ದಕ್ಷಿಣ ಆಫ್ರಿಕಾ v/s ಭಾರತ

Public TV
By Public TV
1 hour ago
pakistan Airstrikes In Afghanistan
Latest

ಅಫ್ಘಾನ್‌ ಮೇಲೆ ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿ – 12 ಮಕ್ಕಳು ಸೇರಿ ಒಂದೇ ಕುಟುಂಬದ 17 ಮಂದಿ ಸಾವು

Public TV
By Public TV
2 hours ago
Kamalakar Bhat
Crime

ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪೋಕ್ಸೊ ಕೇಸ್ ದಾಖಲು

Public TV
By Public TV
2 hours ago
Accident
Chitradurga

ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?