ಮನೆಯ ಆಧಾರಸ್ತಂಭ ವ್ಯಕ್ತಿಯ ಬಾಳಲ್ಲಿ ಆವರಿಸಿದ ಅಂಧಕಾರ

Public TV
1 Min Read
ckd belaku F

ಬೆಳಗಾವಿ: ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಮನೆಯನ್ನು ನಡೆಸುತ್ತಿದ್ದ ವ್ಯಕ್ತಿಯ ಬಾಳಲ್ಲಿ ಅಂಧಕಾರ ಮೂಡಿದ್ದು, ಬೆಳಕನ್ನು ಅರಸಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ನಿವಾಸಿ ನಿರಂಜನ ಶೇಡಬಾಳೆ ಇಂದು ಪಬ್ಲಿಕ್ ಟಿವಿಯ ಸಹಾಯ ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಿರಂಜನ್ 4 ವರ್ಷಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿ ತಮ್ಮ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು. ಆದರೆ ವಿಧಿಯ ಆಟ ಒಮ್ಮಿಂದೊಮ್ಮಲೇ ಇವರ ಬದುಕಿನಲ್ಲೇ ಕತ್ತಲೇ ಆವರಿಸಿ ಬಿಟ್ಟಿತು. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ತನ್ನ ಕಣ್ಣುಗಳ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಇವರ ಬಲಗಣ್ಣು ಸ್ವಲ್ಪಮಟ್ಟಿಗೆ ಕಾರ್ಯನಿರ್ವಹಿಸಿದರೂ ಸ್ಪಷ್ಟವಾಗಿ ಕಾಣುವುದಿಲ್ಲ.

ನಿರಂಜನ್ ಕಣ್ಣಿನ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಮನೆ ನಡೆಸಲು ನಿರಂಜನ ಪತ್ನಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ನಿರಂಜನ ಪತ್ನಿ ನೌಕರಿಗಾಗಿ ಇರುವ ಎರಡೂ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿ ವಾಸವಾಗಿದ್ದಾರೆ. ತಿಂಗಳಲ್ಲಿ ಎರಡೂ ಬಾರಿ ಮನೆಗೆ ಬಂದು ಹೋಗುತ್ತಾರೆ. ಹಾಗಾಗಿ ನಿರಂಜನ್ ಅವರು ಎಲ್ಲದಕ್ಕೂ ತಾಯಿಯನ್ನೇ ಅವಲಂಬಿತರಾಗಿದ್ದಾರೆ.

ನಾನು ಇರುವವರೆಗೂ ಮಗನನ್ನು ನೋಡಿಕೊಳ್ಳಬಹುದು ಮುಂದೆ ಇವನ ಪರಿಸ್ಥಿತಿ ಹೇಗಾಗಬಾರದು. ಹೀಗಾಗಿ ಇವನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ನಿರಂಜನ ತಾಯಿ ದುಃಖ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರೇ ದೃಷ್ಟಿ ಬರುವ ಸಾಧ್ಯತೆ ಇದೆ ಎಂದರೂ ಶಸ್ತ್ರ ಚಿಕಿತ್ಸೆಗೆ ನಮ್ಮ ಬಳಿ ಹಣ ಇಲ್ಲ ನಮಗೆ ಸಹಾಯ ಮಾಡಿ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ದುಡಿದು ಮನೆ ನಡೆಸಬೇಕಿದ್ದ ನಿರಂಜನ್ ಬಾಳಿನಲ್ಲಿ ಕತ್ತಲೆ ಆವರಿಸಿದೆ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಬೆಂಗಳೂರಿನ ವೈದ್ಯರು ದೃಷ್ಟಿ ಬರುವ ಭರವಸೆ ನೀಡಿರುವುದು ನಿರಂಜನ ಬಾಳಿನಲ್ಲಿ ಹೊಸ ಹುಮ್ಮಸ್ಸು ತಂದಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಇವರ ಬಾಳಿನಲ್ಲಿ ಬೆಳಕಿನ ಹೊಂಗಿರಣ ಚಿಮ್ಮಲಿ ಎನ್ನುವುದೇ ನಮ್ಮ ಆಶಯ.

ckd belaku 3

ckd belaku 1

Share This Article
Leave a Comment

Leave a Reply

Your email address will not be published. Required fields are marked *