Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನಟ ಸುದೀಪ್ ಭೇಟಿ ಬಳಿಕ ಪ್ರಥಮ್, ಭುವನ್ ಹೇಳಿದ್ದೇನು?

Public TV
Last updated: July 26, 2017 4:57 pm
Public TV
Share
3 Min Read
BHUVAN PRATHA SUDEEP
SHARE

ಬೆಂಗಳೂರು: ಧಾರವಾಹಿ ಚಿತ್ರೀಕರಣದ ವೇಲೆ ನಟ ಭುವನ್ ಮತ್ತು ಬಿಗ್ ಬಾಸ್ ವಿನ್ನರ್ ಪ್ರಥಮ್ ಗಲಾಟೆ ಮಾಡಿಕೊಂಡು ಪೊಲೀಸ್ ಹಾಗೂ ಕೋರ್ಟ್ ಮೆಟ್ಟಿಲೇರಿದ ಬಳಿಕ ಇಂದು ನಟ ಸುದೀಪ್ ಮನೆಗೆ ತೆರಳಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿರೋ ಸುದೀಪ್ ನಿವಾಸಕ್ಕೆ ಈ ಇಬ್ಬರು ಇಂದು ಬೇಳಗ್ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಲಂಡನ್ ನಿಂದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ ಅಂತ ಗೊತ್ತಾಯ್ತು. ಹೀಗಾಗಿ ನಾನು ಅವರನ್ನು ಇಂದು ಮಾತನಾಡಿಸಿಕೋಮಡು ಹೋಗೋಣ ಅಂತ ಬಂದಿದ್ದೇನೆ. ಯಾಕಂದ್ರೆ ಸುದೀಪ್ ಸರ್ ಅವರು ಬಿಗ್ ಬಾಸ್ ಆದ ಬಳಿಕ ನನಗೆ ಮಾತನಾಡಲು ಸಿಗ್ತಾನೇ ಇಲ್ಲ. ಫುಲ್ ಬ್ಯುಸಿಯಾಗಿದ್ದಾರೆ. ಅಲ್ಲಿ ಇಲ್ಲಿ ಅಂತ ಶೂಟಿಂಗ್ ಗೆ ಹೋಗ್ತಾನೇ ಇರ್ತಾರೆ. ಅದೀಕೆ ಒಂದೂಚೂರು ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದಾರೆ.

ನಿಮ್ಮಿಬ್ಬರ ಮಧ್ಯೆ ನಡೆದ ಗಲಾಟೆ ಸಂಬಂಧಿಸಿದಂತೆ ಸುದೀಪ್ ಮಾತುಕತೆಗೆ ಕರೆಸಿದ್ದಾರೆಂದು ತಿಳಿದುಬಂದಿದೆ. ಈ ವಿಚಾರವಾಗಿ ಮಾತನಾಡಿದ್ದಾರಾ ಎಂದು ಕೇಳಿದ್ದಕ್ಕೆ ನಿಮಗೆ ಮಾಹಿತಿ ಕೊಟ್ಟೋರು ಯಾರು ಅಂತಾ ಪ್ರಥಮ್ ಪ್ರಶ್ನಿಸಿದ್ದಾರೆ.

ಹಾಗಿದ್ರೆ ನೀವಿಬ್ಬರು ಇಂದು ನಟ ಸುದೀಪ್ ಅವರ ಮನೆಯಲ್ಲಿ ಸೇರಿದ್ರಿ. ಈ ವೇಳೆ ನಿಮ್ಮಿಬ್ಬರ ಬಗ್ಗೆ ಏನು ಮಾತುಕತೆ ನಡೆಯಿತು ಹಾಗೂ ಸುದೀಪ್ ಅವರು ಯಾವ ಅಭಿಪ್ರಾಯ ವ್ಯಕ್ತಪಡಿಸಿದ್ರು ಅಂತ ಮರು ಪ್ರಶ್ನಿಸಿದಾಗ, ಸುದೀಪ್ ಸರ್ ಹೇಳಿದ್ರು. ಶೋ ಚೆನ್ನಾಗಿ ಬರ್ತಾ ಇದೆ ಅಂತ ಕೇಳ್ಪಟ್ಟೆ. ಚೆನ್ನಾಗಿ ಮಾಡ್ತಾ ಇದ್ದೀರಿ ಅಂತಾ ಹೇಳಿದ್ರು. ಎಲ್ಲಾ ಒಳ್ಳೆದಾಗಲಿ. ಒಳ್ಳೆ ಸಿನಿಮಾಗಳನ್ನು ಆಯ್ಕೆ ಮಾಡಿ ಅಂತ ಒಂದಷ್ಟು ಮಾರ್ಗದರ್ಶನಗಳನ್ನು ನೀಡಿದ್ರು. ಇನ್ನೇನು ಹೆಚ್ಚು ಹೇಳಲ್ಲ. ಒಳ್ಳೆದು ಕೆಟ್ಟದ್ದನ್ನೆಲ್ಲಾ ಕಾಲ ನಿರ್ಣಯಿಸುತ್ತದೆ ಅಂತ ಹೇಳಿದ್ರು.

ಪ್ರಥಮ್ ಅವರು ಭುವನ್ ಅವರನ್ನು ಕಚ್ಚಿದ್ದು ನಿಜನಾ ಸುಳ್ಳಾ ಎಂಬುವುದಕ್ಕೆ ಉತ್ತರಿಸಿದ ಪ್ರಥಮ್, ಯಾವುದೇ ಒಂದು ಪ್ರಕರಣ ಕೋರ್ಟ್ ಅಂಗಳದಲ್ಲಿರುವಾಗ ಅದರ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಎಲ್ಲರೂ ನನ್ನ ಪ್ರಚಾರ ಪ್ರಿಯ ಅಂತ ಹೇಳ್ತಿದ್ದಾರೆ. ಆದ್ರೆ ನಾನು 3 ದಿನದಿಂದ ಯಾವ ಮಾಧ್ಯಮದ ಎದುರು ಬಂದಿಲ್ಲ. ನಾನಾಯ್ತು ನನ್ನ ಕೆಲಸವಾಯ್ತು ಅಂತ ನನ್ನಷ್ಟಕ್ಕೆ ನಾನಿದ್ದೀನಿ. ಇನ್ನು ಒಪ್ಪಿಕೊಂಡಿರೋ ಸಿನಿಮಾಗಳ ಕಡೆ ಗಮನಹರಿಸುತ್ತಿದ್ದೇನೆ ಅಂದ್ರು.

ಇದನ್ನೂ ಓದಿ:  ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

ಒಟ್ಟಿನಲ್ಲಿ ನಾನು ಮಾನಸಿಕವಾಗಿ ಗೌರವಿಸುವ ಒಬ್ಬ ಶಕ್ತಿ ಸುದೀಪ್ ಸರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅಲ್ಲಿ ಭುವನ್ ಬಂದಿದ್ದರು. ಚೆನ್ನಾಗಿಯೇ ಮಾತಾಡಿದ್ವಿ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಆದ್ರೆ ನಟ ಸುದೀಪ್ ಭೇಟಿ ಬಳಿಕ, ಇದರ ಬಗ್ಗೆ ಮಾತನಾಡಬಾರದೆಂದು ಹೇಳಿದ್ದಾರೆ. ನನ್ನ ಕಡೆಯಿಂದ ಏನು ಮಾತನಾಡಬೇಕಿತ್ತೋ ಅದನ್ನ ಮಾತಾಡಿದ್ದೀನಿ. ಇನ್ನು ಅವನಿಗೆ ಬಿಟ್ಟ ವಿಚಾರ. ಸುದೀಪ್ ಸರ್ ಅವರನ್ನು ಗೌರವಿಸುತ್ತೇನೆ. ಆದುದರಿಂದ ಅವರ ಮಾತಿಗೆ ಬೆಲೆ ಕೊಟ್ಟು ನಾನು ಈ ಬಗ್ಗೆ ಪ್ರತಿಕ್ರಿಯಿಸಲ್ಲ ಅಂತ ಭುವನ್ ಗಲಾಟೆ ಸಂಧಾನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ನಟ ಭುವನ್ ತೊಡೆ ಕಚ್ಚಿದ ಪ್ರಥಮ್- ಕೋರ್ಟ್‍ಗೆ ಒಳ್ಳೆ ಹುಡ್ಗ ಹಾಜರು

ನಟ ಭುವನ್ ಮತ್ತು ಪ್ರಥಮ್ ಅವರನ್ನು ತಮ್ಮ ನಿವಾಸಕ್ಕೆ ಬರ ಹೇಳಿದ ಸುದೀಪ್, ಇಬ್ಬರ ಅಭಿಪ್ರಾಯವನ್ನು ಕೇಳಿದ್ದಾರೆ. ಬಳಿಕ ನಿಮಗಿಬ್ಬರಿಗೂ ಜನರು ಒಂದು ಸ್ಥಾನ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡಿ ಅಂತ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಭಾನುವಾರ ಧಾರವಾಹಿ ಚಿತ್ರೀಕರಣವೊಂದರ ವೇಳೆ ನಟ ಭುವನ್ ಮತ್ತು ಪ್ರಥಮ್ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿ ಪ್ರಥಮ್, ಭುವನ್ ತೊಡೆಗೆ ಕಚ್ಚಿ ಗಾಯಗೊಳಿಸಿದ್ದರು. ಪ್ರಕರಣಕ್ಕೆ ಕುರಿತಂತೆ ಭುವನ್ ತಲಘಟ್ಟ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಮರುದಿನವೇ ಪ್ರಥಮ್ ಕೂಡ ಭುವನ್ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಈ ಇಬ್ಬರ ಕಿತ್ತಾಟ ಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ: ಈಗ ನಟ ಭುವನ್ ವಿರುದ್ಧ ಪ್ರಥಮ್ ದೂರು!

https://www.youtube.com/watch?v=Ubiq1XFgUkU

https://www.youtube.com/watch?v=p3hTDxrSg3c

BHUVAN PRATHAM

PRATHAM 1 1

 

PRATHAM 4

PRATHAM 3

BHUVAN

BBUVAN 2

TAGGED:actorBhuvanPrathampublictvsandalwoodsudeepನಟ ಸುದೀಪ್ಪಬ್ಲಿಕ್ ಟಿವಿಪ್ರಥಮ್ಭುವನ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

You Might Also Like

05
Districts

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Public TV
By Public TV
2 hours ago
Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
2 hours ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
2 hours ago
01 NEW 1
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 1

Public TV
By Public TV
2 hours ago
02 NEW
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 2

Public TV
By Public TV
2 hours ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?