ಬೆಳಗಾವಿ: ಸಿಎಂ (Chief Minister) ಹುದ್ದೆಗೆ 500 ಕೋಟಿ ರೂಪಾಯಿ ಕೊಡುವುದಾಗಿದ್ದರೆ ಬೆಳಗಾವಿ ಮತ್ತು ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CR Ravi) ಹೇಳಿದರು.
ಬೆಳಗಾವಿಯಲ್ಲಿ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ನವಜೋತ್ ಸಿಂಗ್ ಸಿಧು ಪತ್ನಿಯ 500 ಕೋಟಿ ರೂ. ಆರೋಪಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನೋಟಿಸ್

ನನಗೆ ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವರು ಯಾವ ರಾಜ್ಯದ ಬಗ್ಗೆ ಹೇಳಿದ್ದಾರೆ ಗೊತ್ತಿಲ್ಲ. 500 ಕೋಟಿ ಕಾಲ ಸದ್ಯ ಕಾಂಗ್ರೆಸ್ ನವರಿಗೆ ಇಲ್ಲಾ. ಅದರ ಅರ್ಥ ನಾನು ಕಾಂಗ್ರೆಸ್ಗೆ (Congress) ಕ್ಲೀನ್ ಚಿಟ್ ಕೊಡ್ತಿದ್ದೇನೆ ಅಂತ ಅಲ್ಲ. 500 ಕೋಟಿ ಕೊಡುವುದಾಗಿದ್ದರೆ ಬೆಳಗಾವಿ (Belagavi), ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ಡಿಕೆ ಶಿವಕುಮಾರ್, ಸತೀಶ್ ಜಾರಕಿಹೋಳಿಗೆ ಪರೋಕ್ಷವಾಗಿ ಕುಟುಕಿದರು. ಅಲ್ಲದೇ ಬೆಂಗಳೂರಿನಲ್ಲಿ ಬಹಳ ಜನ ಅದಕ್ಕಿಂತ ಹೆಚ್ಚು ಬಿಡ್ ಕೊಟ್ಟು ತಗೊಳ್ಳೋಕ್ಕೆ ರೆಡಿ ಇದಾರೆ ಎಂದರು.
ಅಧಿವೇಶನದ ಕುರಿತು ಮಾತನಾಡಿ, ಜನರ ಬದುಕಿನ ಬಗ್ಗೆ ಚರ್ಚೆ ಮಾಡಬೇಕು ಎಂದು ಚಿಂತನೆ ನಡೆಸಿದ್ದೇವೆ. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು, ನಮ್ಮ ಆದ್ಯತೆ ಜನರ ಸಮಸ್ಯೆ ಬಗ್ಗೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ, ಯಾವುದೇ ಬದಲಾವಣೆ ಇಲ್ಲ: ಮತ್ತೆ ತಂದೆಯ ಪರ ಯತೀಂದ್ರ ಬ್ಯಾಟಿಂಗ್

ಕಳೆದ ವರ್ಷ ಅಧಿವೇಶನದಲ್ಲಿ ತಮ್ಮ ಮೇಲೆ ಆರೋಪ ಬಂದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿ, ಆರೋಪ ಮಾಡಲು ಎಲ್ಲರೂ ಸ್ವತಂತ್ರ, ನ್ಯಾಯಾಧೀಶರಾಗಲು ಎಲ್ಲರಿಗೂ ಅಧಿಕಾರ ಇಲ್ಲ. ನಮ್ಮ ನ್ಯಾಯಾಧೀಶರು ಸಭಾಪತಿಗಳು, ಅವರು ತಿರ್ಪು ಕೊಟ್ಟ ಮೇಲೆ ದೌರ್ಜನ್ಯ ಮಾಡಿದ್ದು, ಪ್ರಜಾಪ್ರಭುತ್ವದ ಎಸಗಿದ ದೌರ್ಜನ್ಯ, ಸಂವಿಧಾನದ ಮೇಲೆ ಎಸಗಿದ ದೌರ್ಜನ್ಯ, ನಾನು ಆಗಲೇ ಈ ವಿಷಯ ಬಹಳಷ್ಟು ವೇದಿಕೆಯಲ್ಲಿ ಪ್ರಸ್ತಾಪ ಮಾಡಿದ್ದೆನೆ, ಇದರ ಕುರಿತು ಸಿಎಂ ಮತ್ತು ಸಭಾಪತಿಗೆ ಪತ್ರ ಬರೆದಿದ್ದೆನೆ ಎಂದರು.
ಹೊಸ ಬಿಲ್ ತರುವ ವಿಚಾರವಾಗಿ ಮಾತನಾಡಿ, ಬಿಲ್ ತರೊವಾಗ ಆ ಬಗ್ಗೆ ಚರ್ಚೆ ಮಾಡ್ತೆವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಹಾದಿಯಾಗಿ 224 ಜನ ಎಂಎಲ್ಎ ಅನರ್ಹವಾಗೋದು ಖಚಿತ – ವಕೀಲ ದೇವರಾಜೇಗೌಡ ಬಾಂಬ್

