ಚಾಮರಾಜನಗರ: ಜೋಳದ ಕಡ್ಡಿ ಮೆದೆಗೆ ಬೆಂಕಿ ಬಿದ್ದರೂ ಕೂಡ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ, ಘಟನೆ ಹನೂರು ತಾಲೂಕಿನ ಎಡಹಳ್ಳಿ ದೊಡ್ಡಿ ಸಮೀಪ ನಡೆದಿದೆ.
ಹನೂರಿನ ಆರ್ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ರವಿ ಎಂಬವರು ಟ್ರ್ಯಾಕ್ಟರ್ನಲ್ಲಿ ಜೋಳದ ಕಡ್ಡಿಯನ್ನು ತುಂಬಿಕೊಂಡು ಹೋಗುತ್ತಿದ್ದಾಗ ಎಡಹಳ್ಳಿ ದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಬೆಂಕಿ ಹತ್ತಿಕೊಂಡಿದೆ.
ಆದರೆ ಇದನ್ನು ಗಮನಿಸದೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದುದನ್ನು ಕಂಡ ಅದೇ ಮಾರ್ಗದಲ್ಲಿ ಬರುತ್ತಿದ್ದ ಹನೂರು ಠಾಣೆ ಇನ್ಸ್ಪೆಕ್ಟರ್ ಆನಂದಮೂರ್ತಿ ಮಾಹಿತಿ ನೀಡಿದ್ದಾರೆ. ಜೋಳದ ಕಟ್ಟಿಗೆ ಬೆಂಕಿ ಹತ್ತಿಕೊಂಡಿರುವ ವಿಚಾರ ತಿಳಿಸಿ ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ, ಸಿದ್ದಪ್ಪ ಅವರನ್ನು ಕೆಳಗಿಳಿಸಿದ್ದಾರೆ. ನಂತರ, ರವಿ ಅವರಿಗೆ ಜೋಳದ ಕಡ್ಡಿಯನ್ನು ಅನ್ಲೋಡ್ ಮಾಡುವಂತೆ ಹೇಳಿ ಟ್ರ್ಯಾಕ್ಟರ್ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ.