Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್‌ ಮಾಡಿ ಅಶೋಕ್‌ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್‌ ಮಾಡಿ ಅಶೋಕ್‌ ಕಿಡಿ

Bengaluru City

UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್‌ ಮಾಡಿ ಅಶೋಕ್‌ ಕಿಡಿ

Public TV
Last updated: April 28, 2024 1:03 pm
Public TV
Share
3 Min Read
R Ashok
SHARE

ಬೆಂಗಳೂರು: ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್‌ (Congress) ಮತ್ತು ಬಿಜೆಪಿ (BJP) ಮಧ್ಯೆ ವಾಕ್ಸಮರ ಜೋರಾಗಿದೆ. ಯುಪಿಎ (UPA) ಕೊಟ್ಟ ಪರಿಹಾರ ನೋಡಿದರೆ ಸ್ಮಶಾನದಲ್ಲಿ ಬಾಯಿ ಬಡಿದುಕೊಳ್ಳಬೇಕು ಎಂದು ಹೇಳಿ ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಕಿಡಿಕಾರಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ (Siddaramaiah) ನಾವು 4,860 ಕೋಟಿ ರೂ. ಪರಿಹಾರ ಕೇಳಿದ್ದೇವೆ ಅಂತ ಅಂತ ಹೇಳಿದ್ದಾರೆ. ಕೇಂದ್ರ 3,454 ಕೋಟಿ ರೂ. ನೀಡಿದೆ. ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ ಇದೆಯೋ? ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರೂ ಸುಳ್ಳು ರಾಮಯ್ಯ, ಸುಳ್ಳು ಕುಮಾರ್, ಬುರುಡೆ ಕುಮಾರ್ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ದಾಖಲೆ ರಿಲೀಸ್‌ ಮಾಡಿ ವಾಗ್ದಾಳಿ ನಡೆಸಿದರು. ಕಳೆದ ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ನಾವು 44,838.59 ಕೋಟಿ ರೂ. ಕೇಳಿದ್ದರೆ ಮನೆಹಾಳರು ಕೊಟ್ಟಿದ್ದು ಕೇವಲ 3,579.22 ಕೋಟಿ ರೂ. ಮಾತ್ರ. ಕಳೆದ ಹತ್ತು ವರ್ಷದಲ್ಲಿ ಎನ್‌ಡಿಎ ಸರ್ಕಾರದ ಬಳಿ 25,728 ಕೋಟಿ ರೂ. ಕೇಳಿದ್ದರೆ 1,1482 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿ ಅಕ್ರೋಶ ಹೊರಹಾಕಿದರು.

ಬುರುಡೆರಾಮಯ್ಯನವರೇ, ನಿಮ್ಮದೇ ನಾಲಿಗೆಯನ್ನು ಎಷ್ಟು ಬಾರಿ ತಿರುಗಿಸುತ್ತೀರಿ?

ಅಂದು ಕೇಳಿದ್ದು ₹4,860 ಕೋಟಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದೀರಿ. ಆದರೆ, ಈಗ 18 ಸಾವಿರ ಕೋಟಿ ಎಂದು ಹೊಸ ಸುಳ್ಳು ಆರಂಭಿಸಿದ್ದೀರಿ.

ಕೇಂದ್ರ ಸರ್ಕಾರ ಕನ್ನಡಿಗರಿಗೆ ₹3,454 ಕೋಟಿ ಬರ ಪರಿಹಾರ ನೀಡಿದೆ.

ನೀವು ಕೊಟ್ಟಿದ್ದೇನು? ಕೊಟ್ಟಿದ್ದೆಷ್ಟು ಲೆಕ್ಕ… pic.twitter.com/QMsaCixG5G

— BJP Karnataka (@BJP4Karnataka) April 28, 2024

ಕೇಂದ್ರ ನೀಡಿದ ಬರ ಪರಿಹಾರದಲ್ಲಿ ಲೂಟಿ ಹೊಡೆಯಬಾರದು. ನಾವು ಕೇಂದ್ರದ ಹಣಕ್ಕೆ ಕಾವಲು ಕಾಯುತ್ತೇವೆ. ಕೇಂದ್ರ ಎಷ್ಟು ಹಣವನ್ನು ಬಿಡುಗಡೆ ಮಾಡಿದೆಯೋ, ನೀವೂ ಅಷ್ಟೇ ಬಿಡುಗಡೆ ಮಾಡಿ. ನೀವು ಅಷ್ಟೇ ಹಣ ಬಿಡುಗಡೆ ಮಾಡಲು ಸಾಧ್ಯವಾಗದೇ ಇದ್ದರೆ ನಿಮ್ಮದು ಪಾಪರ್ ಸರ್ಕಾರ. ಯೋಗ್ಯತೆ, ಮಾನ ಮರ್ಯಾದೆ ಇದ್ದರೆ ಕೇಂದ್ರದಷ್ಟೇ ನೀವೂ ಈಗ ಬರ ಪರಿಹಾರ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್ ಸವಾಲು ಎಸೆದರು.

ಯುಪಿಎ ಅವಧಿಯಲ್ಲಿ ಎಷ್ಟು?
2004-05 ರಲ್ಲಿ ಬರಗಾಲ ಇದ್ದಾಗ ಕರ್ನಾಟಕ 1,147.70 ಕೋಟಿ ರೂ. ಕೇಳಿತ್ತು. ಆದರೆ ಯುಪಿಎ ಸರ್ಕಾರ ನೀಡಿದ್ದು ಕೇವಲ 131 ಕೋಟಿ ರೂ. 2005-06ರಲ್ಲಿ ಅತಿವೃಷ್ಟಿಗೆ 4,297 ಕೋಟಿ ರೂ. ಕೇಳಲಾಗಿತ್ತು. ಯುಪಿಎ ನೀಡಿದ್ದು 358 ಕೋಟಿ ರೂ.. 2006-07ರಲ್ಲಿ ಪ್ರವಾಹ/ಬರಗಾಲಕ್ಕೆ 2.858 ಕೋಟಿ ರೂ. ಕೇಳಲಾಗಿತ್ತು. ನೀಡಿದ್ದು 226 ಕೋಟಿ ರೂ. ಮಾತ್ರ.

ಭೀಕರ ಬರಗಾಲಕ್ಕೆ ಸಿಲುಕಿದ ಕನ್ನಡಿಗರಿಗೆ ಪ್ರಧಾನಿ ಶ್ರೀ @narendramodi ಸರ್ಕಾರ ಕೊಟ್ಟಿದ್ದು ₹3,454 ಕೋಟಿ.

ಆದರೆ, @INCKarnataka ಸರ್ಕಾರ ಕನ್ನಡಿಗರ ಕಿವಿ ಮೇಲೆ ಇಟ್ಟಿದ್ದು 🌺🌸🌼#CongressFailsKarnataka#CongressCheatsKarnatakaFarmers pic.twitter.com/tNymvihELN

— BJP Karnataka (@BJP4Karnataka) April 28, 2024

2007-08ರಲ್ಲಿ ಜುಲೈನಲ್ಲಿ ಪ್ರವಾಹ ವೇಳೆ 406 ಕೋಟಿ ರೂ. ಕೇಳಿದ್ರೆ ಕೊಟ್ಟಿದ್ದು ಶೂನ್ಯ. ಇದೇ ವರ್ಷದ ಆಗಸ್ಟ್‌ನಲ್ಲಿ 1,510 ರೂ. ಕೇಳಿದ್ರೆ ಕೊಟ್ಟಿದ್ದು ಚಿಪ್ಪು. ಅದೇ ವರ್ಷದ ಅಕ್ಟೋಬರ್ ನಲ್ಲಿ 3,941ಕೋಟಿ ರೂ. ಕೇಳಲಾಗಿತ್ತು, ನೀಡಿದ್ದು 178 ಕೋಟಿ ರೂ.  ಇದನ್ನೂ ಓದಿ: ನಾವು ಗ್ಯಾರಂಟಿಗೆ ಹಣ ಕೇಳಿಲ್ಲ, ಕೇಳೋದು ಇಲ್ಲ – ರೈತರಿಗಾಗಿ ಹಣ ಕೇಳಿದ್ವಿ: ಬಿಜೆಪಿ ವಿರುದ್ಧ ಸಿಎಂ ಕಿಡಿ

2008-09 ರಲ್ಲಿ ಬರಕ್ಕೆ 516 ಕೋಟಿ ರೂ ಕೇಳಿದ್ರೆ, ಕೊಟ್ಟಿದ್ದು ಕೇವಲ 1 ಕೋಟಿ. 2009-10 ರಲ್ಲಿ ಪ್ರವಾಹ, ಬರಕ್ಕೆ 7,759 ಕೋಟಿ ರೂ. ಹಣವನ್ನು ಬಿಜೆಪಿ ಸರ್ಕಾರ ಕೇಳಿತ್ತು. ಆದರೆ ಅವರು ನೀಡಿದ್ದು 957 ಕೋಟಿ ರೂ. ಮಾತ್ರ. 2010-11 ರಲ್ಲಿ ಪ್ರವಾಹಕ್ಕೆ ಸರ್ಕಾರ 1045 ಕೋಟಿ ರೂ. ಕೇಳಿತ್ತು. ಆದರೆ ಒಂದು ರೂ. ನೀಡಿಲ್ಲ.

2011-12 ರಲ್ಲಿ 6,415 ಕೋಟಿ ರೂ. ಕೇಳಿದ್ದಕ್ಕೆ 429 ಕೋಟಿ ರೂ. ನೀಡಿತ್ತು. 2012-13 ರಲ್ಲಿ ಬರಕ್ಕೆ 11,489 ಕೋಟಿ ಕೇಳಿದ್ರೆ, 397 ಕೋಟಿ ರೂ. ಸಿಕ್ಕಿತ್ತು. 2013-14 ರಲ್ಲಿ 2,258 ಕೋಟಿ ಕೇಳಿದ್ದರೆ ಕೊಟ್ಟಿದ್ದು 668 ಕೋಟಿ ಮಾತ್ರ ಎಂದು ಅಶೋಕ್‌ ಹೇಳಿದರು.

ಕರ್ನಾಟಕಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಅಕ್ಷಯ ಪಾತ್ರೆಯಂತೆ 7 ಲಕ್ಷ ಕೋಟಿಗೂ ಅಧಿಕ ಅನುದಾನ ನೀಡಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನನಸಾಗುವಂತೆ ಮಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗಾವಿ, ಶಿರಸಿ, ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.… pic.twitter.com/ys6NW2rAFb

— BJP Karnataka (@BJP4Karnataka) April 28, 2024

ಎನ್‌ಡಿಎ ಅವಧಿಯಲ್ಲಿ ಎಷ್ಟು?
2015-16 ರಲ್ಲಿ 3,831 ಕೋಟಿ ರೂ. ಕೇಳಿದ್ದಕ್ಕೆ 1,853 ಕೋಟಿ ರೂ. ನೀಡಿತ್ತು. 2016-17 ರಲ್ಲಿ ಬರ ಇದ್ದಾಗ 4,703 ಕೋಟಿ ರೂ. ಕೇಳಿದ್ದರೆ ಸರ್ಕಾರ 2,293 ಕೋಟಿ ರೂ. ವಿತರಿಸಿತ್ತು. 2017-18 ರಲ್ಲಿ 3,690 ಕೋಟಿ ರೂ. ಕೇಳಿದ್ದರೆ 1,141 ಕೋಟಿ ರೂ. ನೀಡಿತ್ತು.

2018-19 ರಲ್ಲಿ ರಾಜ್ಯ 2,434 ಕೋಟಿ ರೂ. ಕೇಳಿದ್ದರೆ ಸರ್ಕಾರ 1,248 ಕೋಟಿ ರೂ. ನೀಡಿತ್ತು. 2019-20 ರಲ್ಲಿ 3,837 ಕೋಟಿ ರೂ. ಕೇಳಿದ್ದರೆ 3,412 ಕೋಟಿ ರೂ. ಸಿಕ್ಕಿತ್ತು. 2020-21 ರಲ್ಲಿ ಪ್ರವಾಹ ಬಂದಾಗ 2,242.48 ಕೋಟಿ ರೂ. ಕೇಳಿದ್ದಕ್ಕೆ 1,480 ಕೋಟಿ ರೂ. ನೀಡಿತ್ತು.  ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ

ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ @INCKarnataka ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು

ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454… pic.twitter.com/pdnFafZpLG

— BJP Karnataka (@BJP4Karnataka) April 27, 2024

2021-22 ರಲ್ಲಿ ಪ್ರವಾಹ, ಭೂಕುಸಿತ ವೇಳೆ 2122 ಕೋಟಿ ರೂ. ಕೇಳಿದ್ದರೆ ಸರ್ಕಾರ 2,255.8 ಕೋಟಿ ರೂ. ನೀಡಿತ್ತು. 2022-23 ರಲ್ಲಿ 1944 ಕೋಟಿ ರೂ. ಕೇಳಿದ್ದರೆ 1,603 ಕೋಟಿ ರೂ. ಸಿಕ್ಕಿತ್ತು. 2023-24 ರಲ್ಲಿ18171 ಕೋಟಿ ರೂ. ಕೇಳಿದ್ದರೆ 4,151.42 ಕೋಟಿ ರೂ.(ಎನ್‌ಡಿಆರ್‌ಎಫ್‌+ಎಸ್‌ಡಿಆರ್‌ಎಫ್‌ ಸೇರಿ) ಸಿಕ್ಕಿದೆ ಎಂದು ಅಶೋಕ್‌ ತಿಳಿಸಿದರು.

TAGGED:ashokbjpcongresssiddaramaiahಅಶೋಕ್ಕಾಂಗ್ರೆಸ್ಬರ ಪರಿಹಾರಬಿಜೆಪಿಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

vinay kulkarni 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
7 minutes ago
Rahul Gandhi
Latest

ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

Public TV
By Public TV
29 minutes ago
pm modi parliament
Latest

ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ, ತಿದ್ದುಪಡಿಗಳನ್ನು ಬೆಂಬಲಿಸಿ: ಮಹಿಳಾ ಮೀಸಲಾತಿ ಕಾನೂನು ಬೆಂಬಲಕ್ಕೆ ಮೋದಿ ಮನವಿ

Public TV
By Public TV
29 minutes ago
Yadagiri Bus Fire
Bengaluru City

ಮುಖಾಮುಖಿ ಡಿಕ್ಕಿಯಾಗಿ ಧಗಧಗನೆ ಹೊತ್ತಿಯುರಿದ ಖಾಸಗಿ ಬಸ್‌, ಕಾರು – 7 ಮಂದಿ ಸಜೀವ ದಹನ

Public TV
By Public TV
51 minutes ago
Dharmasthala Temple
Dakshina Kannada

ಧರ್ಮಸ್ಥಳ ದೇವರ ದರ್ಶನ ಸಮಯದಲ್ಲಿ ಬದಲಾವಣೆ

Public TV
By Public TV
54 minutes ago
Bengaluru Sarjapura Murder
Bengaluru City

ಕುಡಿದ ಮತ್ತಲ್ಲಿ ಕಿರಿಕ್ – ತಲೆ ಮೇಲೆ ಕಲ್ಲು ಎತ್ತಿಹಾಕಿ ಸ್ನೇಹಿತನ ಕೊಲೆ

Public TV
By Public TV
54 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?