ಕೊಪ್ಪಳ: ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಅಥವಾ ಹನುಮಂತ, ಶ್ರೀರಾಮನ ಭಕ್ತರು ಬೇಕಾ? ಎಂಬ ಯೋಚನೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ತಿಳಿಸಿದರು.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ (BJP) ನಮಗೆ ಹನುಮಮಾಲೆ, ದತ್ತಮಾಲೆ ಮೇಲೆ ನಂಬಿಕೆ ಇದೆ. ಕಾಂಗ್ರೆಸ್ಗೆ (Congress) ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ. ರಾಜ್ಯದ ಬೇರೆಡೆಯಂತೆ ಯಲಬುರ್ಗಾ ಕ್ಷೇತ್ರವೂ ಕಾಂಗ್ರೆಸ್ ಮುಕ್ತ ಆಗುತ್ತದೆ ಎಂದು ಗುಡುಗಿದರು.
ಇಂದಿರಾ ಗಾಂಧಿ ಇದ್ದಾಗ ಕಾಂಗ್ರೆಸ್ನಿಂದ ವಿದ್ಯುತ್ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಗೆಲ್ಲುತ್ತದೆ ಎಂಬ ಕಾಲವಿತ್ತು. ಆದರೆ ಇವತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಕ್ಷೇತವಿಲ್ಲದೇ ಕೇರಳಕ್ಕೆ ಹೋಗಿದ್ದಾರೆ. ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯಗೂ ಕ್ಷೇತ್ರವಿಲ್ಲ. ಕ್ಷೇತ್ರವೇ ಇಲ್ಲದ ಸಿದ್ದರಾಮಯ್ಯ, ಸಿಎಂ ಆಗ್ತಿನಿ ಅಂತಾ ಶರ್ಟ್ ಹೊಲಿಸಿ ಇಟ್ಟಿದ್ದಾನೆ. ಆದರೆ, ನನ್ನ ಅಪ್ಪನ್ನ ಆಣೆಗೂ ಸಿದ್ದರಾಮಣ್ಣ ಮುಂದೆ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದರು.
ಅವತ್ತು ಸೋನಿಯಾ ಗಾಂಧಿ ಕಾಲಿಡಿದು ಸಿಎಂ ಆಗಿದ್ರಿ. ದೇವೆಗೌಡರ ಹತ್ತಿರ ಬೆಳೆದು, ಅವರಿಗೆ ತುಳಿದ್ರಲ್ಲಾ ಸಿದ್ರಾಮಣ್ಣ. ನಂಗೆ ಸಿದ್ರಾಮಣ್ಣ ಜೋಕರ್ ಅಂತಾರೆ, ಆದರೆ ನೀವು ಬ್ರೋಕರ್. ಬ್ರೋಕರ್ ಆಗಿಯೇ ಸಿಎಂ ಆಗಿದ್ದವರು ನೀವು ಎಂದು ಟೀಕಿಸಿದ ಅವರು, ಕೊರೊನಾ ಲಸಿಕೆ ತೆಗೆದುಕೊಂಡರೇ ಮಕ್ಕಳು ಆಗೋಲ್ಲ ಅಂತ ಕಾಂಗ್ರೆಸ್ನವರು ಹೇಳಿದ್ದರು. ರಾಹುಲ್ ಅದಕ್ಕೆ ಮದುವೆ ಆಗಿಲ್ಲ ಎಂದು ವ್ಯಂಗ್ಯವಾಡಿದರು. ಕೊಡಗಿನಲ್ಲಿ ಇಬ್ಬರ ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ
ಕಾಂಗ್ರೆಸ್ ಭಯೋತ್ಪಾದಕರಿಗೆ ಸಪೋರ್ಟ್ ಮಾಡುವ ಪಕ್ಷವಾಗಿದೆ. ಇಂದಿರಾ ಗಾಂಧಿಯೇ ಭಯೋತ್ಪಾದಕರಿಗೆ ಪ್ರೇರಣೆ ನೀಡಿದ್ದು, ಹೀಗಾಗಿಯೇ ಭಯೋತ್ಪಾದಕರ ಪಾರ್ಟಿ ಕಾಂಗ್ರೆಸ್ ಆಗಿದೆ ಎಂದು ಆರೋಪಿಸಿದರು. ಡಿಕೆಶಿಗೆ 2 ಕುಕ್ಕರ್ ಮೇಲೆ ಬಹಳ ಪ್ರೀತಿ. ಒಂದು ಬೆಳಗಾವಿ ಕುಕ್ಕರ್, ಇನ್ನೊಂದು ಮಂಗಳೂರು ಕುಕ್ಕರ್ ಎಂದು ಟಾಂಗ್ ನೀಡಿದರು. ಕೋಲಾರ ಬಿಟ್ಟು ಒಳ್ಳೆಯ ಕಡೆ ಸಿದ್ದರಾಮಯ್ಯ ಕ್ಷೇತ್ರ ಹುಡುಕಿಕೊಳ್ಳಲಿ, ಫೋನ್ ಮಾಡಿದ್ರೆ ಸಲಹೆ ನೀಡ್ತೇನೆ: ಸಿ.ಎಂ ಇಬ್ರಾಹಿಂ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k