ಮಂಡ್ಯ: ಕಳೆದ ಉಪಚುನಾವಣೆಯಲ್ಲಿ ಬಿಜೆಪಿ (BJP) ಗೆಲುವಿನ ಮೂಲಕ ಭದ್ರಕೋಟೆಯಾಗಿದ್ದ ಕೆ.ಆರ್. ಪೇಟೆಯನ್ನು (KR Pete) ಮರಳಿ ಪಡೆಯಲು ಜೆಡಿಎಸ್ (JDS) ಹಲವು ಸ್ಟ್ಯಾಟರ್ಜಿಯೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದರೆ ಇದೀಗ ಅಭ್ಯರ್ಥಿಯನ್ನು ಇಷ್ಟು ಬೇಗ ಘೋಷಣೆ ಮಾಡಿದ್ದೆ ತಪ್ಪಾಯಿತಾ ಎಂದು ಜೆಡಿಎಸ್ ನಾಯಕರಿಗೆ ತಲೆ ನೋವು ಉಂಟಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಹಾಗೂ ಬಂಡಾಯ ನಾಯಕರ ನಡುವೆ ವಾಗ್ಯುದ್ಧ ಸಹ ನಡೆದಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ನ ಪ್ರಬಲ ಭದ್ರಕೋಟೆಗಳು. ಈ 7 ಭದ್ರ ಕೋಟೆಗಳ ಪೈಕಿ ಕಳೆದ ಕೆ.ಆರ್.ಪೇಟೆ ಉಪಚುನಾಚಣೆಯನ್ನು ಬಿಜೆಪಿ ಗೆಲುವು ಪಡೆಯುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದೆ. ಇದೀಗ ಮರಳಿ ಈ ಕ್ಷೇತ್ರವನ್ನು ವಾಪಸ್ಸು ಪಡೆಯಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಚುನಾವಣೆಗೆ ಇನ್ನೂ 4 ತಿಂಗಳು ಬಾಕಿ ಇರುವಾಗಲೇ ಹೆಚ್.ಡಿ.ಮಂಜುರನ್ನು ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೀಗ ಈ ಹೊತ್ತಿನಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ನಲ್ಲಿ ದೊಡ್ಡ ಮಟ್ಟದ ಭಿನ್ನಮತದ ಹೊಗೆಯಾಡುತ್ತಿದೆ.
ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎಲ್.ದೇವರಾಜು ಹಾಗೂ ತಂಡ ಇದೀಗ ಕೆ.ಆರ್.ಪೇಟೆ ಜೆಡಿಎಸ್ನ್ನು ಬಂಡಾಯದ ಬಾವುಟ ಹಾರಿಸಲು ಮುಂದಾಗಿದೆ. ಕುಮಾರಸ್ವಾಮಿ ಈ ಬಾರಿ ತಮ್ಮ ಬೆಂಬಲಿಗೆ ಮಂಜುಗೆ ಟಿಕೆಟ್ ಕೊಟ್ಟ ಕಾರಣ ರೇವಣ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ದೇವರಾಜು, ಬಸ್ ಕೃಷ್ಣೇಗೌಡ, ಬಸ್ ಸಂತೋಷ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಸಿ ಬಂಡಾಯ ಎದ್ದಿದ್ದಾರೆ.
ಇದೀಗ ಈ ಎಲ್ಲಾ ಅತೃಪ್ತರು ಇದೇ ತಿಂಗಳ 18ರಂದು ಕೆ.ಆರ್.ಪೇಟೆಯಲ್ಲಿ ದೊಡ್ಡ ಮಟ್ಟದ ಜೆಡಿಎಸ್ ಬಂಡಾಯ ಸಭೆ ನಡೆಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಹಳ್ಳಿ-ಹಳ್ಳಿಯನ್ನು ಬಿ.ಎಲ್.ದೇವರಾಜು ಮತ್ತು ತಂಡ ಸುತ್ತಿ ಅಂದಿನ ಸಭೆಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಇದೇ ವೇಳೆ ಶಿಳನೆರೆ ಗ್ರಾಮಕ್ಕೆ ಹೋದ ವೇಳೆ ಜೆಡಿಎಸ್ ಕಾರ್ಯಕರ್ತರು ದೇವರಾಜು ಅವರನ್ನು ತಡೆದು ನಿಮಗೆ ಪಾರ್ಟಿ ಎಲ್ಲಾ ಮಾಡಿದೆ ಹಾಗಿದ್ರೆ ಹೀಗೆ ಯಾಕೆ ಆಡುತ್ತಾ ಇದೀರಾ ಎಂದು ತರಾಟಗೆ ಮುಂದಾಗಿದ್ದಾರೆ. ಇದೇ ವೇಳೆ ಬಿ.ಎಲ್.ದೇವರಾಜು ಬೆಂಬಲಿಗರು ಸಹ ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿರುವುದಕ್ಕೆ ಬಂದಿರುವುದು ಎಂದು ಅವರು ಸಹ ಮಾತಿಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ಸಹ ನಡೆದಿದೆ. ಇದನ್ನೂ ಓದಿ: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ
ಒಟ್ಟಾರೆ ಕೆ.ಆರ್.ಪೇಟೆಯನ್ನು ಮರಳಿ ಪಡೆಯಲು ಕುಮಾರಸ್ವಾಮಿ ಬೇರೆ ರೀತಿಯ ಗೇಮ್ ಪ್ಲ್ಯಾನ್ ಮಾಡಲು ಹೋಗಿ ಇದೀಗ ಆ ಪ್ಲ್ಯಾನ್ ಉಲ್ಟಾ ಆಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ರೇವಣ್ಣ ಬೆಂಬಲಿಗರು ಬಂಡಾಯ ಎದ್ದಿರುವುದು ಜೆಡಿಎಸ್ಗೆ ಮತ್ತೆ ಮಾರಕ ಆಗುತ್ತಾ ಅಥವಾ ಬಂಡಾಯ ಎದ್ದವರನ್ನು ನಾಯಕರು ಸಮಾಧಾನ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k