ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ

Public TV
2 Min Read
Gautam Adani 1

ಮುಂಬೈ: 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್‌ನಲ್ಲಿ (Taj Hotel) ನಡೆದ ಉಗ್ರರ ದಾಳಿ (Terrorist Attack) ವೇಳೆ ನಾನು ಕೂಡಾ ಅಲ್ಲೇ ಇದ್ದೆ. ನನ್ನನ್ನು ಹೋಟೆಲ್ ಸಿಬ್ಬಂದಿ ಸುರಕ್ಷಿತವಾಗಿ ಹಿಂದಿನ ಬಾಗಿಲಿನಿಂದ ಹೊರಗೆ ಕರೆದುಕೊಂಡು ಹೋಗದಿದ್ದರೆ ಉಗ್ರರ ಗುಂಡಿಗೆ ನಾನೂ ಬಲಿಯಾಗುತ್ತಿದ್ದೆ ಎಂದು ಏಷ್ಯಾದ ನಂಬರ್ 1, ವಿಶ್ವದ ಮೂರನೇ ಶ್ರೀಮಂತ, ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಅವರು ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 14 ವರ್ಷ ಹಿಂದಿನ ಕಹಿ ಘಟನೆಯನ್ನು (Mumbai Attack) ಮೆಲುಕು ಹಾಕಿದ ಅದಾನಿ ಅಲ್ಲಿಂದ ಹೇಗೆ ಪಾರಾದರು ಎಂಬ ವಿಚಾರವನ್ನು ಬಹಿರಂಗಡಿಸಿದ್ದಾರೆ. ತಾಜ್ ಹೋಟೆಲ್ ಮೇಲೆ 10 ಗಂಟೆಗಳ ಕಾಲ ಭೀಕರ ದಾಳಿ ನಡೆದರೂ ತಾವು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದಿರುವುದು ಮರು ಜನ್ಮವೇ ಸರಿ ಎಂದು ಬಣ್ಣಿಸಿದ್ದಾರೆ.

Gautam Adani

ವಿಶೇಷ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅದಾನಿ, ದುಬೈ ಮೂಲದ ನನ್ನ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ವ್ಯಾಪಾರದ ಬಗೆಗಿನ ಸಭೆ ನಡೆಸುತ್ತಿದ್ದೆ. ಈ ವೇಳೆಯೇ ಹೋಟೆಲ್ ದಾಳಿಗೊಳಗಾಗಿತ್ತು. ಹೋಟೆಲ್ ಮೇಲೆ ದಾಳಿಯಾಗಿದ್ದಾಗ ನಾನು ಕೂಡಾ ಭಯೋತ್ಪಾದಕರನ್ನು ನೋಡಿದ್ದಾಗಿ ತಿಳಿಸಿದ್ದಾರೆ.

ಅಂದು ನಾನು ದುಬೈನಿಂದ ಮುಂಬೈಗೆ ಬಂದಿದ್ದು, ಸ್ನೇಹಿತರೊಂದಿಗೆ ಮೀಟಿಂಗ್ ಅನ್ನು ಮುಗಿಸಿದ್ದೆ. ಬಿಲ್ ಪಾವತಿಸಿದ ಬಳಿಕ ನಾನು ಹೋಟೆಲ್‌ನಿಂದ ನಿರ್ಗಮಿಸಲು ಹೊರಟಿದ್ದೆ. ಆದರೆ ನನ್ನ ಕೆಲವು ಸ್ನೇಹಿತರು ಮತ್ತೊಂದು ಸುತ್ತಿನ ಸಭೆ ನಡೆಸಲು ನನ್ನನ್ನು ಕೇಳಿದ್ದರು. ಹೀಗಾಗಿ ನಾನು ಹೋಟೆಲ್‌ನಲ್ಲಿ ಮತ್ತೆ ಉಳಿದುಕೊಳ್ಳಲು ನಿರ್ಧರಿಸಿದ್ದೆ.

MUMBAI ATTACK

ಒಂದು ಲೋಟ ಕಾಫಿ ಕುಡಿದು 2ನೇ ಸುತ್ತಿನ ಸಭೆ ಪ್ರಾರಂಭಿಸಲಿದ್ದೆವು. ಅಷ್ಟರಲ್ಲಿ ಅನಿರೀಕ್ಷಿತವಾಗಿ ಹೋಟೆಲ್ ಭಯೋತ್ಪಾದಕರ ದಾಳಿಗೆ ಒಳಗಾಗಿರುವುದು ತಿಳಿದುಬಂತು. ಕೆಲವು ನಿಮಿಷಗಳ ಬಳಿಕ ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು ತಮ್ಮನ್ನು ಹಿಂಬಾಲಿಸುವಂತೆ ಹೇಳಿದರು. ನಾನು ಅದರಂತೆಯೇ ಮಾಡಿದೆ. ಅವರು ನನ್ನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಹಿಂಬದಿಯ ಬಾಗಿಲಿನಿಂದ ಹೊರ ಬರುವಂತೆ ಮಾಡಿದರು. ಇದನ್ನೂ ಓದಿ: 22 ರಾಜ್ಯಗಳಲ್ಲಿ ಬಿಸಿನೆಸ್‌ ಮಾಡ್ತಿದ್ದೇವೆ; ಎಲ್ಲವನ್ನೂ ಬಿಜೆಪಿ ಜೊತೆ ಮಾಡ್ತಿಲ್ಲ – ಗೌತಮ್‌ ಅದಾನಿ

ಅಂದು ಹೋಟೆಲ್ ಸಿಬ್ಬಂದಿ ಸಹಾಯದಿಂದ ಬದುಕುಳಿದೆ. ನಾನು ಸಭೆಯಲ್ಲಿ ಕುಳಿತುಕೊಳ್ಳದೇ ಹೋಗಿದ್ದರೆ ಎಲ್ಲರಂತೆ ನಾನೂ ಬಾಲ್ಕನಿಯಲ್ಲಿ ಓಡಾಡಬೇಕಿತ್ತೇನೋ? ಈ ವೇಳೆ ಭಯೋತ್ಪಾದಕರು ನನಗೆ ಎದುರಾಗಿ ಅವರ ದಾಳಿಗೆ ನಾನೂ ಬಲಿಯಾಗುತ್ತಿದ್ದೆನೇನೋ! ಅಂದು ನಮ್ಮ ರಕ್ಷಣೆ ಮಾಡಿದ ಹೋಟೆಲ್ ಸಿಬ್ಬಂದಿಯಂತಹವರು ಸಿಗುವುದೇ ಬಹು ಅಪರೂಪ. ನಿಜವಾಗಿಯೂ ತಾಜ್ ಹೋಟೆಲ್‌ನ ಸಿಬ್ಬಂದಿ ಅತ್ಯಂತ ಒಳ್ಳೆಯವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

gautam adani

2008ರ ನವೆಂಬರ್ 26 ರಂದು 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈ ಆಗಮಿಸಿ ಪ್ರಸಿದ್ಧ ಪಂಚತಾರಾ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಸಾವನ್ನಪ್ಪಿದ್ದರು. ಹಲವಾರು ಗಾಯಗೊಂಡಿದ್ದರು. ಕೋಟ್ಯಂತರ ಮೌಲ್ಯದ ಆಸ್ತಿಯನ್ನೂ ಉಗ್ರರು ಹಾನಿಗೊಳಿಸಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿಸ್ಫೋಟಕ ಆಟ – ವಿಶ್ವ ದಾಖಲೆ ಬರೆದ SKY

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *