ಗದಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದು, ನಗರದಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸುತ್ತಿದೆ. ಸುಖಾ ಸುಮ್ಮನೆ ಓಡಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ನಿಯಮ ಮೀರಿ ಅಂಗಡಿ ತೆರೆದವರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇನ್ನೂ ಕೆಲವ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ನಗರದ ಸರಾಫ್ ಬಜಾರ್ ನಲ್ಲಿ ಒಬ್ಬರು ಜ್ಯುವೇಲರಿ ಶಾಪ್ ಓಪನ್ ಮಾಡಿದ್ದು, ಅಂಗಡಿನಲ್ಲಿ ಸಾಕಷ್ಟು ಜನರನ್ನು ಕಲೆಹಾಕಿದ್ದರು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದಕ್ಕೆ ವ್ಯಾಪಾರಿ ಬಂಧನ ಮಾಡಿದ್ದು, ನಂತರ ಅಂಗಡಿ ಸೀಜ್ ಮಾಡುವ ಪ್ರಕ್ರಿಯೆ ಸಹ ನಡೆಯಿತು. ಹೀಗೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ, ಇನ್ನುಳಿ ಅಂಗಡಿ ಓಪನ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಬಟ್ಟೆ, ಜ್ಯುವೆಲರಿ, ಮೊಬೈಲ್ ಶಾಪ್, ಪಾತ್ರೆ ಅಂಗಡಿ ಓಪನ್ ಮಾಡಿದವರಿಗೆ ದಂಡ ಹಾಕುವುದುರ ಜೊತೆಗೆ ಅಂತಹವರ ವಿರುದ್ಧ ಕೇಸ್ ಸಹ ದಾಖಲಿಸಲಾಗಿದೆ. ಮಾರ್ಕೆಟ್ ಹಾಗೂ ಪ್ರಮುಖ ಸರ್ಕಲ್ ನಲ್ಲಿ ಮಾಸ್ಕ್ ಹಾಕದ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಪೊಲೀಸರು, ನಗರಸಭೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದ್ದಾರೆ. ಜಿಲ್ಲಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಖಾಕಿ ಪಡೆ ಕಠಿಣ ಕ್ರಮ ಜರುಗಿಸುತ್ತಿದೆ.