ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರು ಯಾವುದೇ ಕಾರ್ಯಕ್ರಮ, ಕೆಲಸದಲ್ಲಿ ಭಾಗವಹಸಿದರೂ ಮೊದಲು ತಾವೇ ಮಾಡುತ್ತಾರೆ. ಇದರಿಂದ ಹಲವು ಬಾರಿ ಎಡವಟ್ಟುಗಳು ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಇಷ್ಟಾದರೂ ರೇಣುಕಾಚಾರ್ಯ ಅವರು ಮಾತ್ರ ಇದಾವುದನ್ನೂ ಬಿಟ್ಟಿಲ್ಲ. ಇದೀಗ ಮುಕ್ತಿ ವಾಹನವನ್ನೂ ಚಾಲನೆ ಮಾಡಿದ್ದಾರೆ.
- Advertisement 2
ಹೊನ್ನಾಳಿ ಪಟ್ಟಣ ಪಂಚಾಯತಿ ವತಿಯಿಂದ ಮುಕ್ತಿ ವಾಹನವನ್ನು ನೀಡಲಾಗಿದ್ದು, ವಾಹನಕ್ಕೆ ಪೂಜೆ ಸಲ್ಲಿಸಿ ಶಾಸಕ ರೇಣುಕಾಚಾರ್ಯ ಚಾಲನೆ ನೀಡಿದರು. ಈ ವೇಳೆ ಪೂಜೆ ಆಗುತ್ತಿದ್ದಂತೆ ಸ್ವತಃ ತಾವೇ ಮುಕ್ತಿ ವಾಹನವನ್ನೇರಿ ಚಾಲನೆ ಮಾಡಿದರು. ಈ ಮೂಲಕ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದರು. ಶಾಸಕರು ಮುಕ್ತಿ ವಾಹನ ಏರುತ್ತಿದ್ದಂತೆ ಅಧಿಕಾರಿಗಳು ಒಂದು ಕ್ಷಣ ನಿಬ್ಬೆರಗಾದರು. ನಂತರ ರೇಣುಕಾಚಾರ್ಯ ಅವರು ಮುಕ್ತಿ ವಾಹನದಲ್ಲೇ ಒಂದು ರೌಂಡ್ ಹಾಕಿದರು.
- Advertisement 3
- Advertisement 4
ಈ ಹಿಂದೆ ಕೆಎಸ್ಆರ್ ಟಿಸಿ ಬಸ್ ಚಲಾಯಿಸುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ ಟ್ರ್ಯಾಕ್ಟರ್ ಸಹ ಓಡಿಸಿದ್ದರು. ಹೀಗೆ ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುವ ಮೂಲಕ ರೇಣುಕಾಚಾರ್ಯ ಅವರು ಸುದ್ದಿ ಆಗುತ್ತಿರುತ್ತಾರೆ. ಈ ಹಿಂದೆ ಪ್ರವಾಹದ ಸಂದರ್ಭದಲ್ಲಿ ನೀರಿನ ದಂಡೆಗೆ ಬಂದ ತೆಪ್ಪವನ್ನು ಓಡಿಸಿ ಪೋಸ್ ನೀಡುವ ಮೂಲಕ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಗೂಳಿ ಸ್ಪರ್ಧೆ ವೇಳೆ ಅದನ್ನು ಹಿಡಿಯಲು ಹೋಗಿ ಬಿದ್ದು ನಗೆಪಾಟಲಿಗೆ ಈಡಾಗಿದ್ದರು.