ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಅಕ್ಟೋಬರ್ 21ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.
ಉತ್ತರ ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದ ಕೂಪದಲ್ಲಿ ಸಿಲುಕಿ ಇಂದಿಗೆ ಬರೋಬ್ಬರಿ 9 ದಿನವಾಗಿದೆ. ಜಲ ಪ್ರಳಯಕ್ಕೆ ಲಕ್ಷಾಂತರ ಜನ ನಲುಗಿ ಹೋಗಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮನೆ ಮಠ ಕಳೆದುಕೊಂಡು ಜನ ನೀರು ನೆರಳು ಇಲ್ದೇ ಬೀದಿಲಿ ಪರದಾಡುತ್ತಿದ್ದಾರೆ.
ಉತ್ತರ ಭಾಗ ತತ್ತರಿಸಿ ಹೋಗಿದ್ರೂ ಈ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಜಲಮಯವಾಗಿರುವ ಹೊತ್ತಲ್ಲಿ, ಅಲ್ಲಿ ಹೋಗಿ ನೆಪ ಮಾತ್ರಕ್ಕಾದ್ರೂ ಪರಿಶೀಲಿಸುವ ಕೆಲಸ ಮಾಡದ ಸಿಎಂ, ಮೂರು ದಿನ ತಮ್ಮ ಸ್ವಂತ ಜಿಲ್ಲೆಯ ಪ್ರವಾಸ ಕೈಗೊಂಡು ಟೆಂಪಲ್ ರನ್ ನಡೆಸುತ್ತಿದ್ದಾರೆ.