ಚಿತ್ರದುರ್ಗ: ನಾನು ಸಹ ದೆಹಲಿಗೆ ಹೋಗಿ ರಾಜಕೀಯ ಮಾಡೋದನ್ನ ಕಲಿಯಬೇಕಿದೆ ಎಂದು ಚಿತ್ರದುರ್ಗ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
ಚಿತ್ರದುರ್ಗದ ವಿಐಪಿ ಪ್ರವಾಸಿ ಮಂದಿರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಮೇಲ್ಮಟ್ಟದಲ್ಲಿ ರಾಜಕೀಯ ಮಾಡುವುದು ನೀವು ಕಲಿತಿಲ್ಲ. ಇದೊಂದು ನಿಮ್ಮ ಫ್ಯಾಮಿಲಿಯಲ್ಲಿ ಡಿಫೆಕ್ಟ್ ಇದೆ ಎಂದು ಕಳೆದ ವರ್ಷ ಸಿಎಂ ಬೊಮ್ಮಾಯಿ ಹೇಳಿದ್ದರು. ಹೀಗಾಗಿ ನಾನೂ ಕೂಡ ದೆಹಲಿಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ ಅಂತ ತಿಪ್ಪಾರೆಡ್ಡಿ ಹೇಳಿದ್ದಾರೆ.
- Advertisement 2
- Advertisement 3
ಈ ಬಾರಿ ಸಚಿವ ಸ್ಥಾನ ಸಿಗುವುದೆಂಬ ನಿರೀಕ್ಷೆಯಿಂದ ಈಗ ಬೆಂಗಳೂರಿಗೆ ಓಡಾಡುತ್ತಿದ್ದೇನೆ. ಆ ವಿಚಾರವಾಗಿ ದೆಹಲಿಗೂ ಹೋಗಿ ಬರುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇನೆ. ಈ ಬಾರಿ ನನಗೆ ಸಚಿವಗಿರಿ ಕೊಟ್ಟರೆ ಬೊಮ್ಮಾಯಿ ಜೊತೆ ಖುಷಿಯಾಗಿ ಕೆಲಸ ಮಾಡುತ್ತೇನೆ. ಅಲ್ಲದೆ ಈ ಬಾರಿ ಸಂಪುಟ ರಚನೆಯಲ್ಲಿ ಕೇಂದ್ರ ಮಾದರಿ ಸಚಿವ ಸಂಪುಟ ಜಾರಿಯಾಗುವ ವಿಶ್ವಾಸವಿದ್ದು, ಸಾಮಾಜಿಕ ನ್ಯಾಯದಡಿ ನಮಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು.
- Advertisement 4
ನಮ್ಮ ಜಿಲ್ಲೆಗೂ ಅವಕಾಶ ನೀಡುವ ನಿರೀಕ್ಷೆ ಇದ್ದು, ಹಿಂದುಳಿದ ವರ್ಗ ಹಾಗೂ ಹಿರಿತನದ ಆಧಾರದ ಮೇಲೆ ನನಗೆ ಮಂತ್ರಿಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.