ಹಾಸನ: ಸಾಮಾಜಿಕ ಅಂತರ ಪಾಲಿಸದ ವಧು-ವರರ ಪೋಷಕರಿಗೆ ಅಧಿಕಾರಿಗಳು ದಂಡ ವಿಧಿಸಿರೋ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸತ್ತಿಗಾಲ ಗ್ರಾಮದಲ್ಲಿ ನಡೆದಿದೆ.
- Advertisement 2
ಕೋವಿಡ್ ನಿಯಮ ಸಂಬಂಧ ಸಕಲೇಶಪುರ ತಾಲೂಕು ಪಂಚಾಯತ್ ಅಧಿಕಾರಿ ಹರೀಶ್ ರೌಂಡ್ಸ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮನೆಯೊಂದರ ಬಳಿ ಹೆಚ್ಚು ಜನ ಸೇರಿದ್ದರು. ಈ ವೇಳೆ ಪರಿಶೀಲನೆಗೆಂದು ಹೋದಾಗ ಹೆಚ್ಚು ಮಂದಿ ಸೇರಿ ಮದುವೆ ಮಾಡುತ್ತಿರೋದಾಗಿ ಕಂಡು ಬಂದಿದೆ.
- Advertisement 3
- Advertisement 4
ಅಧಿಕಾರಿಗಳು ನವದಂಪತಿಗಳಿಗೆ ಶುಭಹಾರೈಸಿ, ಪೋಷಕರಿಗೆ ದಂಡವಿಧಿಸಿದ್ದಾರೆ. ಅಧಿಕಾರಿಗಳು ಬಂದಾಗ ಮುಹೂರ್ತ ನಡೆಯುತ್ತಿದ್ದರಿಂದ ಅಕ್ಷತೆ ಹಾಕಿ, ವಧುವರರಿಗೆ ತಲಾ ಒಂದು ಸಾವಿರ ದಂಡ ಹಾಕಿದ್ದಾರೆ. ಹೆಚ್ಚು ಜನರು ವಿಧಿಸದಂತೆ ತಾಲೂಕುಪಂಚಾಯತ್ ಇಓ ಎಚ್ಚರಿಕೆ ನೀಡಿದ್ದಾರೆ.