ಯಾದಗಿರಿ: ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಸಮೀಪದಲ್ಲಿ ನಡೆದಿದೆ.
ವಡಗೇರಾ ತಾಲೂಕಿನ ಅಗ್ನಿಹಾಳ ಗ್ರಾಮದ ಮನು(20) ಈ ಅವಘಡದಲ್ಲಿ ಮೃತ ಮೀನುಗಾರ. ಇಂದು ಬೆಳಗ್ಗೆ ತನ್ನ ತಂದೆ ಜೊತೆಗೆ ಕೃಷ್ಣಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮನು, ಥರಮಾಕೋಲ್ ದೋಣಿಯ ಮೂಲಕ ಬಲೆ ಹಾಕಲು ಮುಂದಾಗಿದ್ದ, ಈ ವೇಳೆ ಮನು ಕಾಲಿಗೆ ಬಲೆ ಸಿಕ್ಕು ಹಾಕಿಕೊಂಡಿದೆ. ಇದರಿಂದಾಗಿ ನೀರಿನಲ್ಲಿ ಕಾಲು ಅಲುಗಾಡಿಸಲಾಗದೇ ದೋಣಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಸದ್ಯ ಸಹ ಮೀನುಗಾರರು ಮೃತದೇಹ ಹೊರ ತೆಗೆದಿದ್ದು, ನದಿ ತೀರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾಗಮಂಡಲ ಜಲಾವೃತ – ಘಟಪ್ರಭಾ, ಕೃಷ್ಣ ನದಿ ತೀರದ ಜನರಿಗೆ ಪ್ರವಾಹ ಭೀತಿ