– ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು
ಕಾರವಾರ: ಎರಡು ವರ್ಷದ ಹಿಂದೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಲಾಕ್ಡೌನ್ ಸಂದರ್ಭದಲ್ಲಿ ಕಾರವಾರ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಚೇಸ್ ಮಾಡಿ ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.
ಎರಡು ವರ್ಷದ ಹಿಂದೆ ಕಾರವಾರ ನಗರದ ವಕೀಲ ವಿವೇಕ ಪ್ರಭು ಅವರ ಕಾರಿನ ಚಾಲಕನಾಗಿದ್ದ ಸಿದ್ದರ ಮೂಲದ ಸಂದೀಪ್ ಗಾಂವಕರ್(40) ಮಾಲೀಕನ ಕಾರನ್ನೇ ಕದ್ದು ಪರಾರಿಯಾಗಿದ್ದ. ಬಳಿಕ ಪೊಲೀಸರಿಗೇ ಯಾಮಾರಿಸಿ ಮುಂಬೈ ನಲ್ಲಿ ತಲೆಮರಸಿಕೊಂಡಿದ್ದ. ಮುಂಬೈನಲ್ಲಿ ಲಾಕ್ಡೌನ್ ಆಗಿದ್ದರಿಂದ ಮರಳಿ ಕಾರವಾರಕ್ಕೆ ಬಂದಿದ್ದ. ಈತನ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದರು.
- Advertisement 2
- Advertisement 3
ತಕ್ಷಣ ಕಾರ್ಯಪ್ರವೃತ್ತರಾದ ಕಾರವಾರ ನಗರದ ಪಿ.ಎಸ್.ಐ ಸಂತೋಷ್ ನೇತೃತ್ವದ ತಂಡ ಆತನ ಮನೆಗೆ ತೆರಳಿದೆ. ಆದರೆ ಪೊಲೀಸರು ಬರುತಿದ್ದಂತೆ ಬೈಕ್ ಏರಿ ತಪ್ಪಿಸಿಕೊಂಡು ಹೊರಟಿದ್ದ. ಈತನ್ನು ಹಿಂಬಾಲಿಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನಿಂದ ಕಾರುಗಳ ಬಿಡಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.