ಚೆನ್ನೈ: ದೇಶಿ ನಿರ್ಮಿತ ಸ್ಫೋಟಕವನ್ನು ಸೇವಿಸಿ ಆರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಬಳಿಯ ಅಲಗರೈ ಗ್ರಾಮದಲ್ಲಿ ನಡೆದಿದೆ.
ಕಾವೇರಿ ನದಿ ದಡದಲ್ಲಿ ಮೀನುಗಳನ್ನು ಹಿಡಿಯಲು ಅಲಗರೈ ಗ್ರಾಮದ ಮೂವರು ಸೇರಿ ದೇಶಿ ನಿರ್ಮಿತ ಮೂರು ಸ್ಫೋಟಕಗಳನ್ನು ತಂದಿದ್ದರು. ಆ ಮೂರು ಜೆಲೆಟಿನ್ ಸ್ಫೋಟಕದಲ್ಲಿ ಎರಡು ತುಂಡುಗಳನ್ನು ಉಪಯೋಗಿಸಿ ಉಳಿದ ಇನ್ನೊಂದು ಸ್ಫೋಟಕವನ್ನು ಸ್ನೇಹಿತ ಭೂಪತಿಯ ಮೆಯಲ್ಲಿ ಇಟ್ಟಿದ್ದರು.
ಈ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ ಭೂಪತಿಯವರ ಆರು ವರ್ಷದ ಮಗ ಅದು ತಿನ್ನುವ ಪದಾರ್ಥ ಎಂದು ತಿಳಿದು ಬಾಯಿಯಲ್ಲಿ ಹಾಕಿಕೊಂಡಿ ಅಗೆದಿದ್ದಾನೆ. ಆದರೆ ತಕ್ಷಣ ಅದು ಬ್ಲಾಸ್ಟ್ ಆಗಿದ್ದು, ಬಾಲಕ ಬಾಯಿಗೆ ತೀವ್ರ ಹಾನಿಯಾಗಿದೆ. ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಹೀಗಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಸ್ಫೋಟಕ ಬಳಸುವ ವಿಚಾರ ಗೊತ್ತಾಗುತ್ತದೆ ಎಂದು ಭೂಪತಿ ಮತ್ತು ಆತನ ಸ್ನೇಹಿತರು ಮಗುವಿನ ಅಂತ್ಯಕ್ರಿಯೇ ಮಾಡಲು ಮುಂದಾಗಿದ್ದಾರೆ.
ಈ ಮಧ್ಯೆ ಪೊಲೀಸರಿಗೆ ಸ್ಥಳೀಯರು ಯಾರೋ ಕರೆ ಮಾಡಿ ವಿಚಾರವನ್ನು ಮುಟ್ಟಿಸಿದ್ದಾರೆ. ವಿಚಾರದ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆಯನ್ನು ನಿಲ್ಲಿಸಿ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈಗ ಈ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.