Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾಳೆ ಖಗ್ರಾಸ ಚಂದ್ರಗ್ರಹಣ, ಕೊರೊನಾ ಸೋಂಕಿತರು ಉಪವಾಸ ಮಾಡಬೇಡಿ: ಪ್ರಕಾಶ್ ಅಮ್ಮಣ್ಣಾಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನಾಳೆ ಖಗ್ರಾಸ ಚಂದ್ರಗ್ರಹಣ, ಕೊರೊನಾ ಸೋಂಕಿತರು ಉಪವಾಸ ಮಾಡಬೇಡಿ: ಪ್ರಕಾಶ್ ಅಮ್ಮಣ್ಣಾಯ

Districts

ನಾಳೆ ಖಗ್ರಾಸ ಚಂದ್ರಗ್ರಹಣ, ಕೊರೊನಾ ಸೋಂಕಿತರು ಉಪವಾಸ ಮಾಡಬೇಡಿ: ಪ್ರಕಾಶ್ ಅಮ್ಮಣ್ಣಾಯ

Public TV
Last updated: May 25, 2021 9:01 pm
Public TV
Share
3 Min Read
FotoJet 3 36
SHARE

ಉಡುಪಿ: ಕೊರೊನಾ ಸೋಂಕಿತರು, ಸೋಂಕಿನಿಂದ ಗುಣಮುಖರಾದವರು ಚಂದ್ರಗ್ರಹಣ ಸಂದರ್ಭದಲ್ಲಿ ಉಪವಾಸ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ನೀವು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ವೈದ್ಯರು ಹೇಳಿದ್ದನ್ನು ಮಾಡಿ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದ್ದಾರೆ.

ಮೇ 16 ರಂದು ಪೂರ್ಣ ಅಥವಾ ಖಗ್ರಾಸ ಚಂದ್ರಗ್ರಹಣ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 3:14 ರಿಂದ 6:23 ರವರೆಗೆ ಗ್ರಹಣ ಗೋಚರ ಕಾಲವಾಗಿದ್ದು,ಸೂರ್ಯಾಸ್ತಮಾನಕ್ಕೆ ಮೊದಲು ಗ್ರಹಣ ಗೋಚರ ಆಗಲಿದೆ. ಇದು ವೃಶ್ಚಿಕ ರಾಶಿಯಲ್ಲಿ ಬರುವಂತಹ ಕೇತು ಗ್ರಹಣ. ಹೀಗಾಗಿ ವೃಶ್ಚಿಕ ರಾಶಿಯವರು ಜಪ ತಪ ಧ್ಯಾನ ಮಾಡಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಕರ್ನಾಟಕದ ಯಾವುದೇ ಭಾಗದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ. ಗ್ರಹಣ ಗೋಚರ ಆಗದೇ ಇದ್ದರೆ ಆಚರಣೆ ಮಾಡಬೇಕೆಂದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಗ್ರಹಣ ಬರುವುದು ನಮ್ಮದೇ ಚಂದ್ರನಿಗೆ. ಅದೇ ಚಂದ್ರನು ದುರ್ಬಲವಾಗುವ ಕಾಲವನ್ನು ಗ್ರಹಣ ಅಂತಾರೆ, ಅದೇ ಚಂದ್ರ ನಮಗೂ ಕಣ್ಣಿಗೆ ಕಾಣುವುದರಿಂದ ಆಚರಣೆ ಮಾಡಬೇಕೋ ಬೇಡವೋ ಎನ್ನುವ ಜಿಜ್ಞಾಸೆಯೂ ಇದೆ.

BLood Moon F

ಗ್ರಹಣ ಗೋಚರವಿಲ್ಲ- ಉಪವಾಸ ಅಗತ್ಯ ಇಲ್ಲ: ನಮಗೆ ಗ್ರಹಣ ಗೋಚರವಾದಾಗ ಮಾಡುವ ಎಲ್ಲಾ ಆಚರಣೆಗಳನ್ನು ಈ ಬಾರಿ ಮಾಡಬೇಕೆಂದಿಲ್ಲ. ಸಂಜೆ ಗ್ರಹಣ ಪ್ರಾರಂಭ ಆಗುವ 3:14 ರಿಂದ 6:10 ರವರೆಗೆ ಆಹಾರ ನಿಷೇಧ ಮಾಡಿದರೆ ಸಾಕು. ರೋಗಿಗಳು, ಮಕ್ಕಳಿಗೆ ವಿನಾಯಿತಿ ಇದೆ. ಅವರು ಕಡಿಮೆ ಪ್ರಮಾಣದ ಆಹಾರ ಸೇವಿಸಿದರೆ ಉತ್ತಮ. ಇದರಿಂದ ಗ್ರಹಣದಿಂದ ಬರಬಹುದಾದ ದೈಹಿಕ ದುರ್ಬಲತೆಯಿಂದ ಪಾರಾಗಬಹುದು ಎಂದು ಪ್ರಕಾಶ್ ಅಮ್ಮಣ್ಣಾಯ ಸಲಹೆ ನೀಡಿದರು.

ಬೇರೆ ಬೇರೆ ಗ್ರಹಗಳಿಂದ ಬರುವ ಕಿರಣಗಳಿಂದಲೂ ನಮ್ಮ ದೇಹದ ರೋಗನಿರೋಧಕ ಶಕ್ತಿ ನಿರ್ಧಾರವಾಗುತ್ತದೆ. ಆದ್ದರಿಂದ ಗ್ರಹಣ ಕಾಲದಲ್ಲಿ ಆಹಾರ ಸ್ವೀಕರಿಸದೇ ಇರುವುದು ಒಳ್ಳೆಯದು. ನಮಗೆ ಗ್ರಹಣ ಗೋಚರ ಆಗೋದಿಲ್ಲ. ಆದರೆ ಪೂರ್ವ ದೇಶದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಕ್ಕೆ ಬರುತ್ತದೆ. ಕೊನೆಯ ಮೂರ್ನಾಲ್ಕು ನಿಮಿಷ ಭಾರತದ ಕೆಲವೆಡೆ ಕಾಣಬಹುದು. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಚಂದ್ರನ ಆರಾಧನೆ ಮಾಡುವ ಕಾರಣ ಮತ್ತು ಚಂದನಿಗೆ ಸಂಬಂಧಿಸಿದ ಅಧಿದೇವತೆಗಳನ್ನು ಕಾಡುವ ಕಾರಣ ಆ ಹೊತ್ತು ಆಹಾರವನ್ನು ಬಿಟ್ಟು ಉಪವಾಸ ಇರಬೇಕು.

ಗ್ರಹಣ ಮೋಕ್ಷ ಆದ ನಂತರ ಸ್ನಾನ ಮಾಡಿ ನಿತ್ಯಕರ್ಮ ಮಾಡುವುದು ಉತ್ತಮ. ಯಾವ ಗ್ರಹಣದಿಂದಾಗಿ ಯಾವ ರಾಶಿಗೂ ಅನಿಷ್ಟ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಅನಾಚಾರ ಮಾಡಿದರೆ ಖಂಡಿತವಾಗಿ ಸಮಸ್ಯೆ ಬರುತ್ತದೆ. ವೃಶ್ಚಿಕ ರಾಶಿಗೆ ಈ ಬಾರಿ ಗ್ರಹಣ ಬರುತ್ತದೆ. ಆದ್ದರಿಂದ ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಸಣ್ಣ ಏರು-ಪೇರು ಬರಬಹುದು, ಈಗಾಗಲೇ ವಾತಾವರಣದಲ್ಲಿ ಕೊರೊನಾ ಮಹಾಮಾರಿ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕು. ಗ್ರಹಣಕಾಲದಲ್ಲಿ ಉಪವಾಸ ಇರುವುದೇ ಉತ್ತಮ ಪರಿಹಾರ.

FotoJet 2 45

ಕೆಲವರು ಜಪ, ಹೋಮಗಳನ್ನು ಮಾಡುತ್ತಾರೆ. ಇದೇನು ಕಡ್ಡಾಯ ಅಲ್ಲ. ಬೇಕೆನಿಸಿದರಷ್ಟೇ ಮಾಡಿಕೊಳ್ಳಬಹುದು. ಗ್ರಹಣ ಬಂದಾಗ ಮನಃಕಾರಕ ಚಂದ್ರನು ಮಾನಸಿಕ ಖಿನ್ನತೆ ವಿಕೃತಿಗಳಿಗೆ ಕಾರಣನಾಗುತ್ತಾನೆ. ಗ್ರಹಣದ ಪ್ರಭಾವ ಜಾಸ್ತಿ ಇರುವ ಸ್ಥಳಗಳಲ್ಲಿ ವ್ಯಕ್ತಿಗಳ ಮೇಲೆ ಮಾನಸಿಕ ಪರಿಣಾಮ ಇರುತ್ತದೆ. ಚೀನಾದ ಪೂರ್ವ ಭಾಗ ಮಲೇಶಿಯಾ ಇಂಡೋನೇಶಿಯಾ ಜಪಾನ್ ಮುಂತಾದ ಭಾಗಗಳಲ್ಲಿ ಗ್ರಹಣದ ಪರಿಣಾಮ ಜಾಸ್ತಿ. ಪ್ರಕೃತಿಯ ಮೇಲೂ ತೊಂದರೆಗಳಾಗಬಹುದು. ಸಮುದ್ರದ ಅಲೆ ಭೂಕಂಪನ ಇತ್ಯಾದಿಗಳು ಆಗಬಹುದು. ಚಂಡ ಮಾರುತಗಳು ಬರಬಹುದು, ಅಲೆ ಹೆಚ್ಚಾಗಬಹುದು.

ಮನುಷ್ಯನ ಬುದ್ಧಿಯ ಮೇಲೆ ಪರಿಣಾಮ ಬೀರಬಹುದು. ಲಾಕ್‍ಡೌನ್ ಮಾಡಿದ ನಂತರ ಬಹಳ ಜನರು ಓಡಾಡುತ್ತಿಲ್ಲವೇ, ನಾನು ಓಡಾಡಿದರೆ ನನಗೇನು ಆಗಲ್ಲ ಅಂತಾರೆ. ಕೇವಲ ಪ್ರಜೆಗಳು ಮಾತ್ರವಲ್ಲ ರಾಜರಿಗೂ ತೊಂದರೆಗಳು ಬರುತ್ತವೆ. ಆಡಳಿತ ಮಾಡುವ ರಾಜರಿಗೆ ತೊಂದರೆ ಬಂದರೆ ದೇಶಕ್ಕೆ ತೊಂದರೆ. ರಾಜಕೀಯದಲ್ಲಿ ಹೊಡೆದಾಟಗಳು ಪೀಠಕ್ಕಾಗಿ ಕಾದಾಟ ನಡೆಯಬಹುದು. ಮುಂಜಾಗ್ರತೆ ವಹಿಸಿ.

ಭಾರತಕ್ಕೆ ಗ್ರಹಣದ ಪ್ರಭಾವ ಕಡಿಮೆ: ಚೈನಾದಲ್ಲಿ ಉಂಟಾದ ವೈರಸ್ ಭಾರತವನ್ನು ಕಾಡಿದ ರೀತಿಯಲ್ಲಿ ಅನ್ಯ ದೇಶಗಳ ಮೇಲೆ ಉಂಟಾಗುವ ತೊಂದರೆ ಭಾರತಕ್ಕೂ ಬರುತ್ತದೆ. ಆದರೆ ನೇರವಾಗಿ ಭಾರತದ ಮೇಲೆ, ಭಾರತೀಯರ ಮೇಲೆ ಬೀರುವ ಸಾಧ್ಯತೆ ಕಂಡು ಬರುತ್ತದೆ. ಭಾರತೀಯರು ಎಚ್ಚರದಿಂದ ಇರಬೇಕು ಎಂದು ಅಮ್ಮಣ್ಣಾಯ ಹೇಳಿದರು.

TAGGED:CoronafastingmoonpatientsPublic TVudupiಉಡುಪಿಉಪವಾಸಕೊರೊನಾಚಂದ್ರಗ್ರಹಣಪಬ್ಲಿಕ್ ಟಿವಿ prakash ammannayaಪ್ರಕಾಶ್ ಅಮ್ಮಣ್ಣಾಯರೋಗಿಗಳು
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Rinku Singh
Cricket

ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಗೆಲುವು ತಂದ ರಿಂಕು – ಸತತ ಸೋಲಿನ ಬಳಿಕ ಖಾತೆ ತೆರೆದ ಕೋಲ್ಕತ್ತಾ

Public TV
By Public TV
31 minutes ago
West Bengal Election PM Narendra Modi jhalmuri break in the middle of high octane Bengal campaign
Latest

ಇದ್ದಕ್ಕಿದ್ದಂತೆ ಕಾನ್ವಾಯ್‌ ನಿಲ್ಲಿಸಿ ರಸ್ತೆಯ ಬದಿ ಅಂಗಡಿಗೆ ತೆರಳಿ ಝಲ್ಮುರಿ ಸವಿದ ಮೋದಿ

Public TV
By Public TV
34 minutes ago
IPL 2026 Dhruv Jurel off balance and diving away from the stumps but hits the target
Cricket

IPL 2026 – ಧ್ರುವ್ ಜುರೆಲ್ ಕೈಚಳಕಕ್ಕೆ ಬೆಚ್ಚಿಬಿದ್ದ ಕ್ಯಾಮರೂನ್ ಗ್ರೀನ್!

Public TV
By Public TV
58 minutes ago
HD Kumaraswamy 3
Latest

ಜೆಡಿಎಸ್‌ʼಗೆ ಜಮೀರ್‌ – ಗಾಳಿಸುದ್ದಿಗೆ ಕುಮಾರಸ್ವಾಮಿ ಸ್ಪಷ್ಟನೆ

Public TV
By Public TV
1 hour ago
KR Nagara 3
Districts

ಮೈಸೂರು | ದರ್ಗಾಗೆ ಬಂದಿದ್ದಾಗ ಅವಘಡ – ಕಾವೇರಿ ನದಿಗೆ ಇಳಿದಿದ್ದ 6 ಮಂದಿ ಜಲಸಮಾಧಿ

Public TV
By Public TV
1 hour ago
srinagar airport
Latest

ಲಗೇಜ್‌ನಲ್ಲಿ ಸ್ಯಾಟಲೈಟ್ ಫೋನ್ – ಶ್ರೀನಗರದಲ್ಲಿ ಇಬ್ಬರು ಅಮೆರಿಕನ್ನರು ವಶಕ್ಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?