ಭೋಪಾಲ್: ಕೊರೊನಾ ಸೋಂಕಿಗೆ ಒಳಗಾಗಿರುವ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೋಪಾಲ್ ನಗರದ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ನನ್ನ ಬಟ್ಟೆಗಳನ್ನು ನಾನೇ ತೊಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಸಂಪುಟ ಸಭೆಯಲ್ಲಿ ಮಾತನಾಡುತ್ತಾ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಿರೋದರಿಂದ ನನಗೆ ತುಂಬಾ ಲಾಭವಾಗಿದೆ. ಫಿಜಿಯೋಥೆರಫಿ ಸೆಶನ್ ಬಳಿಕ ನನೆಗ ಅಂಗೈಯನ್ನು ಮುಟ್ಟಿ ಮಾಡಲು ಬರುತ್ತಿರಲಿಲ್ಲ. ಸದ್ಯ ಕೈಯನ್ನು ಮಡಚಲು ಬರುತ್ತಿದೆ ಎಂದರು.
ಕೊರೊನಾ ಸೋಂಕು ತಗುಲಿದ್ರೂ ಶಿವರಾಜ್ ಸಿಂಗ್ ಚೌಹಾಣ್ ಆಸ್ಪತ್ರೆಯಿಂದಲೇ ಸರ್ಕಾರದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ವರ್ಚೂವಲ್ ಸಭೆಗಳ ಮೂಲಕ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಎರಡನೇ ಕೊರೊನಾ ವರದಿಯೂ ಸಹ ಪಾಸಿಟಿವ್ ಬಂದಿದೆ.