ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆಕೆಯ ಗಂಡ ದರ್ಪ ತೋರಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಸಾಥ್ ನೀಡಿದ ಘಟನೆ ಜಿಲ್ಲೆಯ ಜಗಳೂರು ತಾಲಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಕುಮಾರಿ ಹಾಗೂ ಶಾಸಕ ಎಸ್.ವಿ ರಾಮಚಂದ್ರಪ್ಪ ಹಾಗೂ ಬೆಂಬಲಿಗರು ಬಂದಿದ್ದರು. ಆದರೆ ಈ ಸಮಯದಲ್ಲಿ ಶಾಂತಕುಮಾರಿ ಪತಿ ಶಶಿಧರ್, ಡಾಕ್ಟರ್ ಗೆ ಮಾಹಿತಿ ಹಾಗೂ ದ್ವೇಷದಿಂದ ಆಡಳಿತ ನಡೆಸುತ್ತಿದ್ದೀರಿ ಎಂದು ಹೆಂಡತಿಯ ಅಧಿಕಾರವನ್ನು ಬಳಸಿಕೊಂಡು ಅವಾಜ್ ಹಾಕಿದ್ದಾರೆ. ಆಗ ವೈದ್ಯಾಧಿಕಾರಿ ಮುರುಳೀಧರ್ ಅವರು ಶಶಿಧರ್ ಗೆ ಬೆರಳು ತೋರಿಸಿ ಮಾತಾಡಿದ್ದಾರೆ.
- Advertisement 2-
ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯೆ, ನನ್ನ ಪತಿಗೆ ಬೆರಳು ತೋರಿಸಿ ಮಾತಾಡುತ್ತೀಯಾ ಹುಷಾರ್ ಅಂತ ಆವಾಜ್ ಹಾಕಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡ ಶಾಂತಕುಮಾರಿಗೆ ಸಾಥ್ ಕೊಟ್ಟು ಆವಾಜ್ ಹಾಕಿದ್ದಾರೆ. ಪತ್ನಿ ಅಧಿಕಾರವನ್ನ ಪತಿ ಶಶಿಧರ್ ಚಲಾಯಿಸಿ ಅಧಿಕಾರಿಗಳಿಗೆ ಕಿರುಕುಳ, ಅವಾಜ್ ಹಾಕಿದ್ರೂ ಶಾಸಕರು ಮಾತ್ರ ಮೌನವಹಿಸಿದ್ದಾರೆ.
- Advertisement 3-
ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯನ ಗಂಡ ಶಶಿಧರ್ ಕಾಟ ಕೊಡುತ್ತಲೇ ಬರುತ್ತಿದ್ದರೂ ಅಧಿಕಾರಿಗಳ ಬೆಂಬಲಕ್ಕೆ ಬಾರದ ಶಾಸಕರು, ಈಗ ಸದಸ್ಯೆಯ ಪತಿಯ ಬೆಂಬಲಕ್ಕೆ ಬಂದು ಅವಾಜ್ ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
- Advertisement 4-
ಆಸ್ಪತ್ರೆಯಲ್ಲಿ ಏನೇ ಲೋಪದೋಷ ಅಕ್ರಮ ಇದ್ದರೂ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಳಬೇಕಿತ್ತು. ಕಳೆದ ಒಂದು ವರ್ಷದ ಕೆಳಗೆ ಮಾಜಿ ಕಾಂಗ್ರೆಸ್ ಶಾಸಕನ ಆಪ್ತರೊಬ್ಬರು ಇದೇ ರೀತಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದರು. ಈಗ ಜಿಲ್ಲಾಪಂಚಾಯಿತಿ ಸದಸ್ಯೆಯ ಪತ್ನಿ ಅವಾಜ್ ಹಾಕಿದ್ದಾರೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಷ್ಟ, ಅಂತದರಲ್ಲಿ ಬಂದಂತಹ ವೈದ್ಯರಿಗೆ ಜನಪ್ರತಿನಿಧಿಗಳೇ ಅವಾಜ್ ಹಾಕಿದರೇ ಅವರಿಗೆ ರಕ್ಷಣೆ ಕೊಡೋರು ಯಾರು ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ.