ಹಾಸನ: ಇಂದು ಮುಂಜಾನೆ ದಟ್ಟ ಮಂಜಿನ ನಡುವೆ ಒಂಟಿಸಲಗವೊಂದು ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ಬೆಳಗೊಡು ಗ್ರಾಮದೊಳಗೆ ಕಾಡಾನೆ ನಡೆದು ಹೋಗಿದೆ.
ಆಗಿನ್ನು ಮನೆಯಿಂದ ಬಂದ ಕೆಲವರು ಕಾಡಾನೆ (Wild Elephant) ಕಂಡು ರಸ್ತೆ ಬದಿ ನಿಂತಿದ್ದಾರೆ. ಒಂಟಿಸಲಗ ಕಂಡು ನಾಯಿಗಳು ಬೊಗಳುತ್ತಿದ್ದರೂ ಕ್ಯಾರೆ ಎನ್ನದ ಗಜ ಗ್ರಾಮದ ರಸ್ತೆಯಲ್ಲಿ ಹಾದು ಹೋಗಿದೆ. ಇತ್ತೀಚೆಗೆ ಕಾಡಾನೆಗಳು ಹೆಚ್ಚಾಗಿ ಗ್ರಾಮಗಳಿಗೆ ಬರುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ಗಜಪಡೆ ಗಲಾಟೆಯಿಂದ ಮಲೆನಾಡು ಭಾಗದ ಜನತೆ ಹೈರಾಣಾಗಿದ್ದಾರೆ. ಇನ್ನೊಂದೆಡೆ ಕಾಡಾನೆ ಚಲನವಲನದ ಬಗ್ಗೆ ಅರಣ್ಯ ಇಲಾಖೆ ಆರ್ಆರ್ಟಿ ಸಿಬ್ಬಂದಿ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಕಾಡಾನೆಗಳಿವೆ ಎಚ್ಚರಿಕೆಯಿಂದ ಓಡಾಡುವಂತೆ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.
ಗಜಪಡೆ ಗಲಾಟೆ ಮಿತಿಮೀರಿದ್ದರೂ ಸರ್ಕಾರ ಹಾಗೂ ಅರಣ್ಯ ಇಲಾಖೆ ಭರವಸೆ ನೀಡುತ್ತಿದೆ ಹೊರತು, ಶಾಶ್ವತ ಪರಿಹಾರ ಕಂಡುಹಿಡಿಯಲು ಸಂಪೂರ್ಣ ವಿಫಲವಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k