– ಪ್ರಕರಣಕ್ಕೆ ರೋಚಕ ತಿರುವು ಕೊಟ್ಟ ಸ್ಕಾರ್ಫ್
ಲಕ್ನೋ: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗೆ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರು ಕಾಮದಾಸೆಗೆ ಬಿದ್ದು ಸಪ್ತಪದಿ ತುಳಿದ ಗಂಡನನ್ನೇ ಕೊಲ್ಲುವ ಹಂತಕ್ಕೆ ತಲುಪುತ್ತಿದ್ದಾರೆ. ಇದಕ್ಕೆ ಮೀರತ್ನಲ್ಲಿ (Meerut) ನಡೆದ ಪ್ರಕರಣ ತಾಜಾ ಉದಾಹರಣೆಯಾಗಿದೆ.
ಹೌದು. ಉತ್ತರ ಪ್ರದೇಶದಲ್ಲಿ (Uttar Pradesh) ಕಾಜಲ್ ಎಂಬ ಮಹಿಳೆ ತನ್ನ ಪ್ರಿಯಕರನಿಗಾಗಿ ಕೈಹಿಡಿದ ಗಂಡನನ್ನೇ ಕೊಂದು ಶವವನ್ನ ಕಾಲುವೆಗೆ ಎಸೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರೋಚಕ ಪ್ರಕರಣವನ್ನ ಭೇದಿಸಿದ ಮೀರತ್ನ ರೋಹ್ತಾ ಪೊಲೀಸರು ಆರೋಪಿ ಪತ್ನಿ, ಆಕೆಯ ಪ್ರಿಯಕರ ಹಾಗೂ ಅವನ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭೇಟಿಯಾಗಿ ಜನ್ಮದಿನದ ಶುಭಾಶಯ ತಿಳಿಸಿದ ಮೋದಿ
ಅನುಮಾನ ಹುಟ್ಟಿದ್ದು ಯಾವಾಗ?
ಈ ಪ್ರಕರಣ ರೋಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ರಸೂಲ್ಪುರ ಗ್ರಾಮದ ನಿವಾಸಿ ಅನಿಲ್ (32) ಸುಮಾರು ಎಂಟು ವರ್ಷಗಳ ಹಿಂದೆ ಕಾಜಲ್ ಎಂಬಾಕೆಯನ್ನ ವಿವಾಹವಾಗಿದ್ದರು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ ಕಳೆದ ಅ.26 ರಂದು ಅನಿಲ್ ನಾಪತ್ತೆಯಾಗಿರುವುದಾಗಿ ಆತನ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆ ನಂತ್ರ ನವೆಂಬರ್ 5 ರಂದು ಅನಿಲ್ ಸಹೋದರನ ಪತ್ನಿ ಕಾಜಲ್, ಪ್ರಿಯಕರ ಆಕಾಶ್ ಹಾಗೂ ಆತನ ಸ್ನೇಹಿತ ಸೇರಿ ಕೊಲೆ ಮಾಡಿರುವುದಾಗಿ ಆರೋಪಿಸಿ ಹೊಸ ದೂರು ನೀಡಿದ್ದ. ಬಳಿಕ ಪ್ರಕರಣ ತಿರುವು ಪಡೆದುಕೊಂಡಿತು. ಇದನ್ನೂ ಓದಿ: ಕೇರಳ | ದೆವ್ವ ಬಿಡಿಸೋಕೆ ಮಹಿಳೆಗೆ ಬೀಡಿ ಸೇದಿ, ಮದ್ಯ ಸೇವಿಸುವಂತೆ ಕಿರುಕುಳ – ಪತಿ ಸೇರಿ ಮೂವರು ಅರೆಸ್ಟ್
ತನಿಖೆ ವೇಳೆ ಕಾಮದಾಟ ಬಯಲು
ಪೊಲೀಸರ ತನಿಖೆಯಲ್ಲಿ, ಅನಿಲ್ ಪತ್ನಿ, ಕಾಜಲ್ ಅದೇ ಗ್ರಾಮದ ಆಕಾಶ್ ಎಂಬ ಯುವಕನೊಂದಿಗೆ ಚಕ್ಕಂದ ಆಡ್ತಿದ್ಳು. ಇದು ಗ್ರಾಮಸ್ಥರಿಗೂ ಗೊತ್ತಾಗಿ, ಪಂಚಾಯ್ತಿ ಸೇರಿಸಿದ್ರು. ಆದ್ರೆ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಅನಿಲ್ ಕುಟುಂಬ ಈ ವಿಷಯವನ್ನ ಒಪ್ಪಿಕೊಳ್ಳದೇ ಮುಚ್ಚಿಟ್ಟರು, ಬಳಿಕ ಪಂಚಾಯ್ತಿಯಲ್ಲಿ ಕಾಜಲ್ಗೆ ಬುದ್ಧಿ ಹೇಳಿ ಕಳಿಸಲಾಗಿತ್ತು. ಇದಾದಮೇಲೂ ಕಾಜಲ್ ಮತ್ತು ಆಕಾಶ್ ರಹಸ್ಯವಾಗಿ ಸೇರುತ್ತಿದ್ರು. ಪರಸ್ಪರ ಭೇಟಿ ಆಗೋದನ್ನ ಮುಂದುವರಿಸಿದ್ರು. ಅನಿಲ್ ಕೆಲಸಕ್ಕೆ ಹೋದ ಮೇಲೆ ಕಾಜಲ್ ಆಕಾಶ್ ಜೊತೆ ಸೇರಿ ಕಾಮದಾಟವಾಡುತ್ತಿದ್ದಳು. ಇದೆಲ್ಲವೂ ತನಿಖೆ ವೇಳೆ ಬಯಲಾಗಿದೆ ಎಂದು ರೋಹ್ತಾ ಎಸ್ಪಿ ತಿಳಿಸಿದ್ದಾರೆ.
ಕರಾಳ ರಾತ್ರಿಯಲ್ಲಿ ನಡೆದಿದ್ದೇನು?
ಕಾಜಲ್ನ ಕಳ್ಳ ಸಂಬಂಧ ಮತ್ತೆ ಅನಿಲ್ಗೆ ಗೊತ್ತಾದಾಗ ಅವನನ್ನೇ ಮುಗಿಸಲು ಪ್ಲ್ಯಾನ್ ಮಾಡಿದ್ರು. ಮೊದಲು ಕಾಜಲ್ ರಾತ್ರಿ ಊಟದಲ್ಲಿ ಮತ್ತು ಬರುವ ಔಷಧಿ ಬೆರಸಿ ಕೊಟ್ಟಿದ್ದಳು. ಅನಿಲ್ ಪ್ರಜ್ಞೆ ತಪ್ಪಿದಾಗ, ಮೊದಲೇ ಪ್ಲ್ಯಾನ್ ಮಾಡಿದಂತೆ ತನ್ನ ಸ್ನೇಹಿತನೊಟ್ಟಿಗೆ ಬಂದ ಆಕಾಶ್, ಅನಿಲ್ನನ್ನ ಬೈಕ್ನಲ್ಲಿ ಸಿವಾಲ್ ಖಾಸ್ ಗ್ಯಾಂಗ್ ಕಾಲುವೆ ಬಳಿಗೆ ಕರೆದೊಯ್ದ. ಅಲ್ಲಿ ಕಾಜಲ್ ಸ್ಕಾರ್ಫ್ನಿಂದ ಕುತ್ತಿಗೆ ಹಿಸುಕಿದಳು, ಆದ್ರೆ ಅನಿಲ್ ಸಂಪೂರ್ಣವಾಗಿ ಸತ್ತಿರಲಿಲ್ಲ. ಅನಿಲ್ ಇನ್ನೂ ಉಸಿರಾಡುತ್ತಿರುವುದನ್ನ ಕಂಡ ಆಕಾಶ್ ಕಾಲುವೆಗೆ ಎಸೆದ. ಬಳಿಕ ಕಾಜಲ್ ಆ ಸ್ಕಾರ್ಫ್ಅನ್ನು ಅಲ್ಲೇ ಇದ್ದ ಪೊದೆಗೆ ಎಸೆದಿದ್ದಳು. ಪೊಲೀಸರು ಸ್ಥಳ ಪರಿಶೀಲನೆ ನಡೆಸುವಾಗ ಈ ಸ್ಕಾರ್ಫ್ ವಶಪಡಿಸಿಕೊಂಡಿದ್ದರು. ಇದು ಕಾಜಲ್ದೇ ಅಂತ ಗೊತ್ತಾದಾಗ ಆಕೆಯ ಮನೆಯನ್ನ ಜಾಲಾಡಿದ್ರು. ಬಳಿಕ ಮನೆಯಲ್ಲಿ ಮತ್ತು ಬರುವ ಮಾತ್ರೆಯ ಪ್ಯಾಕ್ಕೂಡ ಸಿಕ್ಕಿತು. ತೀವ್ರ ವಿಚಾರಣೆ ಬಳಿಕ ಆರೋಪಿಗಳು ಸತ್ಯ ಒಪ್ಪಿಕೊಂಡರು.
ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ಮೃತ ಅನಿಲ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.



