ವಿಜಯಪುರ: 8% ಇರುವವರಿಗಾಗಿ ನಮ್ಮ ದೇಶ ಇಲ್ಲ. 80% ಇರುವ ಹಿಂದೂಗಳಿಗಾಗಿ ನಮ್ಮ ದೇಶ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ನಾಲಿಗೆ ಹರಿಬಿಟ್ಟದ್ದಾರೆ.
ಭಾನುವಾರ ರಾತ್ರಿ ನಡೆದ ಗಣೇಶ ವಿಸರ್ಜನೆಯ ಮಹಾಮಂಡಳಿ ವೇದಿಕೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಗೋವು ತಿನ್ನ ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ. ಇಲ್ಲಿ ಗೋಹತ್ಯೆ ಸಹಿಸಲ್ಲ ಎಂದು ಹೇಳಿದ್ದಾರೆ.
ಗೋಹತ್ಯೆ ಮಾಡಿದಕ್ಕೆ ಪಾಕಿಸ್ತಾನದಲ್ಲಿ ಹಾಲು ಸಿಗುತ್ತಿಲ್ಲ. ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿಗೆ 150 ರೂಪಾಯಿ ಆಗಿದೆ. ಗೋವುಗಳು ಸಿಗದಿದ್ದಕ್ಕೆ ಪಾಕಿಸ್ತಾನದಲ್ಲಿ ಕತ್ತೆಗಳನ್ನು ಕಟ್ ಮಾಡಿ ತಿನ್ನುತ್ತಿದ್ದಾರೆ ಎಂದು ಪಾಕ್ ಮೇಲೆ ಕಿಡಿಕಾರಿದರು.