ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯೊಬ್ಬಳು ರಿಕ್ವೆಸ್ಟ್ ಸ್ವೀಕರಿಸದಿದ್ದಕ್ಕಾಗಿ ಆಕೆಯನ್ನು ಕೊಂದು, ಆಕೆಯ ತಾಯಿಗೂ ಚಾಕುವಿನಿಂದ ಇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮುಜಾಫನಗರ ನಿವಾಸಿ ರವಿ ಆರೋಪಿ. 16 ವರ್ಷದ ಬಾಲಕಿಯ ಮನೆಗೆ ರವಿ ಮದುವೆ ಕಾರ್ಡ್ನ್ನು ನೀಡಲು ಬಂದಿದ್ದ. ಆ ಮದುವೆ ಕಾರ್ಡ್ನ್ನು ತೆಗೆದುಕೊಳ್ಳಲು ಬಾಲಕಿ ಮುಂದಾಗುತ್ತಿದ್ದಂತೆ ಆತ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಆಕೆಯನ್ನು ರಕ್ಷಿಸಲು ಬಂದ ಆಕೆಯ ತಾಯಿ ಸುನೀತಾಳ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗಾಯಗೊಂಡ ಸುನೀತಾ ಮತ್ತು ರವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಫರಿದಾಬಾದ್ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಬಾಲಕಿಯ ತಂದೆ ತೇಜ್ವೀರ್ ಸಿಂಗ್ ದೂರು ನೀಡಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಂದೇ ಬಿಡ್ತು ಎಡಿಟ್ ಬಟನ್ – ಟ್ವಿಟ್ಟರ್ ರೋಲ್ಔಟ್ ಪ್ರಾರಂಭ
ದೂರಿನಲ್ಲಿ ತಂದೆ ತೇಜ್ವೀರ್, ತನ್ನ ಮಗಳು ಫೇಸ್ಬುಕ್ನಲ್ಲಿ ರವಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದ ಕಾರಣ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಸೇರಲು ಗರ್ಭಿಣಿಯರು ಅನರ್ಹರು ಎಂದಿದ್ದ ಬ್ಯಾಂಕ್ಗೆ ನೋಟಿಸ್