ಬೆಂಗಳೂರು: ವಂಚನೆ ಪ್ರಕರಣದ (Fraud Case) ಎ1 ಆರೋಪಿ ಚೈತ್ರಾ ಕುಂದಾಪುರ (Chaithra Kundapura) ತನಿಖೆ ವೇಳೆ ಒಂದೊಂದೇ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ.
ಆರೋಪಿ ಗಗನ್ ಹೇಳಿದಂತೆ ನಾನು ಮಾಡಿದ್ದೇನೆ. ಈ ವಿಚಾರದಲ್ಲಿ ನನಗೇನು ಗೊತ್ತಿಲ್ಲ ಎಂದು ಪೊಲೀಸರ (Police) ಮುಂದೆ ಹೇಳಿದ್ದಾಳೆ. ಈ ಹಿಂದೆ ಅರೆಸ್ಟ್ ಆದ ದಿನ, ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ. ಅದು ಐದು ಕೋಟಿ ರೂ. ಕೊಡ್ತಾರಾ? ಎಂದು ತನಿಖಾಧಿಕಾರಿ ಮುಂದೆ ಹೇಳಿದ್ದಾಳೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಟ್ವಿಸ್ಟ್ – ಸಲೂನ್ ಮಾಲೀಕನಿಗೆ ಬೆದರಿಕೆ ಕರೆ
ಚೈತ್ರಾಳನ್ನು ಮುಂದೆ ಕೂರಿಸಿ ಉಳಿದ ಆರೋಪಿಗಳಿಗೆ ಸಿಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಆಕೆ ವಿಚಾರಣೆ ನೋಡಿ ಒಂದೊಂದೆ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ. ನನಗೇನು ಗೊತ್ತಿಲ್ಲ ಮೇಡಂ, ಎಲ್ಲಾ ಗಗನ್ ಮಾಡಿರೋದು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾಳೆ. ಇನ್ನಷ್ಟು ವಿಚಾರಣೆ ಆದ ಮೇಲೆ ಪ್ರಕರಣದಲ್ಲಿ ಆಕೆಯ ಪಾತ್ರವೂ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]