ಕಾವೇರಿ (Cauvery) ಗಲಾಟೆಯ ಸಂದರ್ಭದಲ್ಲಿ ತಮಿಳು ನಟ ಸಿದ್ಧಾರ್ಥ (Siddharth), ತಮ್ಮ ಚಿಕ್ಕು ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕೆಲ ಕಾರ್ಯಕರ್ತರು ಸಿದ್ದಾರ್ಥ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿ, ತಡೆದಿದ್ದರು. ಈ ಕುರಿತು ಕರ್ನಾಟಕದಲ್ಲೇ ಪರ ವಿರೋಧದ ಮಾತುಗಳೂ ಕೇಳಿ ಬಂದಿದ್ದವು.
- Advertisement 2
ಈ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ ಇದೀಗ ಪ್ರತಿಕ್ರಿಯೆಯನ್ನು (Response) ಕೊಟ್ಟಿದ್ದಾರೆ. ‘ನಾನು ನಟ. ಒಳ್ಳೆಯ ಸಿನಿಮಾ ಮಾಡಿದ್ದೇನೆ. ಸಾವಿರಾರು ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದಲ್ಲೂ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ನನಗೆ ಆ ನೆಲದಲ್ಲಿ ಹಾಗೆ ಆಗಬಾರದಿತ್ತು. ಕಾವೇರಿ ಹೋರಾಟಕ್ಕೂ ಸಿನಿಮಾಗೂ ಸಂಬಂಧ ಕಲ್ಪಿಸಬಾರದು’ ಎಂದಿದ್ದಾರೆ. ಇದನ್ನೂ ಓದಿ:ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಹನಿಮೂನ್ ಪ್ಲ್ಯಾನ್ ಕ್ಯಾನ್ಸಲ್ ಆಗಿದ್ದೇಕೆ?
- Advertisement 3
- Advertisement 4
ಸಿದ್ಧಾರ್ಥ ಅವರ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿರೋದ್ದಕ್ಕೆ ನಟ ಶಿವಣ್ಣ (Shivarajkumar) ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದರು. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥಗೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಶಿವಣ್ಣ ಹೇಳಿದ್ದರು. ಶಿವಣ್ಣ ಆಡಿದ ಈ ಮಾತಿಗೂ ಪರ ವಿರೋಧದ ಚರ್ಚೆ ಶುರುವಾಗಿದೆ.
ನಾವು ಏನೇ ಮಾಡಿದರೂ ಬೇರೆಯವರಿಗೆ ಹರ್ಟ್ ಆಗಬಾರದು. ಆಗಿರುವ ಘಟನೆ ತಪ್ಪು. ಹೀಗೆಲ್ಲ ಮಾಡಬಾರದು ಎಂದು ಮಾತನಾಡಿದ್ದಾರೆ. ಕನ್ನಡಿಗರೆಂದರೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವವರು. ಪ್ರತಿಯೊಬ್ಬರನ್ನು ಸ್ವಾಗತಿಸುವವರು ಎಂಬ ಭಾವನೆ ಇದೆ. ಅದಕ್ಕೆ ನಾವು ಚ್ಯುತಿ ತರಬಾರದು. ಸಿದ್ಧಾರ್ಥ್ಗೆ ಈ ಮೂಲಕ ನಾನು ಕ್ಷಮೆ ಕೇಳುತ್ತೇನೆ ಎಂದು ಶಿವಣ್ಣ ಮಾತನಾಡಿದ್ದರು.
Web Stories