ಬೆಳಗಾವಿ: ಅಧಿವೇಶನ ಬಂದಾಗ ಒಬ್ಬರು ಗೋವಾ, ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಹೋಗ್ತಾರೆ. ಇನ್ಯಾರೋ ಹುಬ್ಬಳ್ಳಿಗೆ ಹೋಗ್ತಾರೆ, ಕೆಲವರು ನಮ್ಮ ಜೊತೆಗೆ ಊಟಕ್ಕೆ ಬರುತ್ತಾರೆ. ಈ ಸಾರಿ ಅಧಿವೇಶನದಲ್ಲಿ ಇದೆಲ್ಲವೂ ವಿಶೇಷ ಆಗೋದು ನಾವೇನೂ ಮಾಡಲು ಆಗಲ್ಲ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Sathish Jarakiholi) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಕುಸ್ತಿ ಇದ್ದೇ ಇರುತ್ತೆ. ಪಕ್ಷಕ್ಕೆ ಹೊಡೆತ ಬೀಳ್ತದೆ ಅಂದಾ ನೋಡೋಕೆ ಅಲ್ಲ. ಸರ್ಕಾರ ಹೇಗೆ ಬೀಳುತ್ತೆ, ಸರ್ಕಾರ ಬೀಳಿಸುವ ಪ್ರಶ್ನೆ ಉದ್ಭವ ಆಗಲ್ಲ ಎಂದರು.
ಮಹಾನಗರ ಪಾಲಿಕೆ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧ ಮಾತನಾಡಿ, ಅಧಿಕಾರಿಗಳಿಂದ ಬರವಣಿಗೆ ಮಿಸ್ಟೇಕ್ ಆಗಿದೆ. ಅದನ್ನು ಶಾಸಕರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲು ಹೊರಟಿದ್ದಾರೆ. ಮಹಾನಗರ ಪಾಲಿಯೂ ಸಹ ಸರ್ಕಾರದ ಮಾತು ಕೇಳಬೇಕು. ಸಣ್ಣ ಮಿಸ್ಟೇಕ್ ದೊಡ್ಡ ಮಟ್ಟದಲ್ಲಿ ಮಾಡಲು ಸೌಥ್ ಶಾಸಕರು ಹೋಗ್ತಿದ್ದಾರೆ. ಒಂದು ತಪ್ಪಿನಿಂದ ಸೂಪರ್ ಸೀಡ್ ಮಾಡಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ ಟೀಂಗೆ ಸಪೋರ್ಟ್ ಮಾಡೋಕೆ ಹೋಗಿದ್ರಾ – ಸಿಎಂಗೆ ಹೆಚ್ಡಿಕೆ ಪ್ರಶ್ನೆ
ಡಿಕೆ ಶಿವಕುಮಾರ್ (DK Shivakumar) ಮತ್ತು ಸತೀಶ್ ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ಇದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲವೇ ಇಲ್ಲಾ. ಯಾರು ಹೇಳಿದ್ರೂ ಇದೆ ಅಂತಾ. ಡಿಸಿಎಂ ಅವರು ಬರುವುದು ತಡರಾತ್ರಿ ಫಿಕ್ಸ್ ಆಗಿದೆ. ಮೇಡಂ ಅವರನ್ನ ಯಾಕೆ ಕೇಳ್ತಿಲ್ಲ ಅವರು ಇರಲಿಲ್ಲ ಅಂದು. ಮೇಡಂ, ಚೆನ್ನರಾಜ್ ಇರಲಿಲ್ಲ ಅವರನ್ನ ಕೇಳಿ ಯಾಕೆ ಇರಲಿಲ್ಲ ಅಂತಾ. ನಮ್ಮದು ಖಾಸಗಿ ಕಾರ್ಯಕ್ರಮ ಇತ್ತು ಹೋಗಿದ್ವಿ, ಲಕ್ಷ್ಮಣ ಸವದಿಯವರು ಯಾಕೆ ಬಂದಿಲ್ಲ ಕೇಳಿ ಎಂದರು. ಅಧ್ಯಕ್ಷರು ಬಂದಾಗ ಬರೋದು ನಮ್ಮ ಡ್ಯೂಟಿ. ಹಿಂದೆ ಬಂದಾಗ ನಾವೆಲ್ಲ ಅಧ್ಯಕ್ಷರ ಸ್ವಾಗತಕ್ಕೆ ಬಂದಿದ್ದೇವೆ. ಮುಂದೆ ಬಂದಾಗ ಎಲ್ಲರೂ ಕೂಡಿಕೊಂಡು ಸ್ವಾಗತ ಮಾಡ್ತೀವಿ. ಡಿಕೆ ಶಿವಕುಮಾರ್ ಜೊತೆಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಸತೀಶ್ ಹೇಳಿದರು.
ಬೆಳಗಾವಿಗೆ ಅಧ್ಯಕ್ಷ ಬಂದಾಗ ಯಾರು ಬಾರದಿರುವ ವಿಚಾರದ ಕುರಿತು ಅಧ್ಯಕ್ಷರ ಜೊತೆ ಮಾತಾಡಿಲ್ಲ. ಅವರು ಸಿಕ್ಕಿಲ್ಲ, ಬೆಂಗಳೂರಿನಲ್ಲಿಯೂ ಅವರು ಇರಲಿಲ್ಲ. ಬೆಳಗಾವಿ ಬರುವ ಪೂರ್ವದಲ್ಲಿ ಅವರಿಗೆ ಭೇಟಿಯಾಗಿದ್ದೇನೆ.ಅದರ ಬಗ್ಗೆ ಗಂಭೀರವಾಗಿ ಚರ್ಚೆ ಅಗತ್ಯ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಹೊರಗಿನ ಯಾರೂ ತಲೆ ಹಾಕಿಲ್ಲ, ಯಾರೂ ಸಹ ಡಿಸ್ಟರ್ಬ್ ಮಾಡಿಲ್ಲ. ನನ್ನ ಮತ್ತು ಡಿಸಿಎಂ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
Web Stories