– 11A ಯಮನನ್ನೇ ಯಾಮಾರಿಸೋ ಸೀಟು!
ಗಾಂಧೀನಗರ: 27 ವರ್ಷಗಳ ಹಿಂದೆ ನಡೆದಿದ್ದ ವಿಮಾನದ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿ ಹಾಗೂ ಅಹಮದಾಬಾದ್ (Ahmedabad) ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ ಇಬ್ಬರು 11A ಸೀಟಿನಲ್ಲೇ ಕುಳಿತಿದ್ದರು. ಈಗ ಈ ಸೀಟನ್ನು ಯಮನನ್ನೇ ಯಾಮಾರಿಸುವ ಸೀಟು ಎನ್ನಲಾಗುತ್ತಿದೆ. ಇದೀಗ, ಮೊದಲ ದುರಂತದಲ್ಲಿ ಬದುಕಿದ ವ್ಯಕ್ತಿ ತಾವು ಪಾರಾದ ರೀತಿಯನ್ನು ನೆನಪಿಸಿಕೊಂಡಿದ್ದಾರೆ.
ಹೌದು, ಎರಡು ದುರಂತಗಳ ಪೈಕಿ ಒಂದು 1998ರಲ್ಲಿ ಥೈಲ್ಯಾಂಡ್ನಲ್ಲಿ (Thailand) ನಡೆದರೆ, ಇನ್ನೊಂದು ಇದೇ ಜೂನ್ 12ರಂದು ಅಹಮದಾಬಾದ್ನಲ್ಲಿ ನಡೆದಿತ್ತು. ಮೊದಲ ದುರಂತದಲ್ಲಿ ಥೈಲ್ಯಾಂಡ್ನ ಸಿಂಗರ್ ಹಾಗೂ ನಟ ರುವಾಂಗ್ಸಾಕ್ ಲೊಯ್ಚುಸಾಕ್ (Ruangsak Loychusak) ಬದುಕುಳಿದಿದ್ದರು. ಮೊನ್ನೆಯ ದುರಂತದಲ್ಲಿ ರಮೇಶ್ ವಿಶ್ವಾಸ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಚ್ಚರಿ ಎಂದರೆ ಇಬ್ಬರು ಕುಳಿತಿದ್ದದ್ದು ಒಂದೇ ಸೀಟಿನಲ್ಲಿ ಅದು 11A.ಇದನ್ನೂ ಓದಿ: ಇಸ್ರೇಲ್ – ಇರಾನ್ ಸಂಘರ್ಷ | 24×7 ಸಹಾಯವಾಣಿ ಆರಂಭಿಸಿದ ಭಾರತ
ಥೈಲ್ಯಾಂಡ್ ವಿಮಾನ ದುರಂತದಲ್ಲಿ ಸಿಲುಕಿದಾಗ ರುವಾಂಗ್ಸಾಕ್ ಅವರಿಗೆ 20 ವರ್ಷ. ಇದೀಗ 47 ವರ್ಷ. 27 ವರ್ಷಗಳ ಬಳಿಕ ತಾವು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ವಿಮಾನ ದುರಂತದಲ್ಲಿ ನಾನು ನಿಜಕ್ಕೂ ಸತ್ತೆ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ಬದುಕಿದೆ. ಇದೀಗ ಭಾರತದಲ್ಲಿ ನಡೆದ ವಿಮಾನ ದುರಂತದಲ್ಲಿಯೂ ಈ ಮಿರಾಕಲ್ ನಡೆದಾಗ ಈ ಸುದ್ದಿಯನ್ನು ಕೇಳಿ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಘಟನೆಯ ಪರಿಯನ್ನು ಬಿಚ್ಚಿಟ್ಟಿದ್ದಾರೆ.
1998ರಲ್ಲಿ ಬ್ಯಾಂಕಾಕ್ನಿಂದ ಹೊರಟ ಥಾಯ್ ಏರ್ವೇಸ್ ವಿಮಾನ ದಕ್ಷಿಣ ಥೈಲ್ಯಾಂಡ್ನ ನಗರವಾದ ಸೂರತ್ ಥಾನಿಯಲ್ಲಿ ಲ್ಯಾಂಡಿಂಗ್ ಆಗುವಾಗ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿದ್ದ 146 ಜನರ ಪೈಕಿ 101 ಜನರು ಸಾವನ್ನಪ್ಪಿದ್ದರು. ಬದುಕುಳಿದವರ ಪೈಕಿ ಇವರು ಒಬ್ಬರು.
ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ್ 242 ಜನರ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ.ಇದನ್ನೂ ಓದಿ: Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್ ಇಂಡಿಯಾ