Tag: ದರೋಡೆಕೋರರು

  • ಚೇಸ್ ಮಾಡಿ ಫೈರಿಂಗ್ – ಆನೇಕಲ್ ಪೊಲೀಸರಿಂದ ದರೋಡೆಕೋರರು ಅರೆಸ್ಟ್

    ಚೇಸ್ ಮಾಡಿ ಫೈರಿಂಗ್ – ಆನೇಕಲ್ ಪೊಲೀಸರಿಂದ ದರೋಡೆಕೋರರು ಅರೆಸ್ಟ್

    ಬೆಂಗಳೂರು: ದರೋಡೆಕೋರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    5 ಮಂದಿ ಖದೀಮರು ಗಾಂಜಾ ಮತ್ತಿನಲ್ಲಿ ರಸ್ತೆಯಲ್ಲಿ ಬರುವ ಬೈಕ್ ಸವಾರರನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದರು. ಸ್ವಿಫ್ಟ್ ಕಾರ್ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ದರೋಡೆಕೋರರ ಬಂಧನಕ್ಕೆ ಪೊಲೀಸರು ತೆರಳಿದ್ದರು.

    ಪೊಲೀಸರು ಬರುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ಕಾರಿನಲ್ಲಿ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕೂಡ ಕಾರನ್ನು ಚೇಸ್ ಮಾಡಿದ್ದಾರೆ. ಪೊಲೀಸರು ಕಾರು ಚೇಸ್ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ane police station

    ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಆನೇಕಲ್ ಸಬ್ ಇನ್ಸ್‍ಪೆಕ್ಟರ್ ಹೇಮಂತ್ 2 ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಓರ್ವ ಆರೋಪಿಯ ಕಾಲಿಗೆ ಬಿದ್ದರೆ, ಮತ್ತೊಂದು ಕಾರಿನ ಚಕ್ರಕ್ಕೆ ಬಿದ್ದಿದೆ.

    ಈ ಘಟನೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಗ್ಯಾಂಗ್ ಲೀಡರ್ ಅರುಣ್ ಹಾಗೂ ಮತ್ತೋರ್ವ ಆರೋಪಿ ಪರಾರಿ ಆಗಿದ್ದಾರೆ. ಸದ್ಯ ಪೊಲೀಸರು ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 8 ದರೋಡೆಕೋರರ ಬಂಧನ, 248 ಕೆ.ಜಿ ಬೆಳ್ಳಿ ವಶ

    ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 8 ದರೋಡೆಕೋರರ ಬಂಧನ, 248 ಕೆ.ಜಿ ಬೆಳ್ಳಿ ವಶ

    ದಾವಣಗೆರೆ: ಹೆದ್ದಾರಿಗಳಲ್ಲಿ ಕಾರುಗಳನ್ನು ನಿಲ್ಲಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡುವವರನ್ನು ಬಂಧಿಸುವಲ್ಲಿ ಜಿಲ್ಲೆಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಬರಿ ಮಾಡಿ ಬೆಳ್ಳಿ ದೋಚಿದ್ದ ಎಂಟು ಜನರ ಬಂಧನ ಮಾಡಿದ್ದು, ಮಹರಾಷ್ಟ್ರ ಮೂಲದ ನಿಸಾರ್, ರಾಹುಲ್, ನದೀಮ್, ಜಾಕೀರ್, ಬಳ್ಳಾರಿಯ ನಾಗರಾಜ್, ಶ್ಯಾಮ್ ಸುಂದರ್, ಮನೋಹರ್ ಮತ್ತು ಉದಯ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 240 ಕೆಜಿ ಬೆಳ್ಳಿ, ಎರಡು ಕಾರ್, ಒಂದು ರಿವಾಲ್ವರ್ ಹಾಗೂ ಐದು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಸುಮಾರು 40 ಕೆ.ಜಿಯ 700 ಬೆಳ್ಳಿ ದೀಪಗಳು ವಶ

    POLICE 2

    ಕಳೆದ ಡಿಸೆಂಬರ್ 29 ರಂದು ಕೊಲ್ಲಾಪುರದಿಂದ ತಮಿಳುನಾಡಿಗೆ ಬೆಳ್ಳಿ ಆಭರಣ ಮಾಡಿಸಿಕೊಳ್ಳಲು ಜಗನ್ನಾಥ್ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರನ್ನ ಹಿಂಬಾಲಿಸಿದ ಹೆದ್ದಾರಿ ಹಂತಕರ ತಂಡ, ಒಂದು ದಿನ ಪೂರ್ತಿ ಅವರ ಹಿಂದೆಯೇ ತಿರುಗಿದ್ದಾರೆ. ಅಲ್ಲದೆ ಬಳ್ಳಾರಿಯಲ್ಲಿ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ದ ತಂಡಕ್ಕೆ ಬೆಳ್ಳಿ ತಗೆದುಕೊಂಡು ಹೋಗುತ್ತಿರುವುದರ ಮಾಹಿತಿ ನೀಡಿದ್ದಾರೆ.

    ಈ ವೇಳೆ ಮತ್ತೊಂದು ತಂಡ ಕೂಡ ಇವರೊಂದಿಗೆ ಜಗನ್ನಾಥ್ ಅವರನ್ನ ಹಿಂಬಾಲಿಸಿಕೊಂಡು ಬಂದು 29ರ ರಾತ್ರಿ 3:30ಕ್ಕೆ ದಾವಣಗೆರೆ ತಾಲೂಕು ಹೆಬ್ಬಾಳ್ ಟೋಲ್ ಮುಂಭಾಗದ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಜಗನ್ನಾಥ್ ಅವರನ್ನ ರಿವಾಲ್ವಾರ್ ನಿಂದ ಬೆದರಿಸಿ ಕಾರಿನಲ್ಲಿದ್ದ ಸುಮಾರು 300 ಕೆ.ಜಿ ಬೆಳ್ಳಿ ಗಟ್ಟಿಯನ್ನು ಹೊತ್ತೊಯ್ದಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದ ಜಗನ್ನಾಥ್ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರಿಂದ, ಪೊಲೀಸರು ಹೆದ್ದಾರಿ ಹಂತಕರನ್ನ ಬಂಧಿಸಿ ಅವರಿಂದ 58 ಲಕ್ಷ ಮೌಲ್ಯದ ಸುಮಾರು 248 ಕೆ.ಜಿ ಬೆಳ್ಳಿ ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಎಸ್.ಪಿ ಚೇತನ್ ಆರ್ ಹೇಳಿದ್ದಾರೆ.

    POLICE 2 1

    ಹೆದ್ದಾರಿ ಡಕಾಯಿತರಲ್ಲಿ ನಿಸಾರ್, ಈ ಹಿಂದೆಯ ಜ್ಯುವೆಲ್ಲರಿ ಮಾಲೀಕ ಜಗನ್ನಾಥ್ ಅವರಿಗೆ ಪರಿಚಯವಾಗಿದ್ದನು. ಅಲ್ಲದೆ ಕೆಲವೊಂದು ಕೆಲಸಕ್ಕೆ ನಿಸಾರ್ ಅವರನ್ನ ಜಗನ್ನಾಥ್ ಬಳಸಿಕೊಂಡಿದ್ದರು. ಆದರೆ 28 ರಂದು ಜಗನ್ನಾಥ್ ಅವರು ಬೆಳ್ಳಿ ತೆಗೆದುಕೊಂಡು ತಮಿಳುನಾಡಿಗೆ ಹೋಗುವ ವಿಚಾರ ತಿಳಿದ ಮೇಲೆ ಅವರನ್ನ ಇತರೆ ಡಕಾಯಿತರಾದ ರಾಹುಲ್, ನದೀಮ್, ಜಾಕೀರ್, ಅವರನ್ನ ಬಳಸಿಕೊಂಡು ಜಗನ್ನಾಥ್ ಅವರ ಕಾರನ್ನ ಹಿಂಬಾಲಿಸಿದ್ದಾರೆ. ಜೊತೆಗೆ ಕರ್ನಾಟಕದವರಾದ ಬಳ್ಳಾರಿ ನಾಗ, ಶ್ಯಾಮ್ ಮನೋಹರ್, ಉದಯ್, ಅವರಿಗೆ ಮಾಹಿತಿ ಮುಟ್ಟಿಸಿದ್ದಾರಲ್ಲದೆ ಕೃತ್ಯಕ್ಕೆ ಅವರ ಸಾಥ್ ಕೂಡ ಪಡೆದುಕೊಂಡಿದ್ದಾರೆ. ಈ ವೇಳೆ ಎಲ್ಲರೂ ಒಟ್ಟುಗೂಡಿ ಹೆಬ್ಬಾಳ್ ಟೂಲ್ ಬಳಿಯ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಗನ್ ನಿಂದ ಹೆದರಿಸಿ ಅವರ ಬಳಿ ಇದ್ದ ಬೆಳ್ಳಿ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

    190112kpn42

    ಕೇವಲ 10 ದಿನದಲ್ಲಿ ಬೆಳ್ಳಿ ಕದ್ದು ಜ್ಯುವೆಲ್ಲರಿ ಮಾಲೀಕರಿಗೆ ಭಯ ಹುಟ್ಟಿಸಿದ್ದ ಹೆದ್ದಾರಿ ಚೋರರು ಈಗ ಕಂಬಿ ಹಿಂದೆ ಅಂದರ್ ಆಗಿದ್ದಾರೆ. ಅಲ್ಲದೆ ಈ ಹಂತಕರನ್ನ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್‍ಪಿ ಚೇತನ್ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳಂತೆ ನಟಿಸಿ ಪೊಲೀಸರಿಂದ ಕಿಡ್ನಾಪರ್ಸ್ ಅರೆಸ್ಟ್!

    ಪ್ರೇಮಿಗಳಂತೆ ನಟಿಸಿ ಪೊಲೀಸರಿಂದ ಕಿಡ್ನಾಪರ್ಸ್ ಅರೆಸ್ಟ್!

    ಬೆಂಗಳೂರು: ಶಿವಾಜಿನಗರ ಪೊಲೀಸರು ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಂಧ್ರ ಪ್ರದೇಶದಲ್ಲಿ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 9 ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿ ಕಿಡ್ನಾಪ್ ನಡೆದಿತ್ತು. ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್ ಸಿಬ್ಬಂದಿ ಕಾರ್ತಿಕ್ ಎಂಬವರನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ಈಗ ಪೊಲೀಸರು ಪ್ರೇಮಿಗಳಂತೆ ನಟನೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಹಫೀಜ್, ಗೌಸ್ ಪೀರ್, ಫಯಾಜ್ ಹಾಗೂ ಶೇಖ್ ಎಂಬವರು ಟ್ರಾವೆಲ್ಸ್ ನಲ್ಲಿ ಪ್ಯಾಕೇಜ್ ಬುಕ್ ಮಾಡಿದ್ದರು. ನಂತರ ಟೂರ್ ಪ್ಯಾಕೇಜ್ ಇಷ್ಟವಿಲ್ಲ ಎಂದು ಹಣ ನೀಡುವಂತೆ ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಇಲ್ಲವಾದಲ್ಲಿ ಸಿಬ್ಬಂದಿ ಕಾರ್ತಿಕ್ ನನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆಯೇ ದಿನಾಂಕ 9ರಂದು ಟೂರ್ಸ್ ಆಂಡ್ ಟ್ರಾವೆಲ್ಸ್ ನ ಮಾಲೀಕ ಸಂಜೀವ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

    POLICE 3

    ಇದರಿಂದ ಮಾಲೀಕ ಸಂಜೀವ್ ಭಯದಿಂದ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅಷ್ಟೇ ಅಲ್ಲದೇ ಶಿವಾಜಿನಗರದ ಪೊಲೀಸರು ಆರೋಪಿಗಳ ಪತ್ತೆಗೆ ಇನ್ಸ್ ಪೆಕ್ಟರ್ ತಬ್ರೇಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ಶೀಲಾ ಪ್ರತ್ಯೇಕ ತಂಡಗಳಾಗಿ ತೆರಳಿದ್ದರು. ತನಿಖೆಯಲ್ಲಿ ಆಂಧ್ರ ಪ್ರದೇಶದಲ್ಲಿ ಆರೋಪಿಗಳು ಇರುವುದು ಪತ್ತೆಯಾಗಿತ್ತು.

    ಪೊಲೀಸರು ದರೋಡೆಕೋರರಿಗೆ ಅನುಮಾನ ಬಾರದಿರಲಿ ಅಂತ ಪೊಲೀಸರಂತೆ ಹೋಗುವ ಬದಲು ಪ್ರೇಮಿಗಳಂತೆ ಹೋಗಿದ್ದು, ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಕ್ರೈಂ ಸಿಬ್ಬಂದಿ ಪ್ರೇಮಿಗಳಂತೆ ನಟನೆ ಮಾಡಿದ್ದಾರೆ. ಬಳಿಕ ಆರೋಪಿಗಳಿಗೆ ಅನುಮಾನ ಬಾರದಂತೆ ಅವರ ಸಮೀಪ ಹೋಗಿ ಅವರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಬರ್ಸ್ ಬಂಧನಕ್ಕೆ ವರ್ಕೌಟ್ ಆಯ್ತು ಅಣ್ಣಾಮಲೈ ಕೊಟ್ಟ ಪ್ಲಾನ್

    ರಾಬರ್ಸ್ ಬಂಧನಕ್ಕೆ ವರ್ಕೌಟ್ ಆಯ್ತು ಅಣ್ಣಾಮಲೈ ಕೊಟ್ಟ ಪ್ಲಾನ್

    -ಆರೋಪಿಗಳ ಬಂಧನಕ್ಕೆ ಪೊಲೀಸರನ್ನೆ ಲಾರಿ ಡ್ರೈವರ್ ಮಾಡಿದ್ದ ಡಿಸಿಪಿ

    ಬೆಂಗಳೂರು: ದಕ್ಷಿಣ ವಿಭಾಗ ಪೊಲೀಸರ ನಿದ್ದೆಗೆಡಿಸಿದ್ದ ನಟೋರಿಯಸ್ ರಾಬರ್ಸ್ ಗ್ಯಾಂಗ್ ಅದು. ಖರ್ತನಾಕ್ ಗ್ಯಾಂಗ್‍ನ ಹೆಡೆ ಮುರಿಕಟ್ಟಲು ಪೊಲೀಸರು ಎಲ್ಲಿಲ್ಲದ ಹರಸಹಾಸಪಡುತ್ತಿದ್ದರು. ದರೋಡೆಕೋರರ ಗ್ಯಾಂಗ್ ಬೆನ್ನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಣ್ಣಾಮಲೈ ಕೊಟ್ಟ ಪ್ಲಾನ್ ನಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಟೋರಿಸ್ ರಾಬರ್ಸ್ ಗ್ಯಾಂಗ್ ಒಂದೇ ವಾರದಲ್ಲಿ ಲಾರಿ ಚಾಕನನ್ನ ಕೊಲೆ ಮಾಡಿ ಮತ್ತೊಬ್ಬನಿಗೆ ಇರಿದು ಹಣ ದೋಚಿದ್ದರು. ಇದು ದಕ್ಷಿಣ ವಿಭಾಗ ಪೊಲೀಸರ ಕಣ್ಣು ಕೆಂಪಾಗಿಸಿತ್ತು. ಲಾರಿ ಚಾಲಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಖದೀಮರ ಗ್ಯಾಂಗ್ ಬಂಧಿಸಲು ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದರು. ಆರೋಪಿಗಳ ಬಂಧನಕ್ಕೆ ಶ್ರಮಿಸುತ್ತಿದ್ದ ಪೊಲೀಸರಿಗೆ ತಕ್ಕ ಫಲ ಸಿಕ್ಕಿರಲಿಲ್ಲ. ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆರೋಪಿಗಳ ಬಂಧನಕ್ಕೆ ಚಕ್ರವ್ಯೂಹ ರೆಡಿ ಮಾಡಿದ್ದಾರೆ. ಡಿಸಿಪಿ ಅಣ್ಣಾಮಲೈ ರಚಿಸಿದ್ದ ಚಕ್ರವ್ಯೂಹ ಆರೋಪಿಗಳು ಸಿಲುಕಿ ಹಾಕಿಕೊಂಡಿದ್ದಾರೆ.

    Annamalai 2

    ಲಾರಿ ಸ್ಟ್ಯಾಂಡ್ ಗಳೆಲ್ಲವನ್ನ ಪರಿಶೀಲನೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ದ ತನಿಖಾ ತಂಡಕ್ಕೆ ಅಣ್ಣಾಮಲೈ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಟ್ಟಿದ್ದಾರೆ. ಡಿಸಿಪಿ ಅಣ್ಣಾಮಲೆ ಕೊಟ್ಟ ಸಲಹೆ ಅಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದಾರೆ. ಲಾರಿ ಸ್ಟ್ಯಾಂಡ್ ನಿಂದ ಮೂರು ಲಾರಿ ಪಡೆದ ಪೊಲೀಸರು ಲಾರಿ ಚಾಲಕರು ಹಾಗೂ ಕ್ಲೀನರ್ ಆಗಿ ನೈಸ್ ರಸ್ತೆಗೆ ಲಗ್ಗೆ ಇಡುತ್ತಾರೆ. ಸತತ ಮೂರು ದಿನಗಳ ಕಾಲ ಆರೋಪಿಗಳಿಗಾಗಿ ಪೊಲೀಸರು ನೈಸ್ ರಸ್ತೆಯಲ್ಲಿ ಕಾದು ಕುಳಿತು ನಾಲ್ಕನೇ ದಿನಕ್ಕೆ ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣ ಸಂಬಂಧ ತೋಹಿದ್ ವರ್ದಾ, ಮುಧಾಸಿರ್, ಸಲ್ಮಾನ್ ಎಂಬವರನ್ನು ಬಂಧಿಸಿ ಪೊಲೀಸರು ತನಿಖೆ ಮಾಡಿದ್ದಾಗ ಇದೇ ತಿಂಗಳು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ರಾಮನಗರದಲ್ಲಿ ಎರಡು ಕಡೆ ಹಾಗೂ ವೆಸ್ಟ್ ಡಿವಿಷನ್ ನಲ್ಲಿ ಒಂದು ಕಡೆ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟನಲ್ಲಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಗಳಿಗೆ ಡಿಸಿಪಿ ಅಣ್ಣಾಮಲೈ ಪ್ಲಾನ್ ಮಾಸ್ಟರ್ ಸ್ಟ್ರೋಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದರೋಡೆಕೋರರಿಬ್ಬರ ಕಾಲು ಸೀಳಿದ ಪೊಲೀಸ್ ಬುಲೆಟ್!

    ದರೋಡೆಕೋರರಿಬ್ಬರ ಕಾಲು ಸೀಳಿದ ಪೊಲೀಸ್ ಬುಲೆಟ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದ್ದು, ಈ ಬಾರಿ ಕಾಡುಗೋಡಿ ಠಾಣೆ ವ್ಯಾಪ್ತಿಯ ಕಾಗೆ ಸೊಣ್ಣೇನಹಳ್ಳಿಯಲ್ಲಿ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಅಪ್ಪು ಅಲಿಯಾಸ್ ನವೀನ್, ಗಿರಿ ಅಲಿಯಾಸ್ ಗಿರೀಶ್ ಗುಂಡೇಟು ತಿಂದ ಆರೋಪಿಗಳು. ಕೆಆರ್ ಪುರಂ ಇನ್ಸ್ ಪೆಕ್ಟರ್ ಜಯರಾಜ್ ಅವರ ಗುಂಡಿಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಗಳನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    BNG KR puram police jayaraj

    ಏನಿದು ಪ್ರಕರಣ?:
    ನವೀನ್, ಗಿರೀಶ್ ಸೇರಿದಂತೆ ಅವರ ತಂಡವು ಮಧ್ಯರಾತ್ರಿ ಒಂಟಿಯಾಗಿ ಬರುವ ಚಾಲಕರು ಹಾಗೂ ಸವಾರರನ್ನು ಬೆದರಿಸಿ ಅವರಿಂದ ಹಣ, ಚಿನ್ನಾಭರಣ ಕಿತ್ತುಕೊಳ್ಳುತ್ತಿದ್ದರು. ಹೀಗಾಗಿ ಆರೋಪಿಗಳಿಗೆ ಬಲೆ ಬೀಸಿದ್ದ ಕೆಆರ್ ಪುರಂ ಇನ್ಸ್ ಪೆಕ್ಟರ್ ಜಯರಾಜ್ ಅವರ ನೇತೃತ್ವದ ತಂಡ ಕೃತ್ಯ ಎಸಗುತ್ತಿದ್ದ ಸ್ಥಳಕ್ಕೆ ಬಂದಿದೆ. ಇದನ್ನು ನೋಡಿದ ದರೋಡೆಕೋರರು ಪೊಲೀಸ್ ಜೀಪ್‍ಗೆ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆಯೇ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಲ್ಲು ತಾಗಿ ಪೇದೆ ಮುನಿರಾಜು ಎಂಬವವರಿಗೆ ಗಾಯವಾಗಿತ್ತು.

    ದರೋಡೆಕೋರರ ಬಂಧನಕ್ಕೆ ಮುಂದಾದ ಜಯರಾಜ್ ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಬಲಗಾಲಿಗೆ ತಾಗಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರು ತೀರ್ಪುರ ಶ್ರೀನಿವಾಸ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾರೆ. ತಕ್ಷಣವೇ ಅವರನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿವೆ.

    BNG police firing 1

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದರೋಡೆಕೋರರಿಬ್ಬರ ಮೇಲೆ ಕಲಬುರಗಿ ಪೊಲೀಸರು ಫೈರಿಂಗ್!

    ದರೋಡೆಕೋರರಿಬ್ಬರ ಮೇಲೆ ಕಲಬುರಗಿ ಪೊಲೀಸರು ಫೈರಿಂಗ್!

    ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ಫೈರಿಂಗ್ ನಡೆಸಿದ್ದಾರೆ.

    ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಮಕೃಷ್ಣ ಎಂಬವರನ್ನು ಅಪಹರಿಸಿದ ಉಮೇಶ್ ಮಾಳಗಿ ಮತ್ತು ಬಾಬು ಅಲಿಯಾಸ್ ಬಾಬ್ಯಾ ಒಂದು ಲಕ್ಷ ರೂ.ಗೆ ಬೇಡಿಕೆಯನ್ನು ಇಟ್ಟಿದ್ದರು. ವಿಷಯ ತಿಳಿದ ಕೂಡಲೇ ಚೌಕ ಠಾಣೆ ಪಿಐ ಹಿರೇಮಠರಿಂದ ದರೋಡೆಕೋರ ಮೇಲೆ ಫೈರಿಂಗ್ ನಡೆಸಲಾಯಿತು. ದರೋಡೆಕೋರರೊಂದಿಗೆ ನಡೆದ ಕಾಳಗದಲ್ಲಿ ಆರ್‌ಜಿ ನಗರ ಪಿಎಸ್‍ಐ ಅಕ್ಕಮಹಾದೇವಿ ಹಾಗೂ ಮೂವರು ಪೇದೆಗಳಿಗೆ ತೀವ್ರ ಗಾಯಗಳಾಗಿವೆ.

    ಗಾಯಾಳುಗಳನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುಂಡು ತಿಂದ ದರೋಡೆಕೋರರನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಕಲಬುರಗಿ ಎಸ್ ಪಿ ಸಎನ್ ಶಶಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿಯ ಬಳಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ, ಗುಂಡು ಹಾರಿಸುವ ಮೂಲಕ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಉದಯ ಹಾಗೂ ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಬುಧವಾರ ಸಂಜೆ ಇಬ್ಬರು ದರೋಡೆಕೋರರ ಖಚಿತ ಮಾಹಿತಿ ಮೇರೆಗೆ ಯಲಹಂಕ ಇನ್ಸ್ ಪೆಕ್ಟರ್ ಮಂಜೇಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಚೇಸ್ ಮಾಡಿದ ಪೊಲೀಸರು, ದೇವನಹಳ್ಳಿ ಸಮೀಪದ ಅಕ್ಕುಪೇಟೆ ಬೊಮ್ಮವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಹಿಡಿದಿದ್ದಾರೆ.

    WhatsApp Image 2018 08 29 at 9.03.59 PM

    ತಪ್ಪಿಸಿಕೊಳ್ಳಲು ದರೋಡೆಕೋರರು ಪೊಲೀಸರು ಹಾಗೂ ಅವರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಇಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಂಧಿತ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆ ಗಣೇಶ ಹಬ್ಬದ ಚಂದಾ ವಸೂಲಿಮಾಡುತ್ತಿದ್ದ ವೃದ್ಧರೊಬ್ಬರನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾ ಸ್ಟೈಲ್‍ನಲ್ಲಿ ದರೋಡೆಕೋರರ ಚೇಸಿಂಗ್ – ಕಾರು ಅಡ್ಡಗಟ್ಟಿ ಪೊಲೀಸರಿಂದ ಫೈರಿಂಗ್

    ಸಿನಿಮಾ ಸ್ಟೈಲ್‍ನಲ್ಲಿ ದರೋಡೆಕೋರರ ಚೇಸಿಂಗ್ – ಕಾರು ಅಡ್ಡಗಟ್ಟಿ ಪೊಲೀಸರಿಂದ ಫೈರಿಂಗ್

    ಮಂಗಳೂರು: ಪೊಲೀಸ್ ಫೈರಿಂಗ್ ನಡೆಸಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಮಣಿಹಳ್ಳದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್ ಹಾಗೂ ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಬಂಧಿತ ಆರೋಪಿಗಳು. ದರೋಡೆಗೆ ಸಂಚು ಹಿನ್ನೆಲೆಯಲ್ಲಿ ಪೊಲೀಸರು ಬೆಳ್ತಂಗಡಿಯಿಂದ ದರೋಡೆಕೊರರನ್ನು ಬೆನ್ನಟ್ಟಿದ್ದರು. ಕಾರು ನಿಲ್ಲಿಸಲು ಸೂಚಿಸಿದಾಗ ಪೊಲೀಸರ ಮೇಲೆ ಡಿಕ್ಕಿ ಹೊಡೆಯಲು ದರೋಡೆಕೋರರ ತಂಡ ಯತ್ನಿಸಿತ್ತು.

    MNG FIRING 1

    ದರೋಡೆಕೋರರು ಕೆಂಪು ಕಲರ್ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಬಂಟ್ವಾಳದ ಮಣಿಹಳ್ಳ ಜಂಕ್ಷನ್ ನಲ್ಲಿ ಪೊಲೀಸರ ಮೇಲೆ ಹಾಯಲು ಯತ್ನಿಸಿದ್ದಾರೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸ್ ಫೈರಿಂಗ್ ವೇಳೆ ಕಾರು ನಿಲ್ಲಿಸಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.

    ಮನ್ಸೂರ್ ಅಮ್ಮೆಮಾರ್ ಹಾಗೂ ಅಮ್ಮಿ ಕಾರಿನಿಂದಿಳಿದು ಪರಾರಿಯಾಗಿದ್ದು, ಕಾರಿನಲ್ಲಿದ್ದ ತಲವಾರು ಸಹಿತ ಮಾರಕಾಸ್ತ್ರಗಳು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಹಾಗೂ ಬೆಳ್ತಂಗಡಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಈ ಫೈರಿಂಗ್ ನಡೆದಿದೆ.

  • ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್ – ಇಬ್ಬರು ಪರಾರಿ

    ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್ – ಇಬ್ಬರು ಪರಾರಿ

    ಕಲಬುರಗಿ: ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಕಲಬುರಗಿ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ.

    ಕುಖ್ಯಾತ ದರೋಡೆಕೋರ ಇರ್ಫಾನ್ (25) ಮೇಲೆ ಫೈರಿಂಗ್ ನಡೆದಿದೆ. ಪಿಎಸ್‍ಐ ವಾಹಿದ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇರ್ಫಾನ್ ಕಾಲಿಗೆ ಗುಂಡು ಹೊಕ್ಕಿದ ನಂತರ ಆತನನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

    GLB FIRING 2

    ಬಿದ್ದಾಪುರ ಕ್ರಾಸ್ ಬಳಿ ಕಳೆದ ರಾತ್ರಿ ಮ್ಯಾನೇಜರ್ ನನ್ನು ಅಡ್ಡಗಟ್ಟಿ ಅಮರ್ ವೈನ್ಸ್ ಮಾಲೀಕನ ಬಳಿ ನಗದು ಹಣವನ್ನು ದರೋಡೆ ಮಾಡಿದ್ದರು. ಮೂವರ ದರೋಡೆಕೋರರ ತಂಡ ಬೈಕ್, ಮೊಬೈಲ್ ಗಳನ್ನು ಕಸಿದುಕೊಂಡು ಹೋಗಿದ್ದರು. ಫರಹತ್ತಬಾದ್-ಗ್ರಾಮೀಣ ಠಾಣೆ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಅವರನ್ನು ಬಂಧಿಸಲು ಹೋದಾಗ ಇಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

    ಘಟನೆಯಲ್ಲಿ ಪಿಎಸ್‍ಐ ವಾಹಿದ್ ಕೋತ್ವಾಲ್, ಪೇದೆಗಳಾದ ಕೇಶವ ಬಾದ್‍ಶಾಗೆ ಸಣ್ಣಪುಟ್ಟ ಗಾಯವಾಗಿದ್ದು, ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.GLB FIRING 1

    GLB FIRING 4

    GLB FIRING 5

    GLB FIRING 7

    GLB FIRING 9

    GLB FIRING 8

  • ಚಿಂದಿ ಆಯುವ ನೆಪದಲ್ಲಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚೋರಿಯರ ಬಂಧನ

    ಚಿಂದಿ ಆಯುವ ನೆಪದಲ್ಲಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚೋರಿಯರ ಬಂಧನ

    ಹಾವೇರಿ: ಚಿಂದಿ ಆಯುವ ನೆಪದಲ್ಲಿ ರಾತ್ರಿ ಹೊತ್ತು ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಚಾಲಾಕಿ ಚೋರಿಯರನ್ನು ಹಾವೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಸುಮಾರು 35 ರಿಂದ 38 ವರ್ಷಗಳ ಶಿಲ್ಪಾ ಶಿಕ್ಕಲಿಗಾರ, ರೇಣುಕಾ ಅಲಿಯಾಸ್ ರೇಷ್ಮಾ ಹಾಗೂ ಗಂಗವ್ವ ಬಂಧಿತ ಆರೋಪಿಗಳು. ಆರೋಪಿಗಳಿಂದ 40 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    HVR THEFT 3

    ಮೂಲತಃ ಹುಬ್ಬಳ್ಳಿಯವರು ಆಗಿರುವ ಈ ಚೋರಿಯರು ಕ್ಲಿನಿಂಗ್ ನೆಪದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದರು. ಯಾರಿಗೂ ಅನುಮಾನ ಬರಬಾರದು ಎಂದು ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು.

    ಈ ಮೂವರು ದರೋಡೆಕೋರರು ಚಿಂದಿ ಆಯುತ್ತಾ ಬೀಗ ಹಾಕಿದ ಅಂಗಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಇಬ್ಬರು ದರೋಡೆಕೋರರು ಕಾವಲಾಗಿ ನಿಲ್ಲುತ್ತಿದ್ದು, ಮತ್ತೊಬ್ಬಳು ಅಂಗಡಿಯೊಳಗೆ ಹೋಗಿ ಅಲ್ಲಿರುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದಳು.

    ದರೋಡೆ ಮಾಡುತ್ತಾ, ಓಡಾಡುತ್ತಿದ್ದ ಇವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.

    HVR THEFT 2

    HVR THEFT

    HVR THEFT 2

    HVR THEFT 3

    HVR THEFT 4

    HVR THEFT 5

    HVR THEFT 4 HVR THEFT 1