ಬೆಂಗಳೂರು: ಅಭಿನಯ ಚರ್ಕವರ್ತಿ ಸುದೀಪ್ ಅವರು ಟಾಲಿವುಡ್ ದಿಗ್ಗಜರಾದ ಪುರಿ ಜಗನ್ನಾಥ್ ಸುಕುಮಾರ್, ನಟಿ ಚಾರ್ಮಿ, ಮತ್ತು ನಟ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ಕಿಚ್ಚ ಸುದೀಪ್ ಹೈದರಾಬಾದ್ನಲ್ಲಿ ಪೈಲ್ವಾನ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಬಹುಭಾಷಾ ನಟರಾಗಿರುವ ಸುದೀಪ್ ಎಲ್ಲ ಚಿತ್ರರಂಗದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಹೀಗಾಗಿ ಶೂಟಿಂಗ್ನ ಬಿಡುವಿನ ಸಮಯದಲ್ಲಿ ಹೈದರಾಬಾದ್ನಲ್ಲಿ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.
ಅಷ್ಟೇ ಅಲ್ಲದೇ ಚಿತ್ರೀಕರಣ ನಡೆಯುತ್ತಿರುವ ಕಾರಣ ಹೈದರಾಬಾದ್ನಲ್ಲಿ ಇದುದ್ದರಿಂದ ಚಿತ್ರತಂಡದವರೆಲ್ಲ ಸೇರಿ ಸೆಟ್ನಲ್ಲೇ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ಸುದೀಪ್ ಅವರು ಬರೀಗಾಲಿನಿಂದ ಬಂದು ಬಾವುಟ ಹಾರಿಸಿ ಕನ್ನಡಾಂಬೆಗೆ ನಮನವನ್ನು ಸಲ್ಲಿಸಿದ್ದರು.
ಸದ್ಯಕ್ಕೆ ಸುದೀಪ್ ಅವರು ಪೈಲ್ವಾನ್, ಕೋಟಿಗೊಬ್ಬ 3 ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಜನ್ 6 ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
Wishing @KicchaSudeep Sir & all the Kannadigas A very Happy "Kannada Rajyothsavadha Subhashayagalu". (Kannada Rajyothsava Shubakankshalu). ????
Pic from the sets of #Phailwaan. @TeluguKicchaFC https://t.co/1EVSgDhVy9 pic.twitter.com/zToJgmi9u9
— TeluguSudeepFansAssociation (@TeluguKicchaFC) November 1, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv