Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಸುದೀಪ್-ಕುಮಾರ್ ವಿವಾದ ಧಗಧಗ: ಶಿವಣ್ಣ ಎಂಟ್ರಿ ಯಾವಾಗ?

Public TV
Last updated: July 14, 2023 1:02 pm
Public TV
Share
4 Min Read
shivaraj kumar with sudeep
SHARE

ಸ್ಯಾಂಡಲ್‌ವುಡ್ ಯಜಮಾನ ಇಲ್ಲದ ಜಾಗವಾಯ್ತಾ..? ಬಣ್ಣದ ಲೋಕ ಧಗಧಗಿಸುತ್ತಿದೆ. ಒಂದು ಕುಟುಂಬ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದ್ಕಡೆ ನಿರ್ಮಾಪಕರು ಇನ್ನೊಂದ್ಕಡೆ ಖ್ಯಾತ ನಟ. ಇನ್ನೊಂದ್ಕಡೆ ವಾಣಿಜ್ಯ ಮಂಡಳಿ. ಅಂಬಿ ಇದ್ದಾಗ `ಏಯ್ ಸುಮ್ನಿರ್ರೋ’ ಅನ್ನುವ ಒಂದ್ ಮಾತ್ ಬಂದ್ರೆ ಸಾಕಿತ್ತು ಎಲ್ರೂ ಸುಮ್ಮನಾಗುತ್ತಿದ್ದರು. ಆ ಜಾಗ ಈಗ ತುಂಬುವರ‍್ಯಾರು..? ಶಿವಣ್ಣ (Shivaraj Kumar) ಮೇಲೆ ಆ ಕೋರಿಕೆ ಬರ್ತಿದೆಯಾ? ಶಿವಣ್ಣ ನ್ಯಾಯ ತೀರ್ಮಾನ ಮಾಡುವ ಜಾಗ ತುಂಬ್ತಾರಾ? ಒಂದು ವಾರದಲ್ಲಿ ಏನಾಗುತ್ತದೆ ಬದಲಾವಣೆ? ಧಗಧಗಿಸುತ್ತಿರುವ ಕಿಚ್ಚಿಗೆ ನೀರು ಸುರಿಯುವವರ‍್ಯಾರು?

shivarajkumar actor

ರಾಜನಿಲ್ಲದ ಸಾಮ್ರಾಜ್ಯದಲ್ಲಿ ಶತ್ರುಗಳ ಕಾಟ. ನ್ಯಾಯ ತೀರ್ಮಾನಗಳ ಪರಿತಾಪ ಇದ್ದಿದ್ದೇ. ಕುಟುಂಬವೊಂದು ಅಚ್ಚುಕಟ್ಟಾಗಿ ಸಾಗಬೇಕು ಅಂದ್ರೆ ಯಜಮಾನ ಬೇಕಾಗ್ತಾನೆ. ಇದೀಗ ಅಂತಹ ಯಜಮಾನರಿಲ್ಲದ್ದಕ್ಕೆ ಗೊಂದಲದ ಗೂಡಾಗಿದೆಯಾ ಸ್ಯಾಂಡಲ್‌ವುಡ್ ? ಸ್ಯಾಂಡಲ್‌ವುಡ್ ಈಗ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಗಾಂಧಿನಗರದ ಚಿಕ್ಕ ಆಫೀಸ್‌ನಲ್ಲಿ ಶುರುವಾಗುವ ವ್ಯಾವಹಾರಿಕ ಚರ್ಚೆ ಮುಂದೆ ವಿಶ್ವದಾದ್ಯಂತ ವ್ಯಾಪಿಸುತ್ತದೆ. ಕಾರಣ ಈಗ ಸಿನಿಮಾ ಒಂದು ದೊಡ್ಡ ಉದ್ಯಮ. ಹೀಗಿದ್ದರೂ ಒಳಜಗಳ, ವೈಷಮ್ಯ ವೈಮನಸ್ಸು ಹಾದಿಬೀದಿಯಲ್ಲಿ ಚರ್ಚೆಯಾಗುವಂತಾಗ್ತಿರೋದು ಯಾಕೆ?

Dr. Rajkumar 2

ಚಂದನವನ ಒಂದು ಚೆಂದದವನದಂತೆ ಈಗ ದೇಶದ ಸಿನಿ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಸೆಟ್ಟೇರುವ ಪ್ರತಿ ಸ್ಟಾರ್‌ಗಳ ಸಿನಿಮಾವೂ ಈಗ ವರ್ಲ್ಡ್‌ವೈಡ್‌ ಬ್ಯುಸಿನೆಸ್ ಮಾಡುತ್ತಿದೆ. ಕ್ವಾಂಟಿಟಿ ಅಲ್ಲ ಕ್ವಾಲಿಟಿ ಕೊಡಬೇಕು ಎನ್ನುವ ಹಠ ಹಪಾಹಪಿ ಗಾಂಧಿನಗರದಲ್ಲಿ ಹೆಚ್ಚುತ್ತಿದೆ. ಈ ಧಾವಂತದಲ್ಲಿ ಒಳಗೊಳಗೇ ಮಸಲತ್ತುಗಳು ನಡೆದು ಗಿಡ ಇದ್ದ ಅಸಮಾಧಾನ ಹೆಮ್ಮರವಾಗಿ ಬೆಳೆಯಲಾರಂಭಿಸುತ್ತದೆ. ಅದಕ್ಕೆ ಕಾರಣ ಯಜಮಾನ ಇಲ್ಲದಿರುವುದೇ..?

ambarish 1

ಅಂಬರೀಶ್ ನಿಧನದ ಬಳಿಕ ಕಲಾವಿದರ ಸಂಘದ ಅಧ್ಯಕ್ಷರ ಸ್ಥಾನವನ್ನ ಇನ್ಯಾರಿಗೂ ತುಂಬಲಾಗಲಿಲ್ಲ. ಅದು ಸಹಜವೇ. ಅಂಬರೀಶ್ ನ್ಯಾಯ ತೀರ್ಮಾನ ಅಂಬಿ ಮಾತು ಎಂದರೆ ಎಲ್ಲರೂ ಒಪ್ಪುತ್ತಿದ್ದರು. ಯಾಕಂದ್ರೆ ಅಂಬಿ ಅಜಾತಶತ್ರು. ಎಲ್ಲರಿಗೂ ಬೇಕಾದವರು. ಎಲ್ಲರನ್ನೂ ಒಂದೇ ಸಮನೆ ಕಾಣುವವರು. ಅಂಬಿ ನೇತೃತ್ವದಲ್ಲಿ ಬಗೆ ಹರಿದ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಆದರೆ ಯಾವಾಗ ಅಂಬಿ ಕಾಲವಾದರೋ ಅಂದಿನಿಂದ ಯಜಮಾನರ ಸ್ಥಾನ ಖಾಲಿ ಇದೆ. ಆ ಜಾಗ ತುಂಬುವಂತೆ ದೊಡ್ಮನೆಯ ಹಿರಿಯಣ್ಣ ಶಿವಣ್ಣ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಬೇಡಿಕೆ ಬರುತ್ತಲೇ ಇರುತ್ತೆ. ಆದರೆ ಇದುವರೆಗೂ ಅದು ಯಾವ ಹಂತವನ್ನೂ ತಲುಪಿಲ್ಲ.

Ravichandran with Khushboo 2

ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವುದಾದರೆ ಸ್ಯಾಂಡಲ್‌ವುಡ್ ಒಂದು ಮನೆಯೂ ಅಲ್ಲ, ಕುಟುಂಬವೂ ಅಲ್ಲ. ಅದೊಂದು ಸಂಘ. ಆದರೆ ಕೌಟುಂಬಿಕ ವ್ಯವಸ್ಥೆಯ ನೆಲೆಗಟ್ಟಿನಲ್ಲಿ ಬದುಕುತ್ತಿರುವ ನಟ, ನಿರ್ಮಾಪಕ, ಕಲಾವಿದರ ಬಳಗಕ್ಕೆ ಯಜಮಾನ ಎಂಬ ವ್ಯಕ್ತಿಯ ಅವಶ್ಯಕತೆ ತೋರಿಸಿಕೊಟ್ಟಿದ್ದು ಡಾ.ರಾಜ್‌ಕುಮಾರ್. ಸಭೆ-ಸಮಾರಂಭ, ಸಂಭ್ರಮ-ಹೋರಾಟ ಏನೇ ಇದ್ದರೂ ಮುಂದಾಳತ್ವ ವಹಿಸಿಕೊಂಡು ಹಿರಿಯರಾಗಿ ಸಾಗುತ್ತಾ, ಸಾಗುವ ದಾರಿಯಲ್ಲಿ ಕಿರಿಯರನ್ನ ಸೇರಿಸಿಕೊಂಡು ಹೋಗುವುದನ್ನ ಕಲಿಸಿದ್ದಾರೆ. ಅದು ಗೌರವ. ಅದೇ ಕುಟುಂಬ. ಅದುವೇ ನಂಬಿಕೆ.

shivarajkumar with sudeep 3

ಡಾ.ರಾಜ್‌ ಕುಮಾರ್ ಬಳಿಕ ಆ ಸ್ಥಾನವನ್ನ ತುಂಬಿದ್ದು ಅಂಬರೀಶ್. ಆದರೆ ಅಂಬರೀಶ್ ಬಳಿಕ ಯಜಮಾನರ ಸ್ಥಾನದಲ್ಲಿ ನೋಡಲಾಗ್ತಿರೋದೇ ಶಿವರಾಜ್‌ಕುಮಾರ್‌ರನ್ನ. ಶಿವಣ್ಣ ಕೂಡ ಅಜಾತಶತ್ರು. ಎಲ್ಲರಿಗೂ ಬೇಕಾದವರು. ಎಲ್ಲರನ್ನೂ ಒಂದೇ ರೀತಿ ನೋಡುವವರು. ಎಲ್ಲರನ್ನೂ ಕೈ ಹಿಡಿದು ಮುನ್ನಡೆಸುವವರು. ಜೊತೆಗೆ ಹಿರಿಯರು, ಅನುಭವಸ್ಥರು. ಹೀಗಾಗೇ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಖಾಲಿ ಇರುವ ಜಾಗ ತುಂಬೋಕೆ ಶಿವಣ್ಣಗೆ ಬೇಡಿಕೆ ಬರ್ತಿದೆ. ಆದರೆ ಶಿವಣ್ಣ ಆ ಸ್ಥಾನದ ಮೇಲೆ ಒಲವಿಲ್ಲ ಎಂದು ಹೇಳಿಕೊಂಡೇ ಬಂದಿದ್ದಾರೆ. ಆದರೆ ಜನ ಬಿಡಬೇಕಲ್ಲ? ಈ ಬಾರಿ ಸಿಂಹದ ಮರಿಯನ್ನ ಯಜಮಾನರ ಸ್ಥಾನದಲ್ಲಿ ಕೂರಿಸಲೇಬೇಕೆನ್ನುವುದು ಸ್ಯಾಂಡಲ್‌ವುಡ್ ಅನೇಕರ ಪಟ್ಟು.

ghost 2

ಶಿವನಂತೆ ಶಿವಣ್ಣರದ್ದೂ ಕರಗೋ ಮನಸ್ಸು. ತಥಾಸ್ತು ಎಂದು ಬಿಡ್ತಾರೆ. ಹೀಗಾಗೇ ಎಲ್ಲರ ಬೇಡಿಕೆಯೂ ಒಂದೇ ಆದ ಪಕ್ಷದಲ್ಲಿ ಅದರ ಬಗ್ಗೆಯೂ ಗಮನ ಕೊಡ್ತೀನಿ ಎಂದಿದ್ದಾರೆ ಶಿವಣ್ಣ. ಅಲ್ಲದೇ ಈಗ ನಡೆಯುತ್ತಿರುವ ಸುದೀಪ್ ಹಾಗೂ ಕೆಲ ನಿರ್ಮಾಪಕರ ನಡುವಿನ ಗಲಾಟೆಗೂ ಒಂದು ವಾರದಲ್ಲಿ ಪರಿಹಾರ ಕಂಡುಕೊಳ್ಳೋದಾಗಿ ತಿಳಿಸಿದ್ದು ವಿಶೇಷ.

shivarajkumar with sudeep 1

ಕಿಚ್ಚ ಸುದೀಪ್ (Sudeep) , ಎನ್ ಕುಮಾರ್‌ (N. Kumar) ಇನ್ನೊಂದ್ಕಡೆ, ಹುಚ್ಚ ನಿರ್ಮಾಪಕ ರೆಹಮಾನ್ ಮತ್ತೊಂದ್ಕಡೆ ಜಾಕ್ ಮಂಜು ಎಲ್ಲವನ್ನೂ ನೋಡ್ತಿರುವ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘ…ಎಲ್ಲಿಂದ ಶುರುವಾಯ್ತು, ಎಲ್ಲಿಗೆ ಬಂತು. ದಿನದಿಂದ ದಿನಕ್ಕೆ ಒಂದೊಂದು ತಿರುವು. ಮಾತಿನ ಯುದ್ಧ. ಟಕ್ಕರ್. ಫೈಯರ್. ಕಿಚ್ಚು ಧಗಧಗಿಸುತ್ತಿದೆ. ಪೂರ್ತಿ ಸುಡೋಕೂ ಮುನ್ನ ನೀರು ಹಾಕೋವ್ರ ಅವಶ್ಯಕತೆ ಇದೆ. ಬಹುಶಃ ಸರಿಯಾಗಿ ಯಜಮಾನರಿಲ್ಲದ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಈ ಪರಿಸ್ಥಿತಿ ಬಂತಾ? ಕೋರ್ಟ್ ಕಟಕಟೆ, ಕಾನೂನು ಮೂಲಕ ಹೋರಾಟ ನಡೆಯುತ್ತಿದೆ. ಮಾನನಷ್ಟ, ಮಾನಹಾನಿ, ಸಂಭಾವನೆ, ಡೇಟ್ಸ್ ಎಲ್ಲ ಮಾತುಗಳೂ ಮುಗಿದುಹೋಗಿದೆ. ಕಡ್ಡಿ ಗುಡ್ಡವಾಗಿದೆ. ಇದನ್ನ ಶಮನ ಮಾಡೋದ್ಯಾರು..?

 

ಕೊನೆಗೂ ಈ ಬೆಂಕಿಯನ್ನ ತಣಿಸಲು ಶಿವಣ್ಣ ಎಂಟ್ರಿ ಆಗುತ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಯಾಕಂದ್ರೆ ಸಹೋದರ ಸಮಾನ ಕಿಚ್ಚ ಸುದೀಪ್ ಮೇಲೆ ಬಂದಿರೋ ಆರೋಪಕ್ಕೆ ಶಿವಣ್ಣ ನ್ಯಾಯಸಮ್ಮತ ತೀರ್ಮಾನಕ್ಕೆ ನಿಲ್ಲುವ ಸೂಚನೆ ಕಂಡುಬರುತ್ತಿದೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಇನ್ನೊಂದು ವಾರದಲ್ಲಿ ಮಹತ್ವದ ಬೆಳವಣಿಗೆಯಾದರೂ ಆಶ್ಚರ್ಯವಿಲ್ಲ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:ControversyN. Kumarshivaraj kumarsudeepಎನ್.ಕುಮಾರ್ವಿವಾದಶಿವರಾಜ್ ಕುಮಾರ್ಸುದೀಪ್
Share This Article
Facebook Whatsapp Whatsapp Telegram

Cinema News

Sumalatha
ಕೋರ್ಟ್‌ ಆದೇಶದ ಮುಂದೆ ನಾವೆಲ್ಲ ನಿಸ್ಸಹಾಯಕರು – ವಿಷ್ಣು ಸಮಾಧಿ ತೆರವಿಗೆ ನಟಿ ಸುಮಲತಾ ಬೇಸರ
Bengaluru City Cinema Districts Karnataka Latest Main Post Sandalwood
CHOWKIDAR
ಚೌಕಿದಾರ್ ಜಾಲಿ ಹಾಡಿಗೆ ಕುಣಿದ ಪೃಥ್ವಿ ಅಂಬಾರ್, ಸಾಥ್‌ ಕೊಟ್ಟ ಸಾಯಿ ಕುಮಾರ್
Cinema Latest Sandalwood Top Stories
Siri Ravikumar
`ಶೋಧ’ಕ್ಕಾಗಿ ಪವನ್ ಕುಮಾರ್ ಜೊತೆ ಒಂದಾದ ಸಿರಿ ರವಿಕುಮಾರ್
Cinema Latest
Sudeep
ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌
Bengaluru City Cinema Latest Main Post Sandalwood
Anirudh
ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ
Bengaluru City Cinema Districts Karnataka Latest Sandalwood Top Stories

You Might Also Like

Weather 1
Bengaluru City

ರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ – 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Public TV
By Public TV
15 minutes ago
Siddaramaiah Modi
Bengaluru City

ನಮ್ಮ ಮೆಟ್ರೋಗೆ ರಾಜ್ಯದ ಪಾಲೇ ಹೆಚ್ಚು – ಮೋದಿ ಎದುರೇ ಸಿದ್ದರಾಮಯ್ಯ ‘ಕ್ರೆಡಿಟ್‌’ ಕ್ಲೈಮ್

Public TV
By Public TV
15 minutes ago
PM Modi In Bengaluru
Bengaluru City

ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ

Public TV
By Public TV
32 minutes ago
Narendra Modi
Bengaluru City

ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

Public TV
By Public TV
35 minutes ago
M Lakshman
Districts

ಪ್ರತಾಪ್‌ ಸಿಂಹ ಮೊಬೈಲ್‌ SITಗೆ ಕೊಟ್ರೆ ಪ್ರಜ್ವಲ್‌ ರೇವಣ್ಣನಂತೆ ಜೈಲು ಶಿಕ್ಷೆ ಆಗುತ್ತೆ – ಎಂ.ಲಕ್ಷ್ಮಣ್ ಬಾಂಬ್‌

Public TV
By Public TV
48 minutes ago
Mantralaya Aradhana Mahotsava 3
Districts

ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ – ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?