ನವದೆಹಲಿ: ಮೇ 31 ರಂದು ವಿಶ್ವ ತಂಬಾಕು ದಿನ ಎಂದು ಆಚರಣೆ ಮಾಡುತ್ತೇವೆ. ಈ ದಿನ ತಂಬಾಕು ಸೇವನೆ ಮಾಡುವವರಿಗೆ ತನ್ನ ಮರಳು ಶಿಲ್ಪ ಕಲೆಯ ಮೂಲಕ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಒಳ್ಳೆಯ ಸಂದೇಶ ನೀಡಿದ್ದಾರೆ.
ಒಡಿಶಾದ ಜನಪ್ರಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಮರಳಿನಲ್ಲಿ ಮೇರುಕೃತಿಗಳನ್ನು ತಯಾರು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇಂದು ವಿಶ್ವ ತಂಬಾಕು ದಿನ ಇರುವ ಕಾರಣ ತಮ್ಮ ಮರಳು ಶಿಲ್ಪ ಕಲೆಯ ಮೂಲಕ “ತಂಬಾಕು ಸೇವನೆ ಬಿಡಿ ಜೀವ ಉಳಿಸಿಕೊಳ್ಳಿ” ಎಂಬ ಸಂದೇಶವನ್ನು ನೀಡಿದ್ದಾರೆ.
Today is #WorldNoTobaccoDay. My SandArt at Puri beach in Odisha with message #NoTobacco Save life.
Say #NoTobacco! ???? pic.twitter.com/f8NxgXHAEi
— Sudarsan Pattnaik (@sudarsansand) May 31, 2019
ತಂಬಾಕು ಸೇವನೆಯಿಂದ ಪ್ರಾಣಕ್ಕೆ ಹಾನಿಯಾಗುತ್ತದೆ ಎಂದು ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ಮೇ 31 ರಂದು ಪ್ರತಿ ವರ್ಷ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ.
#WorldNoTobaccoDay. My SandArt at Puri beach in Odisha with message #NoTobacco Save life.
Say #NoTobacco! ???? pic.twitter.com/P4XPMIEmrc
— Sudarsan Pattnaik (@sudarsansand) May 31, 2019
ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಬರುತ್ತವೆ. ಈ ರೀತಿಯ ಆಚರಣೆಯಿಂದ ತಂಬಾಕು ಸೇವನೆ ಮಾಡುವವರಿಗೆ ಒಳ್ಳೆಯ ಸಂದೇಶ ನೀಡಬೇಕು ಮತ್ತು ಜನರಲ್ಲಿ ತಂಬಾಕು ಸೇವನೆಯನ್ನು ಕಡಿಮೆ ಮಾಡಬೇಕು ಎಂಬುದು ಇದರ ಉದ್ದೇಶವಾಗಿದೆ.