ಮಂಗಳೂರು: ಅಮಿತ್ ಶಾ ಒಬ್ಬ ಬಂಡಲ್ ರಾಜ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಗ್ಗೆ ಟೀಕಿಸಿದ ವಿದ್ಯಾರ್ಥಿಗೆ ಕ್ಲಾಸ್ಗೆ ಬರಬೇಡ ಎಂದ ಹೇಳಿ ಸಸ್ಪೆಂಡ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವಿವೇಕಾನಂದ ಲಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಜಸ್ವೀನ್ ಸಸ್ಪೆಂಡ್ ಆಗಿರುವ ವಿದ್ಯಾರ್ಥಿ. ಫೆಬ್ರವರಿ 19ರಂದು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಅಮಿತ್ ಶಾ ಬಂದಿದ್ದರು. ಈ ಕಾರ್ಯಕ್ರಮದ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ವಿದ್ಯಾರ್ಥಿ, ಬಂಡಲ್ ರಾಜಾ ಅಮಿತ್ ಶಾ ಎಂದು ಬರೆದುಕೊಂಡಿದ್ದ.
ಹೀಗಾಗಿ 15 ದಿನ ಕ್ಲಾಸ್ ಅಟೆಂಡ್ ಆಗದಂತೆ ಜಸ್ವೀನ್ ಗೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದೆ.