ಹಾವೇರಿ: ಮೀನಿನ ಗಾಳಕ್ಕೆ ಸಿಕ್ಕಿ ನಾಗರಹಾವು ವಿಲವಿಲ ಒದ್ದಾಡಿದ ಘಟನೆ ಜಿಲ್ಲೆಯ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೇವಿನ ಬಣವೆ ಬಳಿ ಮೀನಿನ ಗಾಳವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ಮೀನಿನ ಗಾಳದಲ್ಲಿ ಕಪ್ಪೆಯೊಂದು ಸಿಲುಕಿ ಒದ್ದಾಡುತ್ತಿತ್ತು. ಕಪ್ಪೆಯನ್ನು ನೋಡಿದ ಹಾವು ಕಪ್ಪೆಯನ್ನು ನುಂಗಲು ಬಂದು ಗಾಳಕ್ಕೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು.
- Advertisement 2
ಹಾವು ಮೀನಿನ ಗಾಳದಲ್ಲಿ ಸಿಲುಕಿದ್ದನ್ನು ಕಂಡ ಸ್ಥಳೀಯರು ಉರಗ ತಜ್ಞ ಮಣಿ ಎಂಬವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಣಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಳದಿಂದ ನಾಗರಹಾವನ್ನು ರಕ್ಷಿಸಿದ್ದಾರೆ.
- Advertisement 3
https://youtu.be/usl_5aKr5sI