ಸ್ವರ್ಣವಲ್ಲಿ ಶ್ರೀಗಳ ಪೂರ್ವಾಶ್ರಮದ ಪಿತೃವಿಯೋಗ

Public TV
1 Min Read
Shree Swarnavalli Matha

ಕಾರವಾರ: ಉತ್ತರ ಕನ್ನಡದ ಶಿರಸಿಯ (Sirsi) ಸ್ವರ್ಣವಲ್ಲಿ ಮಠದ (Shree Swarnavalli Matha) ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಗೆ ಪೂರ್ವಾಶ್ರಮದ ಪಿತೃವಿಯೋಗವಾಗಿದೆ. ಅವರ ಪೂರ್ವಾಶ್ರಮದ ತಂದೆ ವೇ.ಶಿವರಾಮ ಭಟ್ಟ ನಡಗೋಡು ಅವರು ದೈವಾದೀನರಾಗಿದ್ದಾರೆ.

ಶಿವರಾಮ ಭಟ್ಟರು ನಿತ್ಯಾನುಷ್ಠಾನಿಕರಾಗಿ, ನಿಷ್ಠಾವಂತ ವೈದಿಕರಾಗಿ ಧರ್ಮವನ್ನು ಉಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ತಮ್ಮ ಜೀವನದ ಕರ್ತವ್ಯವನ್ನು ನಿರ್ವಹಿಸಿ ಸದ್ಗತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ನಟಿ ಲೀಲಾವತಿ ಅವರ ಒಂದು ತಿಂಗಳ ತಿಥಿ ಕಾರ್ಯ

ಅವರು ಮೂರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹವ್ಯಕ ವಿಧಿ ವಿಧಾನದ ಮೂಲಕ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್ ಚುನಾವಣೆಗೆ ಹೈಕೋರ್ಟ್ ಆದೇಶ – ಜಿಟಿಡಿ, ಸಿಎಂ ವಾರ್‌ಗೆ ಅಖಾಡ ಫಿಕ್ಸ್

Share This Article