ಪರ್ವೇಜ್ ಮುಷರಫ್ ಶಾಂತಿಗೆ ಶ್ರಮಿಸಿದ ವ್ಯಕ್ತಿ – ಶಶಿ ತರೂರ್ ಹೇಳಿಕೆಗೆ ಬಿಜೆಪಿ ಗರಂ

Public TV
1 Min Read
ShaShi Taroor

ಲಕ್ನೋ: ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಸಾವಿನ ಕುರಿತಾಗಿ ಕಾಂಗ್ರೆಸ್ ನೇತಾರ ಶಶಿ ತರೂರ್ (Shashi Tharoor) ನೀಡಿದ ಹೇಳಿಕೆಗೆ ಬಿಜೆಪಿ ಗರಂ ಆಗಿದೆ.

ಮುಷರಫ್‌ನನ್ನ ಶಾಂತಿದೂತನಿಗೆ ಹೋಲಿಸಿದ್ದಕ್ಕೆ ಕೇಸರಿ ಪಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ದೇಶದ ಸೈನಿಕರನ್ನ ಚಿತ್ರಹಿಂಸೆಗೆ ಗುರಿಮಾಡಿದ ವ್ಯಕ್ತಿಯನ್ನು ಶಾಂತಿಗಾಗಿ ಶ್ರಮಿಸಿದ ವ್ಯಕ್ತಿ ಎನ್ನಲು ಹೇಗಾದ್ರೂ ಮನಸ್ಸು ಬರುತ್ತೆ ಎಂದು ಬಿಜೆಪಿ (BJP) ಕಿಡಿಕಾರಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

Pervez Musharraf

ಇದಕ್ಕೆ ಶಶಿ ತರೂರ್ (Shashi Tharoor) ಮತ್ತೆ ತಿರುಗೇಟು ನೀಡಿದ್ದಾರೆ. ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡಿರುವ ಶಶಿ ತರೂರ್, ಸತ್ತವರ ಬಗ್ಗೆ ಎರಡು ಒಳ್ಳೆ ಮಾತುಗಳನ್ನು ಆಡಬೇಕೆಂಬ ಪರಂಪರೆ ನಮ್ಮ ದೇಶದಲ್ಲಿದೆ. ಮುಷರಫ್ ಬದ್ಧ ಶತ್ರು ಆಗಿರಬಹುದು, ಕಾರ್ಗಿಲ್ ಯುದ್ಧದ (Kargil War) ಕಾರಣಕರ್ತನೂ ಆಗಿರಬಹುದು. ಆದರೂ 2002ರಿಂದ 2007ರವರೆಗೂ ಭಾರತದ ಜೊತೆ ಶಾಂತಿಗಾಗಿ ಮುಷರಫ್ ಪ್ರಯತ್ನಿಸಿದ್ದರು ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಫೆಬ್ರವರಿ 5ರಂದು ನಿಧನರಾದ ಪರ್ವೇಜ್ ಮುಷರಫ್ ಮೃತದೇಹವನ್ನು ಪಾಕಿಸ್ತಾನಕ್ಕೆ ತರಲಾಗಿದ್ದು, ಫೆಬ್ರವರಿ 7ರಂದು ಕರಾಚಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *