ಮೈಸೂರು: ನಿನ್ನೆಯ ಘಟನೆಯ ಬಗ್ಗೆ ಚಾಮುಂಡಿ ದೇವಿ ಮುಂದೆ ಹಾಗೂ ನಾಡಿನ ಜನರ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಾಚಿವ ಸಾರಾ ಮಹೇಶ್ ಕ್ಷಮೆಯಾಚಿಸಿದ್ದಾರೆ.
ಅಣೆ – ಪ್ರಮಾಣದ ಬಳಿಕ ಇವತ್ತು ಚಾಮುಂಡಿ ಬೆಟ್ಟಕ್ಕೆ ಮತ್ತೆ ಬಂದ ಮಾಜಿ ಸಚಿವ ಸಾರಾ ಮಹೇಶ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ರಾಜಕಾರಣಕ್ಕೆ ತಾಯಿ ಸನ್ನಿಧಾನವನ್ನು ಬಳಸಿಕೊಂಡು ತಪ್ಪು ಮಾಡಿದ್ದೇವೆ. ನನಗೆ ಇಡೀ ಘಟನೆ ಬಗ್ಗೆ ಪ್ರಾಯಶ್ತಿತವಾಗಿ ನನ್ನನ್ನು ಕ್ಷಮಿಸಿ ಅಂತಾ ದೇವಿಯಲ್ಲಿ ಕೋರಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ವೈಶಂಪಾಯನ ಡ್ರಾಮಾ – ದುರ್ಯೋಧನನಿಗೆ ಹೋಲಿಸಿ ವಿಶ್ವನಾಥ್ ವಾಗ್ದಾಳಿ
ಇವತ್ತು ಶುಕ್ರವಾರ, ಚಾಮುಂಡೇಶ್ವರಿ ತಾಯಿಯನ್ನು ನಾವೆಲ್ಲರು ನಂಬಿದ್ದೇವೆ. ಮನ್ನಸ್ಸಿಗೆ ಆತ್ಮ ಸಾಕ್ಷಿಗೆ ನೋವಾದಾಗ, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದಾಗ, ಸಾಕ್ಷಿಗಳು ಬಂದು ಹೇಳದಿದ್ದಾಗ ಎಷ್ಟೇ ದೊಡ್ಡವರಾದರೂ ದೇವರ ಮೊರೆಹೋಗುತ್ತಾರೆ. ಹೀಗಿರುವಾಗ ರಾಜಕಾರಣದ ವಿಚಾರದಲ್ಲಿ ನಾವು ತಾಯಿ ಚಾಮುಂಡೇಶ್ವರಿ ತಾಯಿ ಹೆಸರನ್ನು ತರುವಂತಹ ಕೆಲಸ ಮಾಡಿದ್ದೇವೆ. ಇದು ನನ್ನ ಮನಸ್ಸಿಗೆ ಒಪ್ಪಲಿಲ್ಲ. ಆದ್ದರಿಂದ ಮತ್ತೊಮ್ಮೆ ತಾಯಿಯ ದರ್ಶನ ಪಡೆದು ಕ್ಷಮೆ ಕೇಳಿ, ರಾಜ್ಯದ ಜನತೆಗೂ ಕ್ಷಮೆ ಕೋರಿ ಪೂಜೆಯನ್ನು ಮಾಡಿಸಲು ನಾನು ಬಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:ಆಣೆ ಮಾಡಿ ಕಣ್ಣೀರು ಹಾಕಿದ ಮಹೇಶ್ – ಸಾರಾ ವಿರುದ್ಧ ವಿಶ್ವನಾಥ್ ಮತ್ತೆ ಕಿಡಿ
ಎಲ್ಲರಿಗೂ ಒಳ್ಳೆಯದನ್ನ ಮಾಡು, ಸತ್ಯಾಸತ್ಯತೆಯನ್ನ ನಿನ್ನ ಮುಂದೆ ಇಟ್ಟಿದ್ದೇನೆ. ನೀನೇ ತೀರ್ಮಾನ ಮಾಡಮ್ಮ ಎಂದು ನಿನ್ನೆಯೂ ಬೇಡಿಕೊಂಡಿದ್ದೆ, ಇಂದು ಅದೇ ಬೇಡಿದ್ದೇನೆ. ನನಗೆ ಒಂದು ತಿಂಗಳಿಂದಲೇ ಪ್ರಾಯಶ್ಚಿತವಾಗಿದೆ. ನಿನ್ನೆ ನಡೆದ ಘಟನೆಯಿಂದ ನೋವಾಗಿದೆ ಹೀಗಾಗಿ ದೇವರಲ್ಲಿ ಹಾಗೂ ಜನರಲ್ಲಿ ನಾನು ಕ್ಷಮೆಕೋರುತ್ತೇನೆ ಎಂದರು.