ಭೋಪಾಲ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರ ಆಪ್ತರಾಗಿದ್ದ ಸಮಂದರ್ ಪಟೇಲ್ (Samandar Patel) ಅವರು ಬಿಜೆಪಿ (BJP) ತೊರೆದು ಮತ್ತೆ ಕಾಂಗ್ರೆಸ್ (Congress) ಸೇರಿದ್ದಾರೆ. ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ (Kamal Nath) ಅವರ ಸಮ್ಮುಖದಲ್ಲಿ ಪಟೇಲ್ ತಮ್ಮ ಭಾರೀ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
1,200 ಕಾರುಗಳ ಬೆಂಗಾವಲಿನೊಂದಿಗೆ ಸಮಂದರ್ ಪಟೇಲ್ ತಮ್ಮ ಕ್ಷೇತ್ರವಾದ ಜವಾದ್ನಿಂದ ಭೋಪಾಲ್ಗೆ ತೆರಳಿ ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸೇರಿದ್ದಾರೆ. 1,200ಕ್ಕೂ ಹೆಚ್ಚು ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಗೆ ತೆರಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ
- Advertisement 2
- Advertisement 3
ಬಿಜೆಪಿ ಪಕ್ಷ ನನಗೆ ಉಸಿರುಗಟ್ಟಿಸಿದೆ ಎಂದು ಸಮಂದರ್ ಪಟೇಲ್ ಆರೋಪಿಸಿದ್ದಾರೆ. ಕಳೆದ 3 ತಿಂಗಳ ಅವಧಿಯಲ್ಲಿ ಕಾರ್ ರ್ಯಾಲಿಗಳ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರಲ್ಲಿ ಸಮಂದರ್ ಪಟೇಲ್ ಮೂರನೆಯವರು ಎಂದು ತಿಳಿದುಬಂದಿದೆ. ನೀಮುಚ್ ಪ್ರದೇಶದಲ್ಲಿ ತಮ್ಮದೇ ಆದ ಹಿಡಿತವನ್ನು ಸಾಧಿಸಿದ್ದ ಸಮಂದರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದರಿಂದ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಇದನ್ನೂ ಓದಿ: ದ್ವಾರಕಾ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ
- Advertisement 4
ಇದಕ್ಕೂ ಮೊದಲು ಜೂನ್ 14ರಂದು ಶಿವಪುರಿ ಬಿಜೆಪಿ ನಾಯಕ ಬೈಜನಾಥ್ ಸಿಂಗ್ ಯಾದವ್ ಅವರು ಸಿಂಧಿಯಾ ಅವರೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಸಂದರ್ಭ 700 ಕಾರ್ಗಳ ರ್ಯಾಲಿಯನ್ನು ನಡೆಸಿದ್ದರು. ನಂತರ ಜೂನ್ 26ರಂದು ಬಿಜೆಪಿ ಶಿವಪುರಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ಗುಪ್ತಾ ಅವರು ಇದೇ ರೀತಿ ರ್ಯಾಲಿ ನಡೆಸಿ ಬಿಜೆಪಿ ತೊರೆದಿದ್ದರು. ಇದನ್ನೂ ಓದಿ: Rajasthan: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸಮಿತಿ ರಚಿಸಿದ ರಾಜಸ್ಥಾನ ಸಿಎಂ
ಸಖಲೇಚಾ ಅವರ ಪಾಳಯದಿಂದ ನನ್ನ ಬೆಂಬಲಿಗರು ನಿರಂತರವಾಗಿ ಅವಮಾನಕ್ಕೊಳಗಾಗಿದ್ದಾರೆ. ಸಣ್ಣಪುಟ್ಟ ಜಗಳಗಳ ಮೇಲೆ ಅವರ ಮೇಲೆ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಿಂದಾಗಿ ನಾನು ಬಿಜೆಪಿ ತೊರೆಯುವ ನಿರ್ಧಾರ ಮಾಡಿದೆ ಎಂದು ಸಮಂದರ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಎಲ್ಲ ಸಂಸ್ಥೆಗಳಲ್ಲೂ RSS ತನ್ನ ಜನರನ್ನಿರಿಸಿದೆ – ರಾಹುಲ್ ಗಾಂಧಿ ಆರೋಪ
Web Stories