ಬೋಜೇಗೌಡರನ್ನು ಮರಳಲ್ಲಿ ಹೂತ ಸಾರಾ ಮಹೇಶ್!

Public TV
1 Min Read
udp sara mahesh

ಉಡುಪಿ: ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರು ಬೀಚ್‍ನಲ್ಲಿ ಸುಡು ಬಿಸಿಲಿನಲ್ಲಿ ಮರಳಿನಲ್ಲಿ ಶಾಸಕ ಬೋಜೇಗೌಡರನ್ನು ಸ್ಯಾಂಡ್ ಥೆರಪಿಗಾಗಿ ಹೂತುಹಾಕಿದ್ದಾರೆ.

ಚುನಾವಣಾ ಪ್ರಚಾರದ ಬಳಿಕ ಸಿಎಂ, ಮಾಜಿ ಪಿಎಂ ಜೊತೆ ಸಚಿವರು ಜೆಡಿಎಸ್ ಶಾಸಕರು ಉಡುಪಿಯ ಸಾಯಿರಾಧ ಹೆಲ್ತ್ ರೆಸಾರ್ಟ್ ನಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಉಡುಪಿಯ ಕಾಪುವಿನ ಮೂಳೂರು ರೆಸಾರ್ಟಿ ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ವರಿಷ್ಠರಿಗೆ ಜೆಡಿಎಸ್ ನಾಯಕರು, ಸಚಿವರು ಸಾಥ್ ಕೊಟ್ಟಿದ್ದಾರೆ.

udp sara mahesh 1

ಈ ಸಂದರ್ಭ ಸ್ಯಾಂಡ್ ಥೆರಪಿ ಪಡೆಯುತ್ತಿದ್ದ ಬೋಜೇಗೌಡರನ್ನು ಸಾರಾ ಮಹೇಶ್ ಅವರು ಮರಳಿನಲ್ಲಿ ಹೂತು ಹಾಕಿದ್ದರು. ಸ್ಯಾಂಡ್ ತೆರೆಪಿ ಬಳಿಕ ಸುಡುವ ಮರಳಿನಿಂದ ಪಾರಾಗಲು ಬೋಜೇಗೌಡರು ಸಮುದ್ರಕ್ಕೆ ಹಾರಿದರು.

ಈ ವೇಳೆ ಸಾರಾ ಮಹೇಶ್ ಹಾರೆಯಿಂದ ಬೊಜೇಗೌಡರಿಗೆ ತಲೆಯವರೆಗೆ ಮರಳು ಹಾಕುತ್ತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸುಡು ಬಿಸಿಲಿಗೆ ಮರಳು ಬಿಸಿಯಾಗಿದ್ದು, ಮರಳಿನಲ್ಲಿದ್ದ ಬೋಜೇಗೌಡರು ಎದ್ದು ಬಿದ್ದು ಸಮುದ್ರದ ಕಡೆ ಓಡಿ ಸಮುದ್ರಸ್ನಾನ ಮಾಡಿದರು. ಈ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *