ಅಂಬುಲೆನ್ಸ್‌ನಲ್ಲಿ ಮೃತದೇಹ ಹೊತ್ತು ಹೋಗುತ್ತಿದ್ದ ಸಂಬಂಧಿಕರು ಆಸ್ಪತ್ರೆ ಪಾಲು

Public TV
1 Min Read
Ambulance Hospital Chikkaballapur Accident

ಚಿಕ್ಕಬಳ್ಳಾಪುರ: ಮೃತದೇಹ ಹೊತ್ತು ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತಕ್ಕೀಡಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ.

Ambulance Hospital Chikkaballapur Accident 2

ಯಾದಗಿರಿ ಮೂಲದ ವ್ಯಕ್ಯಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಮೃತನ ಕುಟುಂಬ ಬೆಂಗಳೂರಿನಿಂದ ಅಂಬುಲೆನ್ಸ್‌ ಮುಖಾಂತರ ಸ್ವಗ್ರಾಮ ಯಾದಗಿರಿಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಯೂ-ಟರ್ನ್ ಮಾಡಲು ಟಿಪ್ಪರ್ ಲಾರಿಯೊಂದು ತಕ್ಷಣ ಬ್ರೇಕ್ ಹಾಕಿ ತಿರುವು ಪಡೆದಿದೆ. ಇದನ್ನೂ ಓದಿ:  ಪ್ರವೀಣ್ ನೆಟ್ಟಾರು ಹತ್ಯೆ – ಕರ್ನಾಟಕ ಕಾಂಗ್ರೆಸ್ SDPI, PFI ಗೆ ಪ್ರೋತ್ಸಾಹ ನೀಡುತ್ತಿದೆ: ಜೋಶಿ

Ambulance Hospital Chikkaballapur Accident 1

ಈ ವೇಳೆ ಟಿಪ್ಪರ್ ಹಾಗೂ ಅಂಬುಲೆನ್ಸ್‌ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅಂಬುಲೆನ್ಸ್‌ನಲ್ಲಿದ್ದ ಮೃತನ ಸಂಬಂಧಿಕರು ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *