ನಟಿ ರಶ್ಮಿಕಾ ಮಂದಣ್ಣ (Rashmika Mandanna) ಎಲ್ಲಾ ರಂಗದಲ್ಲೂ ಅವಕಾಶಗಳನ್ನ ಬಾಚಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಬಣ್ಣ ಹಚ್ತಿದ್ದಾರೆ. ಶ್ರಮದ ಜೊತೆ ಅದೃಷ್ಟ ಕೂಡ ಕೈಹಿಡಿದಿದೆ. ಹೀಗಿರುವಾಗ ಸಿನಿಮಾಗಳ ಜೊತೆ ಸದಾ ವಿವಾದಗಳ ವಿಷ್ಯವಾಗಿಯೂ ಕಿರಿಕ್ ಬ್ಯೂಟಿ ಸಖತ್ ಸದ್ದು ಮಾಡ್ತಿರುತ್ತಾರೆ. ಇಷ್ಟೇಲ್ಲಾ ಕಿರಿಕ್ ಆಗಲು ಕಾರಣವೇನು ಎಂಬುದನ್ನ ಈ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.
ಅಮಿತಾಭ್ ಬಚ್ಚನ್, ದಳಪತಿ ವಿಜಯ್, ನಾನಿ, ಸಿದ್ಧಾರ್ಥ್ ಮಲ್ಹೋತ್ರಾ, ಅಲ್ಲು ಅರ್ಜುನ್, ರಣ್ಬೀರ್ ಕಪೂರ್ ಹೀಗೆ ಸಾಲು ಸಾಲು ಸೂಪರ್ ಸ್ಟಾರ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಯಶಸ್ಸಿನ ಮೆಟ್ಟಿಲನ್ನ ಏರುತ್ತಿದ್ದಾರೆ. ಜೊತೆಗೆ ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿಗೆ (Contraversy) ನಟಿ ತುತ್ತಾಗುತ್ತಿದ್ದಾರೆ. ಅದ್ಯಾಕೆ ಈ ರೀತಿ ಆಗುತ್ತಿದೆ ಎಂಬುದನ್ನ ಸ್ವತಃ ರಶ್ಮಿಕಾ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನನ್ನ ಹೆಸರು ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಂಡಿರುತ್ತದೆ ಎಂದಿರುವ ರಶ್ಮಿಕಾ, ಇದಕ್ಕೆ ಮುಖ್ಯ ಕಾರಣ, ನನಗೆ ಸರಿಯಾಗಿ ಸಂಹವನ ಮಾಡಲು ಅಥವಾ ತಾನು ಅಂದುಕೊಂಡಿದ್ದನ್ನು ಸರಿಯಾದ ರೀತಿಯಲ್ಲಿ ಹೇಳಲು ಬರದೇ ಇರುವುದೇ ಕಾರಣ ಎಂದಿದ್ದಾರೆ. ನಾನು ಅಂದುಕೊಂಡಿರುವ ವಿಷಯವನ್ನು ಸರಿಯಾಗಿ ಎದುರಿರುವವರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಹೆಚ್ಚು ವಿವಾದಗಳಾಗುತ್ತಿವೆ ಎಂದಿದ್ದಾರೆ.
ನಾನು ಆಡಿದ ಮಾತುಗಳನ್ನು ಸದಾ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಅಥವಾ ತಪ್ಪಾಗಿ ಜನರಿಗೆ ತಲುಪುತ್ತಿದೆ. ಇದಕ್ಕೆ ಕಾರಣ ನನ್ನ ಕಳಪೆ ಸಂಹವನ ಎಂದು ಒಪ್ಪಿಕೊಂಡಿದ್ದಾರೆ ರಶ್ಮಿಕಾ. ಇದಕ್ಕೆ ತಾಜಾ ಉದಾಹರಣೆಯನ್ನೂ ನೀಡಿರುವ ನಟಿ, ದಕ್ಷಿಣದಕ್ಕಿಂತಲೂ ಬೆಟರ್ ರೊಮ್ಯಾಂಟಿಕ್ ಹಾಡುಗಳು ಹಿಂದಿಯಲ್ಲಿವೆ ಎಂದು ನಾನು ಹೇಳಿದ್ದೆ. ಆದರೆ ದಕ್ಷಿಣದ ಅದ್ಭುತ ರೊಮ್ಯಾಂಟಿಕ್ ಹಾಡುಗಳನ್ನು ಮರೆಯುವಷ್ಟು ದಡ್ಡಿ ನಾನಲ್ಲ, ಆದರೆ ಅದನ್ನು ಬ್ಯಾಲೆನ್ಸಿಂಗ್ ಆಗಿ ಹೇಳಲು ನನಗೆ ಬರಲಿಲ್ಲ ಎಂದು ರಶ್ಮಿಕಾ ಈ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ: ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ
ಇನ್ನೂ ವಿಜಯ್ ಮತ್ತು ರಶ್ಮಿಕಾ ನಟನೆಯ `ವಾರಿಸು’ (Varisu Film) ಈಗಾಗಲೇ ತೆರೆಗೆ ಅಪ್ಪಳಿಸಿದೆ. ಅಭಿಮಾನಿಗಳಿಂದ ಸಿನಿಮಾಗೆ ಮೆಚ್ಚುಗೆಯ ಮಾತುಗಳು ಬಂದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k