`ಬಾಹುಬಲಿ’ ನಿರ್ದೇಶಕನ ಗ್ಯಾಂಗ್‌ಗೆ ಮತ್ತೆ ಕಿಚ್ಚನ ಎಂಟ್ರಿ.!

Public TV
1 Min Read
SUDEEP

ಕಿಚ್ಚ ಸುದೀಪ್ ಅಭಿನಯದ `ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಕೆಲಸದಲ್ಲಿ ಕಿಚ್ಚ ಸುದೀಪ್ ಆ್ಯಂಡ್ ಟೀಮ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್‌ಗೆ ಬಾಹುಬಲಿ ನಿರ್ದೇಶಕನಿಂದ ಬುಲಾವ್ ಬಂದಿದೆ.

ACTOR SUDEEP

ಭಿನ್ನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಸುದೀಪ್ ನಟನೆಯಲ್ಲಿ ಚಕ್ರವರ್ತಿ, ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ನಟಿಸಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಸದ್ಯ `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಸುದೀಪ್‌ಗೆ ಮತ್ತೆ ರಾಜಮೌಳಿ ಕ್ಯಾಂಪ್‌ನಿಂದ ಕರೆ ಬಂದಿದೆ. ಹೊಸ ಚಿತ್ರದ ವಿಷ್ಯವಾಗಿ ಮಾತನಾಡಲು ರೈಟರ್‌ ವಿಜಯೇಂದ್ರ ಪ್ರಸಾದ್‌ ಕಡೆಯಿಂದ ಕಿಚ್ಚನಿಗೆ ಬುಲಾವ್ ಬಂದಿದೆ. ಅಷ್ಟೇ ಅಲ್ಲ, ಈ ವಿಷ್ಯವಾಗಿ ಮಾತುಕಥೆ ನಡೆಸಲು ಕಿಚ್ಚ ಕೂಡ ಹೈದರಾಬಾದ್‌ಗೆ ಹಾರಿದ್ದಾರೆ. ಇದನ್ನೂ ಓದಿ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ: 21 ಸಿಟಿಗಳಲ್ಲಿ ಚಾರ್ಲಿ-777 ಪ್ರೀಮಿಯರ್

ss rajamouli

ಈಗಾಗಲೇ ರಾಜಮೌಳಿ ಜತೆ ಈಗ, ಬಾಹುಬಲಿ ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಜತೆ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲು ರಾಜಮೌಳಿ ಕಡೆಯಿಂದ ಕರೆ ಬಂದಿದೆ. ಜಕ್ಕಣ್ಣನ ಜೊತೆ ಮೊದಲ ಚಿತ್ರದಿಂದ ಇಂದಿನವೆರಗೂ ಒಳ್ಳೆಯ ಬಾಂದವ್ಯವಿರುವ ಕಿಚ್ಚನಿಗಾಗಿ ಮತ್ತೆ ಹೊಸ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲು ರೆಡಿಯಾಗಿದ್ದಾರೆ. ರಾಜಮೌಳಿ ತಂದೆ ಖ್ಯಾತ ರೈಟರ್ ವಿಜಯೇಂದ್ರ ಪ್ರಸಾದ್ ಕರೆ ಮಾಡಿ, ಸುದೀಪ್ ಜತೆ ಮಾತುಕಥೆ ನಡೆಸಿದ್ದಾರೆ.

KICCHA SUDEEP

ಸದ್ಯ ರಾಜಮೌಳಿ ಆರ್‌ಆರ್‌ಆರ್ ಸಕ್ಸಸ್ ನಂತರ ಮಹೇಶ್ ಬಾಬುಗೆ ನಿರ್ದೇಶನ ಮಾಡ್ತಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೋ ಅಥವಾ ಕಿಚ್ಚನಿಗಾಗಿ ಮತ್ತೊಂದು ಚಿತ್ರ ಮಾಡುತ್ತಿದ್ದಾರೋ ಅನ್ನೋದರ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಸುದೀಪ್‌ಗಾಗಿ ಒಂದು ಕಥೆ ರೆಡಿ ಮಾಡಿರೋದಂತೂ ಗ್ಯಾರೆಂಟಿ. ಈ ಎಲ್ಲದರ ಕುರಿತು ಚಿತ್ರತಂಡ ಅಧಿಕೃತ ಅನೌನ್ಸ್ ಮಾಡುವವರೆಗೂ ಕಾಯಲೇಬೇಕು.

Share This Article
Leave a Comment

Leave a Reply

Your email address will not be published. Required fields are marked *