– ಸಂಸದರಾಗಲು ಅಯೋಗ್ಯ; ಬಿಜೆಪಿ ಟೀಕೆ
ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ (Parliament) ಆವರಣದಲ್ಲಿ ರೈಲ್ವೇ ಇಲಾಖೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟುಗೆ (Ravneet Singh Bittu) `ವಿಶ್ವಾಸಘಾತುಕ’ ಅಂತ ನಿಂದಿಸಿರೋದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಚೀನಾ ಅತಿಕ್ರಮಣ ಬಗ್ಗೆ ಚರ್ಚೆ ವಿಚಾರವಾಗಿ ಇಂಡಿ ಕೂಟದ 8 ಸಂಸದರನ್ನು ಅಮಾನತುಗೊಳಿಸಿರೋದನ್ನು ಖಂಡಿಸಿ ಇಂಡಿಕೂಟದ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ, ಸಂಸತ್ತಿಗೆ ಬರುತ್ತಿದ್ದ ರವನೀತ್ ಬಿಟ್ಟುರನ್ನು ನೋಡಿದ ರಾಹುಲ್, `ಇಲ್ಲೊಬ್ಬ ವಿಶ್ವಾಸಘಾತುಕ’ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದರು. ಅಲ್ಲದೆ, ಹಲೋ ಬ್ರದರ್, ನನ್ನ ವಿಶ್ವಾಸಘಾತುಕ’ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್ಗೆ ಬರುತ್ತೀರಾ ಅಂದಿದ್ದಾರೆ. ಈ ವೇಳೆ, ಶೇಕ್ ಹ್ಯಾಂಡ್ ಮಾಡದ ಸಚಿವ ಬಿಟ್ಟು, ನೀವು `ದೇಶದ ಶತ್ರು’ ಅಂತ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ, ಯುದ್ಧವನ್ನು ಗೆದ್ದಂತೆ ಕುಳಿತಿದ್ದಾರೆ ಎಂದು ಪ್ರತಿಭಟನಾನಿರತ ಸಂಸದರ ಕಡೆಗೆ ತಿರುಗಿ ಹೇಳಿದ್ದಾರೆ. ಇದನ್ನೂ ಓದಿ: U19 World Cup: ಆರನ್ ಜಾರ್ಜ್ ಶತಕ – ದಾಖಲೆಯ ಚೇಸ್ನೊಂದಿಗೆ ಫೈನಲ್ಗೆ ಭಾರತ ಲಗ್ಗೆ
ವಿವಾದದ ಬಳಿಕ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದೆ. ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಬಿಡದಿರುವಾಗ ನಾವೇನು ಮಾಡಲು ಸಾಧ್ಯ? ಬಿಟ್ಟು ಅವರನ್ನು ಸಂಸದರನ್ನಾಗಿಸಿದ್ದು ಯಾರು? ದ್ರೋಹಿ ಬಗ್ಗೆ ಇನ್ನೇನು ಹೇಳಲಿ? ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ. ಈ ಮಧ್ಯೆ, ರಾಹುಲ್ ಗಾಂಧಿ ಸಂಸದರಾಗಲು ಅಯೋಗ್ಯ. ಸಿಖ್ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಅಂತ ಬಿಜೆಪಿ ಕೆಂಡಕಾರಿದೆ. ಇದನ್ನೂ ಓದಿ: ನಾನು ಜೀವನದ ಕೊನೆಗಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ ಕರ್ನಾಟಕ ರಕ್ಷಿಸಿ: ಹೆಚ್ಡಿಡಿ

